ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಕುಮಾರ ಪಾರ್ಕ್ನ ಗಾಂಧಿ ಭವನದಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಪಿ.ವೈ.ರಾಜೇಂದ್ರಕುಮಾರ್ ಬರೆದ ಗ್ರಾಮೀಣ ಜ್ಞಾನ ಸಮುಚ್ಚಯಗಳು: ಒಂದು ಪರಿಕಲ್ಪನೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗ್ರಂಥಾಲಯ ಇಲಾಖೆ ಮೂಲಕ ಲೇಖಕರಿಂದ ಪ್ರತಿ ವರ್ಷ 300 ಪುಸ್ತಕ ನಿರಂತರವಾಗಿ ಖರೀದಿಸಲು ಸರ್ಕಾರ ವ್ಯವಸ್ಥೆ ಮಾಡಬೇಕು. 2006-07ರಲ್ಲಿ ನಾನು ಗ್ರಂಥಾಲಯ ಇಲಾಖೆ ಸಚಿವನಾಗಿದ್ದಾಗ ಲೇಖಕರಿಂದ 300 ಕನ್ನಡ ಪುಸ್ತಕ ಖರೀದಿಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿತ್ತು. ಆದರೆ, ಕೆಲ ವರ್ಷದಿಂದ ಕರ್ನಾಟಕ ಗ್ರಂಥಾಲಯ ಇಲಾಖೆ ಮೂಲಕ ಲೇಖಕರಿಂದ ಪ್ರತಿ ವರ್ಷವೂ ಸಮರ್ಪಕವಾಗಿ ಪುಸ್ತಕಗಳನ್ನು ಖರೀದಿಸುತ್ತಿಲ್ಲ ಎಂದು ದೂರಿದರು.ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಮಾತನಾಡಿ, ರಾಜೇಂದ್ರ ಕುಮಾರ್ ಅವರ ಅವಧಿಯಲ್ಲಿ ಗ್ರಂಥಾಲಯ ಇಲಾಖೆಯ ನಿರ್ವಹಣೆಯು ಉತ್ತಮವಾಗಿತ್ತು. ಜೈನ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳ ಪ್ರಕಟಣೆಗೆ ಪ್ರೋತ್ಸಾಹ ದೊರೆತಿತ್ತು ಎಂದು ಪ್ರಶಂಸಿಸಿದರು. ಕೋಲ್ಕತ್ತದ ಭಾರತೀಯ ರಾಷ್ಟ್ರೀಯ ಗ್ರಂಥಾಲಯದ ಮಾಜಿ ಮಹಾನಿರ್ದೇಶಕ ಹಾಗೂ ಲೇಖಕ ಪಿ.ವೈ.ರಾಜೇಂದ್ರಕುಮಾರ ಮಾತನಾಡಿ, ಗ್ರಂಥಾಲಯ ಇಲಾಖೆಯ ಎಲ್ಲ ಸಿಬ್ಬಂದಿಯರ ಸಹಕಾರದಿಂದ ಇಲಾಖೆಗೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗಿದೆ. ತುಮಕೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಡಿಲಿಟ್ ಪದವಿ ಪ್ರಬಂಧವನ್ನು ಈಗ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದು, ಗ್ರಂಥಾಲಯದ ಮಹತ್ವವನ್ನು ಇದು ತಿಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಮಗ್ರ ಶಿಕ್ಷಣ ನಿರ್ದೇಶಕ ಡಾ.ಸತೀಶ್ ಕುಮಾರ್ ಹೊಸಮನಿ ಮಾತನಾಡಿ, ಲೇಖಕ ಪಿ.ವೈ.ರಾಜೇಂದ್ರಕುಮಾರ ಅವರ ಬರೆದ ಪುಸ್ತಕವು ಕೇವಲ ಗ್ರಂಥಾಲಯ ಇಲಾಖೆಗಷ್ಟೇ ಸಿಮೀತವಾಗಿಲ್ಲ, ನಾನು ಸದ್ಯ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಇಲಾಖೆಯಲ್ಲಿಯೂ ಇದನ್ನು ಅಳವಡಿಸುವ ಅಗತ್ಯತೆ ಇದೆ ಎಂದು ಇಲಾಖೆಯ ಹತ್ತಾರು ಯೋಜನೆಗಳ ಕುರಿತು ವಿಸ್ತೃತವಾಗಿ ವಿವರಿಸಿದರು.