ಕನ್ನಡಪ್ರಭ ವಾರ್ತೆ ಕೋಲಾರ
ಈ ಕುರಿತು ಅ.೨೮ರಂದು ಕೋಲಾರ ಜಿಲ್ಲಾ ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕರು ಉಪ ಅರಣ್ಯ ಸಂರಕ್ಷಣಾಧಿಕಾರಿ, ಶ್ರೀನಿವಾಸಪುರ ತಹಸೀಲ್ದಾರ್ ಮತ್ತು ರಮೇಶ್ಕುಮಾರ್ ಅವರಿಗೆ ಪತ್ರ ಬರೆದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆ ಮೇಲೆ ಜಂಟಿ ಅಳತೆ ಕಾರ್ಯ ನಡೆಸುವಂತೆ ಅಪರ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಅದರಂತೆ ನ.೬ರಂದು ಬೆಳಗ್ಗೆ ೧೧ ಗಂಟೆಗೆ ಜಂಟಿ ಸರ್ವೇ ನಡೆಸಲಿದ್ದು, ತಮ್ಮ ಬಳಿಯ ದಾಖಲೆಗಳ ಸಮೇತ ಹಾಜರಿರಬೇಕು ಎಂದು ತಿಳಿಸಿದ್ದಾರೆ.
ಎರಡು ತಿಂಗಳ ಒಳಗೆ ಮಾಜಿ ಸ್ಪೀಕರ್ ರಮೇಶ್ಕುಮಾರ್ ಉಪಸ್ಥಿತಿಯಲ್ಲಿ ಕಂದಾಯ, ಸರ್ವೇ ಹಾಗೂ ಅರಣ್ಯ ಇಲಾಖೆಗಳು ಜಂಟಿ ಸರ್ವೇ ನಡೆಸಬೇಕು ಮತ್ತು ಅರಣ್ಯ ಅತಿಕ್ರಮಣ ಸರ್ವೇ ಸಮಯದಲ್ಲಿ ಗುರುತಿಸಲಾದ ಯಾವುದಾದರೂ ಅಸ್ಥಿತ್ವದಲ್ಲಿರುವ ಕಾನೂನು ಪ್ರಕಾರ ಹೊರಹಾಕಲ್ಪಟ್ಟಿದ್ದರೆಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು ಎಂಬುದು ಗಮನಾರ್ಹ.
ಇದರ ಆಧಾರದ ಮೇಲೆ ಕರ್ನಾಟಕ ಹೈಕೋರ್ಟ್ ಅರ್ಜಿದಾರರ ಸಮಕ್ಷಮದಲ್ಲಿ ತ್ರಿಪಕ್ಷೀಯ ಜಂಟಿ ಸರ್ವೇ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಸೂಚನೆ ನೀಡಿತ್ತು.
ಹೈಕೋರ್ಟ್ ಸೂಚನೆಯನ್ನು ಇದುವರೆಗೂ ಪಾಲಿಸಿಲ್ಲ ಎಂದು ವಕೀಲ ಕುಂದಿಟಿವಾರಿಪಲ್ಲಿ ಶಿವಾರೆಡ್ಡಿ ಮತ್ತು ಬೆಂಗಳೂರು ಗಾಂಧಿನಗರ ಭಾಸ್ಕರರೆಡ್ಡಿ ಎಂಬುವರು ಸಲ್ಲಿಸಿದ್ದ ದೂರಿನ ಮೇಲೆ ಅಕ್ಟೋಬರ್ ೮ರಂದು ಭಾರತ ಸರ್ಕಾರದ ಪರಿಸರ ಅರಣ್ಯ ಮತ್ತು ಹವಾಮಾನ ವೈಫರಿತ್ಯ ಮಂತ್ರಾಲಯವು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕರ್ನಾಟಕ ಹೈಕೋರ್ಟ್ ಆದೇಶದ ಪ್ರಕಾರ ವಿವಾದಿತ ಭೂಮಿ ಕುರಿತು ಜಂಟಿ ಸರ್ವೇ ಮಾಡಬೇಕು. ಈ ಭೂಮಿಯಲ್ಲಿ ಅರಣ್ಯ ಒತ್ತುವರಿ ಕಂಡುಬಂದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಂಡು ಎರಡು ತಿಂಗಳ ಒಳಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಆದೇಶಿಸಿತ್ತು.