ಕನ್ನಡಪ್ರಭ ವಾರ್ತೆ ನಾಪೋಕ್ಲು
ತಂತ್ರಿಗಳಾದ ದಿವಾಕರ ಭಟ್ಟ ನೇತೃತ್ವದಲ್ಲಿ ಮೇ 6ರಂದು ಸಂಜೆ 5:20ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಮೇ 7ರಂದು 101 ತೆಂಗಿನಕಾಯಿ ಗಣಪತಿ
ಹೋಮ, ಅಷ್ಟ ದಿಕ್ಪಾಲಕ ಹೋಮ , ಚಂಡಿಕಾ ಹೋಮ ನಡೆಯಲಿದೆ. ಮೇ ಎಂಟರಂದು ಶುಕ್ರವಾರ ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮ ಪ್ರತಿಷ್ಠಾ ಹೋಮ, ದೇವಿಯ ಪ್ರತಿಷ್ಠೆ, ಬ್ರಹ್ಮ ಕಳಸ ಅಭಿಷೇಕ ಮಹಾಪೂಜೆ ನಡೆಯಲಿದೆ.ಮೇ 9ರಂದು ಶನಿವಾರ ದೇವಿಯ ಅವಭೃತ ಸ್ನಾನ, ನೃತ್ಯ ಬಲಿ ಹಾಗೂ ಮಹಾಪೂಜೆ (ರಾತ್ರಿ ಅನ್ನದಾನ ಇರುತ್ತದೆ) 10 ಭಾನುವಾರ ದೇವಿಯ ಶುದ್ಧ ಕಳಶ ನಡೆಯಲಿದೆ. ಎಂದು ಭಗವತಿ ದೇವಾಲಯದ ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ತಿಳಿಸಿದೆ.