ತೀರಾ ನಾದುರಸ್ತಿಯಲ್ಲಿರುವ ಸಂಪೂರ್ಣ ಕೆಟ್ಟು ಹೋಗಿ ಸಂಚಾರಕ್ಕೆ ಅಯೋಗ್ಯವಾಗಿತ್ತು. ಈ ರಸ್ತೆಗಳು ಬಹು ಬೇಡಿಕೆಯ ರಸ್ತೆಗಳಾಗಿದೆ. ಕರ್ನಾಟಕ ನೀರಾವರಿ ನಿಗಮದ ವಾರಾಹಿ ಯೋಜನೆಯಡಿ ಈ ಅನುದಾನ ಬಿಡುಗಡೆಗೊಂಡಿದೆ ಎಂದಿದ್ದಾರೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೪ ರಸ್ತೆಗಳ ಅಭಿವೃದ್ಧಿಗೆ ೮ ಕೋಟಿ ರು. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.ವಿಧಾನಸಭಾ ಕ್ಷೇತ್ರದ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ರಸ್ತೆಗಳಿಗೆ ತಲಾ ೫ ಕೋಟಿ ರು.ನಂತೆ ಅನುದಾನ ಬಿಡುಗಡೆಗೊಂಡಿದೆ. ತೀರಾ ನಾದುರಸ್ತಿಯಲ್ಲಿರುವ ಸಂಪೂರ್ಣ ಕೆಟ್ಟು ಹೋಗಿ ಸಂಚಾರಕ್ಕೆ ಅಯೋಗ್ಯವಾಗಿತ್ತು. ಈ ರಸ್ತೆಗಳು ಬಹು ಬೇಡಿಕೆಯ ರಸ್ತೆಗಳಾಗಿದೆ. ಕರ್ನಾಟಕ ನೀರಾವರಿ ನಿಗಮದ ವಾರಾಹಿ ಯೋಜನೆಯಡಿ ಈ ಅನುದಾನ ಬಿಡುಗಡೆಗೊಂಡಿದೆ ಎಂದಿದ್ದಾರೆ.
ಅನುದಾನ ಬಿಡುಗಡೆಗೊಂಡಿರುವ ರಸ್ತೆಗಳು:ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾ.ಪಂ. ವ್ಯಾಪ್ತಿಯ ಶೇಖಮಲೆ-ದೇರ್ಲ ಸಂಪರ್ಕ ರಸ್ತೆ, ಕೆದಂಬಾಡಿ ಗ್ರಾ.ಪಂ. ವ್ಯಾಪ್ತಿಯ ಸಾರೆಪುಣಿ-ಕೋರಿಕ್ಕಾರು ಸಂಪರ್ಕ ರಸ್ತೆ, ಕೋಡಿಂಬಾಡಿ ಗ್ರಾ.ಪಂ. ವ್ಯಾಪ್ತಿಯ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿಯಿಂದ ಪೆರ್ನೆ ವರೆಗೆ ಸಂಪರ್ಕ ರಸ್ತೆ ಮತ್ತು ಬಂಟ್ವಾಳ ತಾಲೂಕಿನ ಅಳಿಕೆ ಗ್ರಾ.ಪಂ. ವ್ಯಾಪ್ತಿಯ ದೂಜಮೂಲ-ನೆಕ್ಕರೆ-ಮುಳಿಯ-ನೆಕ್ಕಿತಪುಣಿ ಸಂಪರ್ಕ ರಸ್ತೆಗಳು. ಈ ರಸ್ತೆಗಳಿಗೆ ಅನುದಾನ ನೀಡುವಂತೆ ಗ್ರಾಮಸ್ಥರಿಂದ ಬಂದ ಬೇಡಿಕೆಯ ಆಧಾರದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಯನ್ನು ಪುರಸ್ಕರಿಸಿದ ಮುಖ್ಯಮಂತ್ರಿಗಳು ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.