ಕನ್ನಡಪ್ರಭ ವಾರ್ತೆ ರಾಮನಗರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಡವಾಳ ಶಾಹಿ ಪಕ್ಷಗಳು ಹೊಸ ಮುಖಗಳೊಂದಿಗೆ, ಹೊಸ ಗ್ಯಾರಂಟಿಗಳೊಂದಿಗೆ ಜನರ ಬಳಿಗೆ ಬರುತ್ತಿವೆ. ಎಸ್ಯುಸಿಐ (ಸಿ) ಚುನಾವಣೆಯಲ್ಲಿ ಕರ್ನಾಟಕದಲ್ಲಿ 19 ಸೇರಿದಂತೆ ದೇಶದಲ್ಲಿ ಒಟ್ಟು 151 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದೆ ಎಂದರು.
ಕಳೆದ 10 ವರ್ಷಗಳಿಂದ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಜನರ ಬದುಕನ್ನು ಮೂರಾಬಟ್ಟೆಯನ್ನಾಗಿ ಮಾಡಿದೆ. 2014ರಲ್ಲಿ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತಹ ಸಮಸ್ಯೆಗಳ ಕುರಿತು ಅಬ್ಬರಿಸುತ್ತಿದ್ದ ಬಿಜೆಪಿಯು ಈಗ ಸಂಪೂರ್ಣ ಮೌನವಾಗಿದೆ. ''''''''''''''''ಗುಜರಾತ್ ಮಾದರಿ'''''''''''''''' ಮಾಯವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗದ ಮಾತಿರಲಿ, ಭಾರತದ ಯುವಕರು ದೇಶದೊಳಗಿನ ನಿರುದ್ಯೋಗದ ಭಾರವನ್ನು ಹೊರಲಾಗದೆ ವಲಸೆ ಹೋಗುತ್ತಿದ್ದಾರೆ. ಕಪ್ಪು ಹಣ, ಸ್ವಿಸ್ ಬ್ಯಾಂಕ್ ಗಳಲ್ಲಿ ಬಚ್ಚಿಟ್ಟ ಹಣ ವಶ ಪಡಿಸಿಕೊಳ್ಳುವುದಿರಲಿ, ಎಸ್ಬಿಐನಲ್ಲಿರುವ ಚುನಾವಣಾ ಬಾಂಡ್ ಕುರಿತು ಮಾಹಿತಿ ಹೊರ ಬರದಂತೆ ತಡೆಯಲು ಬಿಜೆಪಿ ಎಲ್ಲ ಬಗೆಯ ಪ್ರಯತ್ನ ಮಾಡಿತ್ತು ಎಂದು ದೂರಿದರು.ಅಂಬಾನಿ, ಅದಾನಿಗಳು ವಿಕಸಿತಗೊಂಡು ಜಗತ್ತಿನ ಅತಿ ಶ್ರೀಮಂತ ಬಂಡವಾಳ ಶಾಹಿಗಳಾಗಿದ್ದಾರೆ. ಅವರ ಬೆಳವಣಿಗೆಯನ್ನೇ ದೇಶದ ಅಭಿವೃದ್ಧಿ ಎಂದು ಬಣ್ಣಿಸುತ್ತಾ ''''''''''''''''ಅಭಿವೃದ್ಧಿ'''''''''''''''' ಎಂಬ ಪರಿಕಲ್ಪನೆಗೆ ಮರು ವ್ಯಾಖ್ಯಾನವನ್ನು ಬಿಜೆಪಿ ನೀಡಿದೆ. ಮತಗಳನ್ನು ಸೆಳೆಯಲು ಕೋಮುವಾದದ ಮೂಲಕ ಧ್ರುವೀಕರಣ ಮಾಡಲು ಮಂದಿರ, ಮಸೀದಿ, ಬಾವುಟ, ಸಿಎಎ ಮುಂತಾದ ಬಗೆಬಗೆಯ ದಾರಿಗಳನ್ನು ಬಿಜೆಪಿ ಹುಡುಕುತ್ತಿದೆ. ಚುನಾವಣಾ ಆಯೋಗವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು, ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆಗೆ ತಿದ್ದುಪಡಿ ತಂದಿದೆ ಎಂದು ಆರೋಪಿಸಿದರು.
