ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ಪಟ್ಟಣದ ವೀರಾಂಜನೇಯ ದೇವಸ್ಥಾನದಲ್ಲಿ ಗೆಳೆಯರ ಬಳಗದ ವತಿಯಿಂದ ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅನ್ನ ಸಂತರ್ಪಣೆ ಮಾಡಲಾಯಿತು. ಮಾಜಿ ಜಿ.ಪಂ ಅಧ್ಯಕ್ಷ ನಿತೀನ್ ಗುತ್ತೇದಾರ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅದೇ ರೀತಿ ಮಾಶಾಳ ಗ್ರಾಮದಲ್ಲಿ ಮರುಳಾರಾಧ್ಯ ಶಿವಾಚಾರ್ಯರು ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅದರಂತೆ ಆನೂರ, ಅರ್ಜುಣಗಿ, ದೇವಲ ಗಾಣಗಾಪೂರ, ಸ್ಟೇಷನ್ ಗಾಣಗಾಪೂರ, ಚವಡಾಪುರ, ಗೊಬ್ಬೂರ(ಬಿ), ರೇವೂರ(ಬಿ), ಘತ್ತರಗಾ, ಹಸರಗುಂಡಗಿ, ಭೈರಾಮಡಗಿ, ಬಿದನೂರ, ಹಸರಗುಂಡಗಿ ಸೇರಿದಂತೆ ತಾಲೂಕಿನಾದ್ಯಂತ ಎಲ್ಲಾ ಗ್ರಾಮಗಳಲ್ಲಿ ರಾಮ ಭಕ್ತರು ಸಂಭ್ರಮಾಚರಣೆ ಮಾಡಿದರು.