ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮಾನಸ ಗಂಗೋತ್ರಿಯ ಇಎಂಆರ್ ಸಿ ಸಭಾಂಗಣದಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಸಂಯುಕ್ತವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ಡಿ. ರವಿಕುಮಾರ್ ಇಂದ್ವಾಡಿ ಅವರ ದೇವರಾಯ ಇಂಗಳೆ, ಸೋಸಲೆ ಸಿದ್ದಪ್ಪ, ಡಿ. ಗೋವಿಂದದಾಸ್: ಬದುಕು- ಬರಹ'' ಹಾಗೂ ಕಾರುಣ್ಯ ಬಿತ್ತನೆಕೃತಿಗಳನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ಇತಿಹಾಸ ಎಂದರೆ ನಮ್ಮ ಸಮಾಜ ಯಾವೆಲ್ಲ ಬಿಕ್ಕಟ್ಟು ಕಂಡಕೊಂಡಿತು. ಅದನ್ನು ಬಗೆಹರಿಸಿತು, ಪರಿವರ್ತನೆಗೆ ಮಾಡಿದ ಹೋರಾಟವೇ ಇತಿಹಾಸ. ಈ ಇತಿಹಾಸ ನಮ್ಮನ್ನಾಳಿದ ದೊರೆಗಳಿಗಿಂತ ದೊಡ್ಡದು. ನಾವು ರಾಜರ ಯುದ್ದ ಕಥನವನ್ನು ಇತಿಹಾಸವೆಂದು ಬರೆದುಕೊಂಡಿದ್ದೇವೆ. ಹೀಗಾಗಿ, ಅದೊಂದು ರೀತಿ ಊಳಿಗಮಾನ್ಯ ಪ್ರವೃತ್ತಿ ನಮ್ಮಲ್ಲಿ ಬೆಳೆಸುತ್ತಿದೆ ಎಂದು ಅವರು ಹೇಳಿದರು.ಯಾರಾಳಿದರು, ಯುದ್ಧ ಮಾಡಿದರು, ಸೋತರು ಎಂಬ ಇತಿಹಾಸದ ಹುತ್ತಕ್ಕೆ ಕೈ ಹಾಕಿ ಭಾರತದ ಮೇಲೆ ವಿಷ ಚೆಲ್ಲಾಲಾಗುತ್ತಿದೆ. ಇದಕ್ಕೆ ಕಳೆದ 30- 35 ವರ್ಷ ಘಟನೆಗಳು ಸಾಕ್ಷಿಯಾಗಿವೆ. ಇತಿಹಾಸ ಓದಿ ಪಾಠ ಕೇಳಬೇಕು. ಆದರೆ, ಅದರ ವಿಷವನ್ನು ತೆಗೆದಕೊಂಡ ಸಮಾಜದ ಮೇಲೆ ಸುರಿಯಬಾರದು. ಇದಲ್ಲ ನಮ್ಮ ಇತಿಹಾಸವಲ್ಲ. ನಿಜವಾದ ಚರಿತ್ರೆ ಬೇರೆ ಎಂದು ಈ ಕೃತಿಯು ಒತ್ತಿ ಹೇಳಲಿದೆ ಎಂದರು.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ ಕೃತಿ ಕುರಿತು ಮಾತನಾಡಿ, ನವವೋದಯ ಸಾಹಿತ್ಯ ಚರಿತ್ರೆ ದೇವರಾಯ ಇಂಗಳೆ, ಸಿದ್ದಪ್ಪ, ಗೋವಿಂದದಾಸ್ ಅವರನ್ನು ಗೈರು ಹಾಜರು ಮಾಡಿದೆ. ಕುವೆಂಪು ಅವರಿಗೆ ಸಮಕಾಲೀನವಾಗಿ ದೇವರಾಯ ಇಂಗಳೇ ನಾಟಕ ಬರೆದಿದ್ದರು. ನಾವು ಕುವೆಂಪು ಓದಿದ್ದೇವು. ಆದರೆ, ದೇವರಾಯ ಅವರನ್ನು ಓದಿಲಿಲ್ಲ ಅಂದರೆ, ನಾವು ಇಲ್ಲಿಯವರೆಗೆ ಓದಿರುವುದು ಸುಳ್ಳು ಚರಿತ್ರೆ. ಅಲ್ಲದೆ, ಸುಳ್ಳ ಚರಿತ್ರೆಯನ್ನು ಬೋಧಿಸುತ್ತಿದ್ದೇವೆ. ಚರಿತ್ರೆಯನ್ನು ಮರಕಟ್ಟುವ ಚರಿತ್ರೆ ಓದುತ್ತಿದ್ದೇವೆ. ಇದು ಸಾಹಿತ್ಯದೊಳಗೆ ಇರುವ ಅಸ್ಪೃಶ್ಯತೆ ತೋರಿಸಲಿದೆ ಎಂದು ಹೇಳಿದರು.
-----
ಜನಪದರು ಮತ್ತು ದ್ರಾವಿಡರಿಂದ ನಮ್ಮ ಚರಿತ್ರೆ ಆರಂಭವಾಗಲಿದೆ. ಆದರೆ, ಕೇವಲ ಶಾಸನಗಳಿಂದ ಚರಿತ್ರೆಯನ್ನು ಕಟ್ಟಲಾಗಿದೆ. ಕನ್ನಡ ಸಾಹಿತ್ಯ ಕಟ್ಟಿದ ಯಾರು ಕೂಡ ಜನಪದರಿಂದ ಚರಿತ್ರೆ ಕಟ್ಟಿಲ್ಲ. ಹೀಗಾಗಿ, ನಮ್ಮದ್ದಲ್ಲ ಸಾಹಿತ್ಯ ಚರಿತ್ರೆಯ ಬಗ್ಗೆ ಮಾತನಾಡುತ್ತಿದ್ದೇವೆ. ಆರ್ಯ ಚರಿತ್ರೆಯನ್ನು ಓದಿಕೊಂಡು, ಮೆರೆಸಿಕೊಂಡು ಮಾತನಾಡುತ್ತಿದ್ದೇವೆ.
----
- ಪ್ರೊ.ಎಂ.ಎಸ್. ಶೇಖರ್, ಡೀನ್, ಕಲಾ ನಿಕಾಯ, ಮೈಸೂರು ವಿವಿ