ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಅವರ ಆದರ್ಶ ಶಾಲೆಯಲ್ಲಿ ಅಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಮಹದೇಶ್ವರ ವನ್ಯಧಾಮದಲ್ಲಿ ರೈತರ ಹಸು ಹುಲಿ ತಿಂದಿದೆ ಎಂಬ ಕಾರಣಕ್ಕೆ ಆರೈತ ಕುಟುಂಬ ಸತ್ತ ಹಸುವಿಗೆ ಕ್ರಿಮಿನಾಶಕ ಸಿಂಪಡಿಸಿ ಹುಲಿಗಳ ಸಾವಿಗೆ ಕಾರಣವಾದದ್ದು ಘೋರ ದುರಂತ. ಇದು ರಾಷ್ಟ್ರಮಟ್ಟದಲ್ಲೂ ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದೆ ವಿಚಾರವನ್ನು ಸರ್ಕಾರ ಗಮನದಲ್ಲಿಟ್ಟುಕೊಂಡು ಇಲಾಖಾ ಸಿಬ್ಬಂದಿಗೆ ವೇತನ ನೀಡಿರಲಿಲ್ಲ ಎಂಬ ಕಾರಣಕ್ಕೆ ಕೆಲ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ.
ಈ ಪ್ರಕರಣದ್ಲಲಿ ಹಿಂದಿದ್ದ ಸಂತೋಷ್ ಕುಮಾರ್ ಅವರನ್ನು ಹೊಣೆಗಾರರನ್ನಾಗಿಸಬೇಕಿತ್ತು, ಆದರೆ ನಿರಾಪರಾಧಿಗಳನ್ನ ಈ ಪ್ರಕರಣದಲ್ಲಿ ಶಿಕ್ಷಿಸಲಾಗಿದೆ. ಹಾಗಾಗಿ ಈಗ ಈ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಅದನ್ನು ಅರ್ಥ ಮಾಡಿಕೊಂಡು ಜಾಗೖತರಾಗಿ ಕೆಲಸಮಾಡಿ, 2023-24ನೇ ಸಾಲಿನಿಂದಲೂ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳನ್ನು ಬಿಟ್ಟು ಹುಲಿ ಸಾವಿನ ಪ್ರಕರಣಕ್ಕೆ ವೇತನ ನೀಡಿರಲಿಲ್ಲ ಎಂಬುದನ್ನು ಮನನ ಮಾಡಿಕೊಂಡು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲದ ನಿರಾಪರಾಧಿಗಳ ವಿರುದ್ದ ಕ್ರಮ ಆಗಿದೆ.ಹಾಗಾಗಿ ಇಲ್ಲಿ. ಯಾರನ್ನು ದೂಷಿಸಬೇಕು ಎಂಬುದೆ ತಿಳಿಯದಾಗಿದೆ. ಈ ಹಿನ್ನೆಲೆ ಈಗಿನ ಅಧಿಕಾರಿಗಳು ಈ ಪ್ರಕರಣದ ಗಂಭೀರತೆ ಅರಿತು ಜಾಗ್ರತೆಯಿಂದ ಕೆಲಸ ಮಾಡಿ. ಅರಣ್ಯಾಧಿಕಾರಿಗಳ ಕೆಲಸ ಸುಲಭದ್ದಲ್ಲ. ಅದೇ ರೀತಿ ಅರಣ್ಯ ರಕ್ಷಣೆ, ಅಲ್ಲಿನ ವನ್ಯಜೀವಿಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿಯೂ ಆಗಿದೆ ಎಂದರು.
ಈ ವೇಳೆ ಚಾ.ನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೊಂಗನೂರು ಚಂದ್ರು,
-------1ಕೆಜಿಎಲ್ 30ಕೊಳ್ಳೇಗಾಲದ ಆದರ್ಶ ಶಾಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಅಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ
-