ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ತಾಲೂಕು ರಮ್ಮನಹಳ್ಳಿ ನಿವಾಸಿ ಲೇ. ಕರಿಶೆಟ್ಟಿ ಎಂಬವರ ಪುತ್ರ ಶಿವಣ್ಣ(50) ಬಂಧಿತ ಆರೋಪಿ. ಇವರನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಹದೇವಪುರ ರಸ್ತೆಯ ರಮ್ಮನಹಳ್ಳಿಗೆ ಸೇರಿದ ಆಟದ ಮೈದಾನದ ಬಳಿ 2 ಗೌಜಲ ಹಕ್ಕಿಗಳನ್ನು ಮಾರಾಟಕ್ಕೆ ಯತ್ನಿಸುತ್ತಿರುವುದಾಗಿ ದೊರೆತ ಮಾಹಿತಿ ಮೇರೆಗೆ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ, ಆತನ ಬಳಿಯಿದ್ದ ಎರಡು ಗೌಜಲ ಹಕ್ಕಿಗಳೊಂದಿಗೆ 1 ಪಂಜರವನ್ನು ವಶಪಡಿಸಿಕೊಂಡಿದ್ದಾರೆ.ಮಡಿಕೇರಿ ಸಿಐಡಿ ಅರಣ್ಯ ಘಟಕದ ಎಸ್ಪಿ ಪವನ್ ನೆಜ್ಜೂರು ಮಾರ್ಗದರ್ಶನದಲ್ಲಿ ಮೈಸೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಎಸ್ಐ ಪಿ. ಕಿರಣ್ ಕುಮಾರ್, ಸಿಬ್ಬಂದಿ ವೆಂಕಟೇಶ್, ರಾಮಕೃಷ್ಣ, ಯತೀಶ್ ಕುಮಾರ್, ಶಶಿಧರ್, ಅರುಣ್ ಈ ದಾಳಿ ನಡೆಸಿದ್ದಾರೆ.