ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ದೇವಾಲಯಗಳು ಬರೀ ಧಾರ್ಮಿಕ ಕೇಂದ್ರಗಳಾಗಿರದೇ ಸಾಂಸ್ಕೃತಿಕ ಕೇಂದ್ರಗಳಾಗಿವೆ ಎಂದು ಸುತ್ತೂರು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಹೇಳಿದರು.ತಾಲೂಕಿನ ಶಂಭುದೇವನಪುರ ಗ್ರಾಮದಲ್ಲಿ ಭಾನುವಾರ ನಡೆದ ಶ್ರೀ ಶಂಭುಲಿಂಗೇಶ್ವರಸ್ವಾಮಿ ದೇವಸ್ಥಾನದ ನೂತನ ಶಿಖರ ಮತ್ತು ಕಳಸಾರೋಹಣ ಹಾಗೂ ದೇವಾಲಯ ಸಂಪ್ರೋಕ್ಷಣ ಕಾರ್ಯಕ್ರಮದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಒಂದೊಂದು ದೇವಾಲಯಕ್ಕೂ ತನ್ನದೇ ಆದ ವೈಶಿಷ್ಟತೆ ಇದೆ. ಹಿಂದೆ ದೇವಾಲಯಗಳು ಕಲಾ ಪ್ರತಿಭೆಗಳನ್ನು ಭಗವಂತನಿಗೆ ಅರ್ಪಿಸುವ ಕೇಂದ್ರಗಳಾಗಿದ್ದವು. ಮನುಷ್ಯ ತಾನು ಕಲಿತ ಸಂಗೀತ, ನೃತ್ಯ ಅಥವಾ ಯಾವುದೇ ಕಲೆಯನ್ನು ಪ್ರದರ್ಶಿಸಲು ಆರಂಭಿಸುವ ರಂಗ ಪ್ರವೇಶವನ್ನು ಮೊದಲಿಗೆ ದೇವಾಲಯಗಳಲ್ಲಿ ಮಾಡುತ್ತಿದ್ದರು. ಆ ಮೂಲಕ ತಾವು ಕಲಿತ ಕಲೆಯನ್ನು ಭಗವಂತನಿಗೆ ಸಮರ್ಪಿಸುತ್ತಿದ್ದರು. ಕಲೆ ಎನ್ನುವುದು ಮನುಷ್ಯನ ಅವಿಭಾಜ್ಯ ಸಂಗತಿ. ಪ್ರತಿಭೆ ಎನ್ನುವುದು ದೇವರು ಕೊಟ್ಟಂತಹ ಒಂದು ಕೊಡುಗೆ. ಅದನ್ನು ಭಗವಂತನಿಗೆ ಸಮರ್ಪಣೆ ಮಾಡಬೇಕು ಆ ಮೂಲಕ ಆ ಕಲೆಗೆ ಶ್ರೇಷ್ಠತೆ ಬರುತ್ತದೆ ಎನ್ನುವುದು ಭಾರತೀಯ ಸಂಸ್ಕೃತಿಯಲ್ಲಿರುವ ನಂಬಿಕೆ ಎಂದರು.ಜನರಲ್ಲಿ ಯಾವುದೇ ಮನಸ್ತಾಪ ಬಂದರೂ ಅದನ್ನು ಬಗೆಹರಿಸಲು ದೇವಾಲಯಗಳಲ್ಲಿ ಜನ ಸೇರುತಿದ್ದರು. ಆ ಗೊಂದಲ, ವ್ಯತ್ಯಾಸ ಸರಿಪಡಿಸಲು ತೀರ್ಪು ನೀಡುತ್ತಿದ್ದುದು ದೇವರು ಎಂಬ ನಂಬಿಕೆ ಇತ್ತು. ಇಂತಹ ಕಾರಣಗಳಿಂದ ದೇವಾಲಯಗಳು ಬರೀ ಧಾರ್ಮಿಕ ಕೇಂದ್ರಗಳಾಗದೇ ಸಾಂಸ್ಕೃತಿಕ ಕೇಂದ್ರಗಳಾಗಿದ್ದವು ಎಂಬುದು ಧಾರ್ಮಿಕ ನಂಬಿಕೆಯಾಗಿತ್ತು. ಮನುಷ್ಯನ ಸಕಲ ಬಯಕೆಯನ್ನು ಈಡೇರಿಸುವ ಕೇಂದ್ರಗಳಾಗಿತ್ತು ಎಂಬುದು ಇಲ್ಲಿ ಪ್ರಸ್ತುತವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರತಿಯೊಂದು ಲಿಂಗಕ್ಕೂ ಒಂದೊಂದು ಕ್ಷೇತ್ರದಲ್ಲಿ ಒಂದೊಂದು ಹೆಸರಿದೆ. ಇಲ್ಲಿ ಶಂಭುಲಿಂಗೇಶ್ವರ ಎಂದರೆ, ನಂಜನಗೂಡಿನಲ್ಲಿ ನಂಜುಂಡೇಶ್ವರ ಎಂತಲೂ, ಕಾಶಿಯಲ್ಲಿ ವಿಶ್ವೇಶ್ವರ ಎಂತಲೂ ಕರೆಯುತ್ತಾರೆ. ದೇವರಿಗೆ ನಮ್ಮ ಕಲ್ಪನೆಯಲ್ಲಿ ಒಂದೊಂದು ರೂಪ ನೀಡಿದ್ದೇವೆ. ದೇವಾಲಯದಲ್ಲಿ ದೇವರಿದ್ದಾನೆ ಎಂಬ ನಂಬಿಕೆಯಿಂದ ನಮ್ಮ ಆತ್ಮ ಸಂತೋಷಕ್ಕೆ ಪೂರಕವಾಗಿ ಮೂರ್ತಿ ರೂಪ ನೀಡಿದ್ದೇವೆ ಎಂದು ಅವರು ಹೇಳಿದರು.ಭಗವಂತನಿಗೆ ನಾನಾರೂಪಗಳನ್ನು ಕೊಟ್ಟಿದ್ದರೂ ದೇವರು ಒಬ್ಬನೇ ಅದಕ್ಕೆ ಬಸವಣ್ಣನವರು ಹೇಳಿದಂತೆ ದೇವನೊಬ್ಬ ನಾಮ ಹಲವು ಎಂಬುದನ್ನು ನಾವು ತಿಳಿಯಬೇಕು. ಕಣ್ಣಿಗೆ ಕಾಣದ್ದು, ಕೈಗೆ ಸಿಗದದ್ದು ಎಂದರೆ ಭಗವಂತ. ನಮ್ಮೊಳಗೆ ಭಗವಂತನಿದ್ದಾನೆ. ಒಳ್ಳೆಯ ಕೆಲಸ ಕಾರ್ಯಗಳ ಮೂಲಕ, ಮತ್ತೊಬ್ಬರ ಭಾವನೆ, ಕಷ್ಟಕ್ಕೆ ಸ್ಪಂದಿಸುವ ಮೂಲಕ ನಮ್ಮ ಒಳಗಿನ ಪರಮಾತ್ಮನಿಗೆ ಸಂತೋಷವಾಗುವಂತೆ ನಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಎಂ.ಎಲ್. ಹುಂಡಿ ವಿರಕ್ತ ಮಠದ ಶ್ರೀ ಗೌರಿಶಂಕರ ಸ್ವಾಮೀಜಿ ಮಾತನಾಡಿ, ಜನ ಸಮುದಾಯ ಕೋಮು ಸೌಹಾರ್ದತೆಯಿಂದ ಬದುಕಲು ದೇವಸ್ಥಾನಗಳು ಅಗತ್ಯ. ಮನುಷ್ಯನ ಮಾನಸಿಕ ನೆಮ್ಮದಿಗೂ ಇವುಗಳು ಕಾರ್ಯನಿರ್ವಹಿಸುತ್ತಿವೆ. ಪ್ರಚಲಿತ ದಿನಗಳಲ್ಲಿ ಧಾರ್ಮಿಕ ಚಿಂತನೆ ಜೊತೆಗೆ ಅಧಃಪತನಕ್ಕಿಳಿಯುತ್ತಿರುವ ನೈತಿಕತೆ ಉಳಿಸಿ ಬೆಳೆಸುವಲ್ಲಿ ನಾಡಿನ ಶ್ರೀಗಳ ಪಾತ್ರ ಅಮೂಲ್ಯ. ಮಾನವೀಯ ಮೌಲ್ಯಗಳ ಉಳಿವಿಗಾಗಿ ಧಾರ್ಮಿಕ ಚಿಂತನೆಗಳ ಕಾರ್ಯ ಅಗತ್ಯ ಎಂದರು.ಕಾರ್ಯಕ್ರಮದ ನಂತರ ಸಾಂಸ್ಕೃತಿಕ ನಾಯಕ ಶ್ರೀಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ಸುಗಂಧರಾಜು ನಿವಾಸದಲ್ಲಿ ಸುತ್ತೂರು ಶ್ರೀಗಳಿಗೆ ಪಾದಪೂಜೆ ಹಮ್ಮಿಕೊಳ್ಳಲಾಗಿತ್ತು.
ಧಾರ್ಮಿಕ ಸಭೆಯಲ್ಲಿ ಕನಕಪುರ ದೇಗುಲ ಮಠದ ಶ್ರೀಮುಮ್ಮಡಿ ನಿರ್ವಾಣ ಸ್ವಾಮಿ, ದೇವನೂರು ಮಠದ ಶ್ರೀ ಮಹಂತಸ್ವಾಮೀಜಿ, ವಾಟಾಳು ಮಠದ ಶ್ರೀಸಿದ್ದಲಿಂಗ ಶಿವಾಚಾರ್ಯಸ್ವಾಮೀಜಿ, ಸಾಲೂರು ಬೃಹನ್ಮಠದ ಡಾ. ಶಾಂತ ಮಲ್ಲಿಕಾರ್ಜುನ ಸ್ವಾಮಿ, ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿ, ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವಸ್ವಾಮಿ, ಮಾಡ್ರಹಳ್ಳಿ ಪಟ್ಟದ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಹಲವಾರ ಮಠದ ಷಡಕ್ಷರ ದೇಶೀಕೇಂದ್ರ ಸ್ವಾಮಿ, ಸಿದ್ದರಹಳ್ಳಿ ಪಾರಮಾರ್ಥಿಕ ಗವಿಮಠದ ಮಲ್ಲಿಕಾರ್ಜುನ ಸ್ವಾಮಿ, ನೆರಗ್ಯಾತನಹಳ್ಳಿ ಮಠದ ಇಮ್ಮಡಿ ಶಿವಕುಮಾರ ಸ್ವಾಮಿ, ಮುಡುಕುತೊರೆ ತೋಪಿನಮಠದ ಮಲ್ಲಿಕಾರ್ಜುನ ಸ್ವಾಮಿ, ಮೇದನಿಮಠದ ಶಿವಲಿಂಗಸ್ವಾಮಿ, ಕುಂತೂರು ಮಠದ ಶಿವಪ್ರಭುಸ್ವಾಮಿ,ನಿವೃತ್ತ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಂ. ಪುಟ್ಟಬುದ್ಧಿ, ಎಸ್.ಬಿ. ಸುಗಂಧರಾಜು, ಗೌಡ್ರು ದೊಡ್ಡೇಗೌಡರು, ಎಂ. ಗಿರೀಶ್, ನಿವೃತ್ತ ಮುಖ್ಯ ಶಿಕ್ಷಕ ಪುಟ್ಟಬುದ್ಧಿ, ನಿವೃತ್ತ ಉಪ ತಹಸೀಲ್ದಾರ್ ವಿ. ಪ್ರಭುಸ್ವಾಮಿ, ಬಸವರಾಜು, ಅಂಗಡಿ ಪುಟ್ಟಸ್ವಾಮಿ, ಪರಶಿವ, ಅಡಿಗೆ ಕಂಟ್ರ್ಯಾಕ್ಟರ್ ರಾಜೇಶ್, ಬಸವಲಿಂಗಪ್ಪ, ಸಿ. ಬಸವಣ್ಣ, ಪಿ. ನಾಗರಾಜು, ಮಹದೇವಪ್ಪ, ಗ್ರಾಪಂ ಸದಸ್ಯ ಎಸ್. ಮಹೇಶ್, ಸಾಮಿಲ್ ಮಾಲಿಕ ಎಸ್.ಎಂ. ಜಯಶಂಕರ್ ಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್, ಕುಮಾರ್, ಎಸ್.ಬಿ.ಟಿ. ಸುರೇಶ್, ವಕೀಲರ ಸಂಘದ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ, ಹೋಟೆಲ್ ಕುಮಾರ್, ವಕೀಲ ಜ್ಞಾನೇಂದ್ರ ಮೂರ್ತಿ, ಜ್ಯೋತಿ ಪರಮೇಶ್ ಪಟೇಲ್, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ರವಿ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಎಸ್ಎಂಆರ್ ಪ್ರಕಾಶ್, ಯುವ ಘಟಕದ ಅಧ್ಯಕ್ಷ ಅಶೋಕ್, ದೊಡ್ಡನಹುಂಡಿ ನಂಜುಂಡಸ್ವಾಮಿ, ರವೀಶ, ಎಸ್.ಬಿ. ಶಿವಪ್ರಸಾದ್, ಕಾವೇರಿಪುರ ಮಲ್ಲು, ಪುರಸಭಾ ಸದಸ್ಯ ಎಸ್.ಕೆ. ಕಿರಣ್, ಬೆನಕನಹಳ್ಳಿ ವಿಜಯಕುಮಾರ್, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಮಲ್ಲಣ್ಣ, ಉಪಾಧ್ಯಕ್ಷ ಫಣೀಶ್ ಕುಮಾರ್, ಆಲ್ದೂರು ರಾಜಶೇಖರ್, ಮೂಗೂರು ಕುಮಾರಸ್ವಾಮಿ, ಕರೋಹಟ್ಟಿ ಬಸವರಾಜು ಸೇರಿದಂತೆ ಶಂಭುದೇವನಪುರ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.