ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಗಂಗಾಮತ ಬೀದಿಯ ಗಂಗಾ ಪರಮೇಶ್ವರಿ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಕುಮಾರ್ ಬಾಯ್ಸ್ ವತಿಯಿಂದ ಪುನೀತ್ ರಾಜ್ಕುಮಾರವರ ಮೂರನೇ ವರ್ಷದ ಪುಣ್ಯತಿಥಿ ಅಂಗವಾಗಿ ನಡೆದ ಅಪ್ಪು ಉತ್ಸವದಲ್ಲಿ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ದೇಶಾದ್ಯಂತ ಪುನೀತ್ರವರ ಪುಣ್ಯಸ್ಮರಣೆ ನಡೆಯುತ್ತಿದೆ. ಅಪ್ಪು ಅವರ ಸೇವೆ ಅನನ್ಯ. ಕನ್ನಡ ಚಿತ್ರರಂಗದ ಸೇವೆ ಜೊತೆಗೆ ಸಮಾಜಕ್ಕೆ ಕಾಣದ ರೀತಿಯಲ್ಲಿ ಹಲವು ಮಂದಿಗೆ ಸಹಾಯ ಹಸ್ತ ನೀಡಿರುವ ಪುನೀತ್ ನಡೆ ಇಂದಿನ ಯುವ ಸಮೂಹಕ್ಕೆ ಸ್ಫೂರ್ತಿಯಾಗಿದೆ ಎಂದರು.ಡಾ.ರಾಜ್ ಕುಟುಂಬಕ್ಕೂ ಮಳವಳ್ಳಿ ತಾಲೂಕಿಗೂ ಅವಿನಾಭಾವ ಸಂಬಂಧವಿದೆ. ಪ್ರತಿವರ್ಷ ರಾಜ್ಕುಮಾರ್ ಕುಟುಂಬ ಮುತ್ತತ್ತಿ ಹಾಗೂ ಶಿವನಸಮುದ್ರ ಮಾರಮ್ಮ ದೇವರಿಗೆ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಅವರ ಕುಟುಂಬ ಸದಸ್ಯರೊಂದಿಗೆ ಇಲ್ಲಿನ ಅಭಿಮಾನಿಗಳು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ರಾಶಿರಾಪು ಕೃಷ್ಣ, ಪುರಸಭೆ ಸದಸ್ಯರಾದ ನಾಗೇಶ್, ಎಂ.ಎನ್ ಶಿವಸ್ವಾಮಿ, ಮುಖಂಡರಾದ ಯಜಮಾನ್ ರಾಮಸ್ವಾಮಿ, ಅಣ್ಣಯ್ಯ, ಪ್ರಭು, ಬಸಪ್ಪ, ಕಂಬರಾಜು, ಜಗದೀಶ್, ನಂಜುಂಡ, ಶ್ರೀನಿವಾಸ್,ರವಿ, ಪರಮೇಶ್, ಮಹದೇವು, ಶಿವಕುಮಾರ್, ವೇಣು, ಉಮೇಶ್,ಗುಡ್ಟಪ್ಪ ಮಹದೇವಪ್ಪ, ಉಂತೂರ, ಪುಟ್ಟಸ್ವಾಮಿ, ಪ್ರೇಸ್ ವೆಂಟಕಸ್ವಾಮಿ ಸೇರಿದಂತೆ ಇತರರು ಇದ್ದರು.