ನಿವೃತ್ತ ಪ್ರಾಂಶುಪಾಲ ಕೆ.ಈ.ರಾಧಾಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗೌರವ ಅತಿಥಿಗಳಾಗಿ ಕೆಜೆಎ ಅಧ್ಯಕ್ಷ ಎಸ್.ಜಿತೇಂದ್ರಕುಮಾರ್, ಶಾಸಕ ಮತ್ತು ಕೈಗಾರಿಕೋದ್ಯಮಿ ಕೆ.ಎಚ್.ಪುಟ್ಟಸ್ವಾಮಿಗೌಡ, ಬೆಂಗಳೂರಿನ ಡಿಪಿಎಲ್ ಆಯುಕ್ತರು ಬಸವರಾಜೇಂದ್ರ, ನವದೆಹಲಿಯ ಇಂಡಿಕಾ ಪಬ್ಲಿಷರ್ಸ್ ಪ್ರಶಾಂತ್ ಜೈನ್ ಆಗಮಿಸಿದ್ದರು. ಡಾ.ಜಿನಶ್ರೀ ರಾಜೇಂದ್ರಕುಮಾರ್, ಡಾ.ದಿವ್ಯಶ್ರೀ ರಾಜೇಂದ್ರಕುಮಾರ್ ಅವರು ಸ್ವಾಗತಿಸಿ ವಂದಿಸಿದರು.ನೆನಪಿನ ಕಾಣಿಕೆ ನೀಡಿ ಜನ್ಮದಿನ, ವಿವಾಹ ಸುವರ್ಣ ಮಹೋತ್ಸವಕ್ಕೆ ಶುಭಾಶಯ
ಗ್ರಾಮಗಳು ಉದ್ದಾರವಾದರೇ ದೇಶ ಹೇಗೆ ಬೆಳವಣಿಗೆ ಕಾಣುತ್ತವೆಯೋ ಹಾಗೆಯೇ ಗ್ರಾಮಗಳು ಈಗ ಜ್ಞಾನವಿಕಾಸ, ಜ್ಞಾನಾಭಿವೃದ್ಧಿ ಕೇಂದ್ರಗಳಾಗಬೇಕು. ಅದಕ್ಕಿರುವ ಒಂದೇ ದಾರಿ ಎಂದರೆ ಗ್ರಾಮೀಣ ಭಾಗಗಳಲ್ಲಿ ಗ್ರಂಥಾಲಯಗಳನ್ನು ತೆರೆದು, ಗ್ರಾಮೀಣರಲ್ಲಿ ಜ್ಞಾನದ ಹರಿವನ್ನು ಹೆಚ್ಚಿಸಬೇಕು. ಇದರಿಂದಲೂ ನಮ್ಮ ದೇಶವು ಸಾಕ್ಷರತೆಯಲ್ಲಿ ಮತ್ತಷ್ಟು ಮುನ್ನಡೆ ಸಾಧಿಸುತ್ತದೆ. ಜತೆಗೆ ಆರ್ಥಿಕ ಪ್ರಗತಿಗೂ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮೀಣ ಜ್ಞಾನ ಸಮುಚ್ಚಯಗಳು ಎಂಬ ಪುಸ್ತಕ ರೂಪದಲ್ಲಿ ಮುಂದೇನಾಗಬೇಕು ಎಂಬುವುದರ ನನ್ನ ಕನಸನ್ನು ಇಲ್ಲಿ ಹಿಡಿದಿಟ್ಟಿರುವೆ. ಅವುಗಳನ್ನು ಸಾಕಾರ ರೂಪಕ್ಕೆ ಬರಬೇಕು ಎಂಬುವುದು ನಮ್ಮ ಅಭಿಲಾಷೆ.
-ಡಾ.ಪಿ.ವೈ.ರಾಜೇಂದ್ರಕುಮಾರ್, ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ನೀಡುವ ಸುವರ್ಣ ಕನ್ನಡಿಗ-2024ರ ಪ್ರಶಸ್ತಿ ಪುರಸ್ಕೃತರು.ಇಡೀ ರಾಷ್ಟ್ರದಲ್ಲಿ ಗ್ರಂಥಾಲಯ ದಿನಾಚರಣೆಯನ್ನು ಆರಂಭಿಸಿದ್ದೆ ಕರ್ನಾಟಕದಲ್ಲಿ ಎಂಬುವುದು ಹೆಮ್ಮೆಯ ವಿಚಾರ. ಈ ದಿನಾಚರಣೆ ಆರಂಭದಲ್ಲಿ ಡಾ.ರಾಜೇಂದ್ರಕುಮಾರ್ ಅವರು ಕಾರಣಕರ್ತರಲ್ಲಿ ಒಬ್ಬರು. ಅವರು ಅಂತಹ ಸಂದರ್ಭಕ್ಕೆ ಸದಾ ಸ್ಮರಿಸಬೇಕು. ಗ್ರಾಮೀಣ ಭಾಗದಲ್ಲಿ ಗ್ರಂಥಾಲಯಗಳಿಗೆ ಹೆಚ್ಚುಪ್ರಚಲಿತಕ್ಕೆ ಬರಲು ಇವರು ಒಬ್ಬರು. ಹೀಗಾಗಿ ಗ್ರಾಮೀಣ ಗ್ರಂಥಾಲಯಗಳಿಗೆ ಹೆಚ್ಚು ತಲಸ್ಪರ್ಶಿ ನೀಡಿದ್ದು ಹೆಮ್ಮೆಯ ವಿಚಾರ.-ಡಾ.ಪಿ.ವಿ.ಕೊಣ್ಣೂರ,
ಅಧ್ಯಕ್ಷರು, ಎಲ್ಐಎಸ್ ಅಕಾಡೆಮಿ ಬೆಂಗಳೂರು.