ಕನ್ನಡಪ್ರಭ ವಾರ್ತೆ ಹಾಸನ
ಇನ್ನು ಕಬಾಬ್, ಗೋಬಿ, ಮಸಾಲ ಪುರಿ, ಐಸ್ಕ್ರೀಮ್ ಮಾರಾಟ ಮಾಡುವವರ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ದೋಸೆ ಹಿಟ್ಟನ್ನು ಕೈಲಿ ಮಾಡದೆ, ಸ್ವಚ್ಛತೆಯೊಂದಿಗೆ ತಯಾರಿಸುವುದಾಗಿ ವ್ಯಾಪಾರಿಗಳು ಒಪ್ಪಿಕೊಂಡಿದ್ದಾರೆ. ಪಾಮಾಯಿಲ್ ಬಳಸಿ ಬೇಯಿಸದೇ ರಿಫೈನ್ಡ್ ಆಯಿಲ್ ಬಳಕೆ ಮಾಡುವಂತೆ ಸೂಚಿಸಲಾಗಿದೆ. ಪ್ಲಾಸ್ಟಿಕ್ ಉಪಯೋಗಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಬಾರಿ ದಂಡ ವಿಧಿಸದೆ ಎಚ್ಚರಿಕೆ ನೀಡಿದ್ದೇವೆ. ಮುಂದಿನ ಹಂತದಲ್ಲಿ ದೊಡ್ಡ ಹೋಟೆಲ್ಗಳಿಗೂ ಪರಿಶೀಲನೆ ವಿಸ್ತರಿಸಲಾಗುವುದು ಎಂದು ಎಚ್ಚರಿಸಿದರು.
ಪರಿಸರ ಪ್ರಭಾರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕವಿತಾ ಮಾತನಾಡಿ, ಮೊದಲ ಬಾರಿ ಎಚ್ಚರಿಕೆ ನೀಡುತ್ತಿದ್ದೇವೆ. ಆದರೆ ಮುಂದಿನ ಬಾರಿ ಸ್ವಚ್ಛತೆ ಇಲ್ಲದಿರುವುದು ಕಂಡುಬಂದರೆ ನೇರವಾಗಿ ದಂಡ ವಿಧಿಸಲಾಗುವುದು. ಎಂ.ಜಿ. ರಸ್ತೆಯ ಫುಡ್ಕೋರ್ಟ್ನಲ್ಲಿ ಎಚ್ಚರಿಕೆ ನೀಡಿದ ನಂತರ ಅಲ್ಲಿನ ವ್ಯಾಪಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಿರುವುದು ಕಂಡುಬಂದಿದೆ. ಆದರೆ ಇನ್ನೂ ನಿಷೇಧಿತ ಪ್ಲಾಸ್ಟಿಕ್ ಬಾಟಲಿಗಳನ್ನು, ನ್ಯೂಸ್ ಪೇಪರ್ ಬಳಸಿ ಪ್ಯಾಕ್ ಮಾಡುವ ಪದ್ಧತಿ ಮುಂದುವರಿದಿದೆ. ಜನರು ಸಹ ತಿನ್ನುವ ಸ್ಥಳದಲ್ಲಿ ಸ್ವಚ್ಛತೆ ಇದೆಯೇ ಎಂದು ಗಮನಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಅಡಿಕೆ ಎಲೆ ಮತ್ತು ಬಾಳೆ ಎಲೆಯಲ್ಲಿ ಸಿದ್ಧಪಡಿಸಿದ ಪ್ಲೇಟುಗಳನ್ನು ಉಪಯೋಗಿಸಬೇಕು. ಹಾಸನದಲ್ಲಿ ಕಳಪೆ ಆಹಾರ ಸೇವನೆಯಿಂದಾಗಿ ಅನೇಕರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಆದ್ದರಿಂದ ಸೋಮಾರಿತನ ಮಾಡದೇ ಗೃಹಿಣಿಯರು ಮನೆಯಲ್ಲಿ ತಯಾರಿಸಿದ ಆಹಾರ ಸೇವನೆ ಮಾಡುವುದು ಉತ್ತಮ ಎಂದು ಒತ್ತಿ ಹೇಳಿದರು.