ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬೀದಿ ದೀಪ ನಿರ್ವಹಣೆ ಹೊತ್ತ ಗುತ್ತಿಗೆದಾರನಿಗೆ ಹಣ ಕೊಟ್ಟಿರಲಿಲ್ಲ ಎಂಬುದು ಬಯಲಾಗಿದೆ. ಇದು ಪಟ್ಟಣದ ಜನರ ದುರಂತ ವಿಷಯವಲ್ಲವೇ? ಪಟ್ಟಣದ ಜೋಡಿ ರಸ್ತೆಯ ಬಹುತೇಕ ದೀಪಗಳು ಸೋಮವಾರ ಸಂಜೆಯಿಂದಲೇ ಬೆಳಗಲು ಶುರು ಮಾಡಿವೆ. ನೆಹರು ಪಾರ್ಕ್ ದೀಪದಿಂದ ಜಗಮಗಿಸಿದೆ.
ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಕನ್ನಡಪ್ರಭ ಪತ್ರಿಕೆಯ ವರದಿಗೆ ಎಚ್ಚೆತ್ತು ಹಲವು ತಿಂಗಳಿನಿಂದ ಉರಿಯದ ಜೋಡಿ ರಸ್ತೆಯ ದೀಪ ಬೆಳಕು ಬರಲು ಕಾರಣರಾಗಿದ್ದಾರೆ ಎಂದು ಸಾರ್ವಜನಿಕರು ಅಭಿನಂದಿಸಿದ್ದಾರೆ.ಅಭಿನಂದನೆ ಸುರಿಮಳೆ:
ಕನ್ನಡಪ್ರಭಕ್ಕೆ ನೂರಾರು ಮಂದಿ ಸಾರ್ವಜನಿಕರು ಅಭಿನಂದನೆ ಸಲ್ಲಿಸುವ ಜೊತೆಗೆ ಪುರಸಭೆ ನೂತನ ಮುಖ್ಯಾಧಿಕಾರಿ ಎಸ್.ಶರವಣರ ಕಾಯಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಪುರಸಭೆ ಬಣ್ಣ ಬಯಲು:
ಪಟ್ಟಣದ ಜೋಡಿ ರಸ್ತೆಯ ದೀಪಗಳ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರನಿಗೆ ಪುರಸಭೆ ನಿರ್ವಹಣೆಯ ಹಣ ಕೊಡದೇ ಇದ್ದದ್ದು, ಜೋಡಿ ರಸ್ತೆಯ ಲೈಟ್ ಗಳು ಉರಿಯದಿರಲು ಪ್ರಮುಖ ಕಾರಣ ಎನ್ನಲಾಗಿದೆ.ಪಟ್ಟಣದ ಎಲ್ಲ ಬೀದಿ ದೀಪಗಳನ್ನು ೧೫ ದಿನಗಳಲ್ಲಿ ಉರಿಸಲು ಕ್ರಮ ವಹಿಸುತ್ತೇನೆ. ಜೋಡಿ ರಸ್ತೆ ಬೀದಿ ದೀಪಗಳ ಕೇಬಲ್ ಬದಲಿಸಲು ಕ್ರಿಯಾ ಯೋಜನೆ ಆಗಿದೆ ಹದಿನೈದು ದಿನಗಳೊಳಗೆ ಎಲ್ಲ ಬೀದಿ ದೀಪಗಳು ಉರಿಯಲು ಕ್ರಮ ತೆಗೆದುಕೊಳ್ಳಲಾಗುವುದು.
-ಎಸ್.ಶರವಣ,ಪುರಸಭೆ ನೂತನ ಮುಖ್ಯಾಧಿಕಾರಿ