ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ತಾಲೂಕಿನ ಕಾಮಸಮುದ್ರ ಗ್ರಾಮದ ಕೆಸಿಆರ್ ಕಲ್ಯಾಣ ಮಂಟಪದಲ್ಲಿ ನಡೆದ ರೆಡ್ಡಿ ಸಮುದಾಯದ ಸಮಾವೇಶದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿಯೂ ಸಾವಿರಾರು ಮಂದಿ ಕುಲ ಬಾಂಧವರಿದ್ದೂ ಒಗ್ಗಟ್ಟಿನ ಕೊರತೆಯಿಂದ ಸಮುದಾಯ ಒಡೆಯುತ್ತಿದೆ ಎಂದರು.
ಸೌಲಭ್ಯ ವಂಚಿತ ಜನಾಂಗನಮ್ಮ ಸಮುದಾಯ ಸರ್ಕಾರದ ಸವಲತ್ತು ಪಡೆದುಕೊಳ್ಳುವಲ್ಲಿ ವಂಚಿರಾಗುತ್ತಿದ್ದೇವೆ. ಸಂಘಟನೆಯಲ್ಲಿ ಒಗ್ಗಟ್ಟಿನ ಕೊರತೆಯಿಂದ ಸವಲತ್ತುಗಳನ್ನು ಪಡೆದುಕೊಳ್ಳದೆ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದೇವಂತಾಗಿದೆ, ಜೊತೆಗೆ ರೆಡ್ಡಿ ಸಮುದಾಯ ಮುಂದಿನ ಪೀಳಿಗೆ ಸಮಸ್ಯೆ ಎದುರಿಸುವ ಪರಿಸ್ಥಿತಿ ಎದುರಾಗಿದೆ ಎಂದು ವಿಷಾದಿಸಿದರು.
ಓಟ್ ಬ್ಯಾಂಕ್ ಆಗಿ ಬಳಕೆ
ರೆಡ್ಡಿ ಸಂಘದ ರಾಜ್ಯ ನಿರ್ದೇಶಕ ಕೆ.ಚಂದ್ರಾರೆಡ್ಡಿ ಮಾತನಾಡಿ, ರೆಡ್ಡಿ ಸಮುದಾಯ ಸಂಘಟನಾ ಸಭೆ ರಾಜಕೀಯವಾಗಿ ಶೈಕ್ಷಣಿಕವಾಗಿ ಸಮಾಜಿಕವಾಗಿ ಮತ್ತು ರಾಜಕೀಯವಾಗಿ ಬೆಳೆಯಬೇಕು. ನಮ್ಮಲ್ಲಿನ ಸಂಘಟನೆ ಕೊರತೆಯಿಂದ ರಾಜಕೀಯ ಪಕ್ಷಗಳು ರೆಡ್ಡಿ ಸಮುದಾಯವನ್ನು ಬರೀ ಮತ ಬ್ಯಾಂಕ್ಕಾಗಿ ಮಾತ್ರ ಬಳಸಿಕೊಳ್ಳುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಈ ವೇಳೆ ರೆಡ್ಡಿ ಸಂಘದ ತಾಲೂಕು ಅಧ್ಯಕ್ಷ ತಿಪ್ಪಾರೆಡ್ಡಿ,ಮಾಲೂರು ಅಧ್ಯಕ್ಷ ರಾಮಸ್ವಾಮಿರೆಡ್ಡಿ, ಜಿ.ರಾಜಾರೆಡ್ಡಿ, ರಾಮಚಂದ್ರರೆಡ್ಡಿ, ಆರ್.ವೆಂಕಟೇಶ್ರೆಡ್ಡಿ, ಮಂಜುನಾಥರೆಡ್ಡಿ, ರಾಧಮ್ಮ, ವಿಕಯಲಕ್ಷ್ಮಿ, ಮಲ್ಲಿಕಾರ್ಜುನರೆಡ್ಡಿ, ಶಿವಾರೆಡ್ಡಿ ಇದ್ದರು.