ರಾಮಪ್ಪ ಹಂಚಿನಮನಿಗೆ ಗಾನ -ಗಾರುಡಿಗ ಪ್ರಶಸ್ತಿ

KannadaprabhaNewsNetwork |  
Published : Aug 30, 2025, 01:00 AM IST
ದದದದ | Kannada Prabha

ಸಾರಾಂಶ

ದಾಸರಪದ, ತತ್ವಪದ, ಬಯಲಾಟ, ವಿವಿಧ ಜಾನಪದ ಹಾಡು ಹೇಳುವ ಜತೆಗೆ ಜೀವನೋತ್ಸಾಹ ಕಳೆದುಕೊಳ್ಳದ ಕಂಚಿನ ಕಂಠದ ದಿವ್ಯಾಂಗ ಕಲಾವಿದ ರಾಮಪ್ಪ ಹಂಚಿನಮನಿ ಸಾಧನೆಗಳು ಗುರುತಿಸಿ ಆಯ್ಕೆ ಸಮಿತಿ ಪ್ರಶಸ್ತಿಗೆ ಆಯ್ಕೆ

ಧಾರವಾಡ: ಖ್ಯಾತ ಜಾನಪದ ಗಾಯಕ ದಿ.ಬಸವಲಿಂಗಯ್ಯ ಹಿರೇಮಠ ಹೆಸರಲ್ಲಿ ಕೊಡಲ್ಪಡುವ ಪ್ರಸಕ್ತ ಸಾಲಿನ ಗಾನ-ಗಾರುಡಿಗ ರಾಜ್ಯ ಪ್ರಶಸ್ತಿಗೆ ಕಿತ್ತೂರು ತಾಲೂಕಿನ ಬೈಲೂರಿನ ದಿವ್ಯಾಂಗ ಜನಪದ ಕಲಾವಿದ ರಾಮಪ್ಪ ಸೋಮಪ್ಪ ಹಂಚಿನಮನಿ ಆಯ್ಕೆ ಆಗಿದ್ದಾರೆ.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಾನಪದ ಸಂಶೋಧನಾ ಕೇಂದ್ರ ಅಧ್ಯಕ್ಷ ಗುರು ಕಲ್ಮಠ, ಸೆ.1ರ ಸಂಜೆ 5ಕ್ಕೆ ಆಲೂರು ವೆಂಕಟರಾವ್ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಡಾ. ಎನ್.ಎಂ. ಚರಂತಿಮಠ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ದಾಸರಪದ, ತತ್ವಪದ, ಬಯಲಾಟ, ವಿವಿಧ ಜಾನಪದ ಹಾಡು ಹೇಳುವ ಜತೆಗೆ ಜೀವನೋತ್ಸಾಹ ಕಳೆದುಕೊಳ್ಳದ ಕಂಚಿನ ಕಂಠದ ದಿವ್ಯಾಂಗ ಕಲಾವಿದ ರಾಮಪ್ಪ ಹಂಚಿನಮನಿ ಸಾಧನೆಗಳು ಗುರುತಿಸಿ ಆಯ್ಕೆ ಸಮಿತಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾಗಿ ಹೇಳಿದರು.

ಜಾನಪದ ಸಂಶೋಧನಾ ಕೇಂದ್ರದ ಸಂಸ್ಥಾಪಕಿ ವಿಶ್ವೇಶ್ವರಿ ಹಿರೇಮಠ ಮಾತನಾಡಿ, ಬಸಲಿಂಗಯ್ಯ ಹಿರೇಮಠರ 66ನೇ ಜನ್ಮದಿನದ ಅಂಗವಾಗಿ ಕೊಡಲ್ಪಡುವ ಈ ಗಾನ-ಗಾರುಡಿಗ ಬಸಲಿಂಗಯ್ಯ ಹಿರೇಮಠ ರಾಜ್ಯ ಪ್ರಶಸ್ತಿ ₹ 10 ಸಾವಿರ ನಗದು, ಸ್ಮರಣಿಕೆ, ಫಲಕ ಹಾಗೂ ಫಲಪುಷ್ಪ ಒಳಗೊಂಡಿದೆ. ಸಾನ್ನಿಧ್ಯವನ್ನು ಮುರಗೋಡದ ನೀಲಕಂಠ ಸ್ವಾಮೀಜಿ ವಹಿಸಲಿದ್ದಾರೆ. ಸಾಹಿತಿ ಬಿ.ಆರ್. ಪೊಲೀಸ್ ಪಾಟೀಲ ಅಭಿನಂದನಾ ಪರ ನುಡಿಗಳನ್ನಾಡಲಿದ್ದು, ಪ್ರೊ. ಎನ್.ಎಸ್.ಗಲಗಲಿ ಅಧ್ಯಕ್ಷತೆ ವಹಿಸುವುದಾಗಿ ಮಾಹಿತಿ ನೀಡಿದರು. ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ, ಹುಬ್ಬಳ್ಳಿ ಸಿಪಿಐ ಡಾ. ಜ್ಯೋತಿರ್ಲಿಂಗಪ್ಪ ಹೊನಕಟ್ಟಿ, ಗಜಾನನ ಚಿನಗುಡಿ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಾನಪದ ಸಂಶೋಧನಾ ಕೇಂದ್ರದ ನಿರ್ದೇಶಕಿ ಆಶಾ ಸೈಯದ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಎಂ.ಚಂದ್ರಪ್ಪರಿಂದ ಸರ್ಕಾರಿ ಗುಡ್ಡ ಕಬಳಿಕೆ
ಇಂದು ಸ್ತುತಿ ಶಂಕರ- ಸ್ತೋತ್ರ ಮಹಾ ಸಮರ್ಪಣೆ