ಈ ಚುನಾವಣೆ ಬಂಡವಾಳಶಾಹಿ ಮತ್ತು ಕಾರ್ಮಿಕರ ನಡುವಿನ, ಶೋಷಕರು ಹಾಗೂ ಶೋಷಿತರ ನಡುವಿನ ಸಮರವಾಗಿದೆ. ಎಡ ಪಕ್ಷಗಳು ಭಾರತದ ಶೋಷಿತ ದುಡಿಯುವ ವರ್ಗದ ಮತ್ತು ಬಡ ರೈತರ ಒಂದು ನೈಜ ಜನಪರ ರಾಜಕೀಯ ಪರ್ಯಾಯವಾಗಿ ಒಂದು ಒಕ್ಕೂಟವನ್ನು ರಚನೆ ಮಾಡಿಕೊಳ್ಳಲು ಜನ ಹೋರಾಟಗಳನ್ನು ಕಟ್ಟಬೇಕಾಗಿತ್ತು. ಆದರೆ, ಸಿಪಿಐ, ಮೈತ್ರಿಕೂಟವನ್ನು ಸೇರಿಕೊಂಡಿದೆ. ಅದರ ಹಿಂದೆ ಅವಕಾಶವಾದವನ್ನು ಬಿಟ್ಟು ಇನ್ನು ಯಾವುದೇ ತತ್ವ ಸಿದ್ಧಾಂತಗಳ ಪ್ರೇರಣೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ, ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷವು ಶೋಷಿತ ಜನರ ನೈಜ ಹೋರಾಟದ ಪರ್ಯಾಯವಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸಲು ತನ್ನ ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ಜ್ಞಾನಮೂರ್ತಿ ಹೇಳಿದರು.
ಪಕ್ಷದ ಅಭ್ಯರ್ಥಿ ಕೆ.ಹೇಮಾವತಿ ಮಾತನಾಡಿ, ಎಸ್ಯುಸಿಐ ಪಕ್ಷವು ಬಿಜೆಪಿ ಮತ್ತು ಕಾಂಗ್ರೆಸ್ಗಿಂತ ಭಿನ್ನವಾದ ಪಕ್ಷವಾಗಿದೆ. ಆ ಪಕ್ಷಗಳಂತೆ ನಮ್ಮ ಪಕ್ಷ ಚುನಾವಣಾ ಬಾಂಡ್ ಪಡೆದಿಲ್ಲ. ವೋಟು ಕೊಡಿ, ನೋಟು ಕೊಡಿ ಘೋಷವಾಕ್ಯದೊಂದಿಗೆ ಲೋಕಸಭಾ ಚುನಾವಣೆ ಎದುರಿಸುತ್ತಿದ್ದೇವೆ ಎಂದು ತಿಳಿಸಿದರು.ಚುನಾವಣೆಯಲ್ಲಿ ನಾವು ಆಯ್ಕೆಯಾದಲ್ಲಿ ಬೆಲೆ ಏರಿಕೆ ತಡೆಗಟ್ಟುವುದು, ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟ ವ್ಯವಸ್ಥೆಯನ್ನು ಸರ್ಕಾರವೇ ನಿರ್ವಹಿಸುವಂತೆ ಕಾಯ್ದೆ ರೂಪಿಸುವುದು. ಜನವಿರೋಧಿ ಶಿಕ್ಷಣ ನೀತಿಯನ್ನು ತಕ್ಷಣವೇ ಹಿಂಪಡೆಯುವುದು, ವಾಣಿಜ್ಯಕರಣವಿಲ್ಲದ ನೈಜವಾದ ಜನಪರ ಶಿಕ್ಷಣ ನೀತಿಯನ್ನು ರೂಪಿಸುವುದು. ಆರೋಗ್ಯ ವಲಯದ ಖಾಸಗೀರಕರಣ ನಿಲ್ಲಿಸಿ, ಸರ್ಕಾರಿ ಆರೋಗ್ಯ ವ್ಯವಸ್ಥೆ ಬಲ ಪಡಿಸುವ ಕೆಲಸವನ್ನು ಮಾಡುತ್ತೇವೆ ಎಂದರು.
ಆಶಾ, ಅಂಗನವಾಡಿ, ಬಿಸಿಯೂಟ ಸೇರಿದಂತೆ ಎಲ್ಲಾ ವಲಯಗಳ ಕಾರ್ಮಿಕರ ಜೀವನ ನಿರ್ವಹಣೆಗೆ ಸೂಕ್ತ ವೇತನ ವ್ಯವಸ್ಥೆ ಮಾಡುವುದು. ಅಗತ್ಯ ಕಾನೂನು ಜಾರಿಗೊಳಿಸುವ ಮೂಲಕ ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡುವುದು. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರಗಳನ್ನು ನೀಡಲಾಗುವುದು ಎಂದು ಹೇಮಾವತಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಶ್ರೀರಾಮನ್ , ಶೋಭಾ, ಕೆ.ವಿ.ಭಟ್ಟ ಇದ್ದರು.