ರಾಣಿಬೆನ್ನೂರು: ರೇಣುಕಾಚಾರ್ಯರ ತ್ಯಾಗ, ಅಧ್ಯಾತ್ಮಿಕ ಶ್ರದ್ಧೆ, ಜನಪರ ಕಾಳಜಿ, ಭವ ಬಂಧಗಳಿಂದ ಜನಸಾಮಾನ್ಯರನ್ನು ಮುಕ್ತಗೊಳಿಸಿ ಅವರ ಬದುಕನ್ನು ಹಸನು ಮಾಡಲು ರೇಣುಕಾಚಾರ್ಯರ ಜಯಂತಿ ಸಾಕ್ಷಿಯಾಗಿದೆ ಎಂದು ದಾವಣಗೆರೆ ಆವರಗೊಳ್ಳ ಪುರವರ್ಗಮಠದ ಓಂಕಾರ ಶಿವಾಚಾರ್ಯರು ನುಡಿದರು. ನಗರದ ದೊಡ್ಡಪೇಟೆ ಪಂಚಾಚಾರ್ಯ ಜಗದ್ಗುರು ಮಂಗಲ ಮಂದಿರದ ಹಿರೇಮಠದಲ್ಲಿ ತಾಲೂಕು ಜಂಗಮ ನೌಕರರ ವೇದಿಕೆ ಮತ್ತು ತಾಲೂಕು ಜಂಗಮ ಸಮಾಜದ ಆಶ್ರಯದಲ್ಲಿ ಏರ್ಪಡಿಸಿದ್ದ ರೇಣುಕಾಚಾರ್ಯರ ಜಯಂತಿ, ಯುಗಮಾನೋತ್ಸವ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಂದಾಯ ಇಲಾಖೆಯ ವಾಗೀಶ ಮಳೇಮಠ ಅವರು ರೇಣುಕಾಚಾರ್ಯ ಜಯಂತಿ ಬಗ್ಗೆ ಮಾತನಾಡಿದರು. ಜಿಲ್ಲಾ ಬಿಸಿಎಂ ಇಲಾಖೆ ಅಧಿಕಾರಿ ವಿ.ಎಸ್. ಹಿರೇಮಠ, ತಾಲೂಕು ಜಂಗಮ ನೌಕರರ ವೇದಿಕೆ ಅಧ್ಯಕ್ಷ ಮುಕ್ತೇಶ್ವರ ಕೂರಗುಂದಮಠ, ರವಿಕುಮಾರ ಪಾಟೀಲ, ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯದರ್ಶಿ ಪರಮೇಶ ಯಡಿಯಾಪುರ, ನಿವೃತ್ತ ಶಿರಸ್ತೇದಾರ ಎಂ.ವಿ. ಹಿರೇಮಠ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ವಿ. ಉಜ್ಜಯಿನಿಮಠ, ಶಿವಯೋಗಿ ಸ್ವಾಮಿ ಮಹಾನುಭಾವಿಮಠ, ಆರ್.ಎಂ. ಬೆಳವಿಗಿಮಠ, ಚೇತನಾ ಪಾಟೀಲ, ಜಗದೀಶ ಮಳಿಮಠ, ವಿದ್ಯಾವತಿ ಜಂಗಿನ, ಕೊಟ್ರೇಶ ಅಜ್ಜೋಡಿಮಠ, ಎಂ.ಕೆ. ಸಾಲಿಮಠ, ಸರೋಜಮ್ಮ ಅಜ್ಜೇವಡಿಮಠ, ಶಿವಯೋಗಯ್ಯ ಹಿರೇಮಠ, ಎಸ್.ಸಿ. ಷಡಾಕ್ಷರಿಮಠ, ಎಫ್.ಕೆ. ಭಸ್ಮಾಂಗಿಮಠ, ಎಸ್.ವಿ. ಸಾಲಿಮಠ, ವಾಗೀಶ ನೀರಲಗಿಮಠ, ಮುತ್ತಣ್ಣ ಸುರಳಿಕೇರಿಮಠ ಉಪಸ್ಥಿತರಿದ್ದರು.