ಪರರ ಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ಸಮಾಜಸೇವೆ: ಬಿ.ಕೆ.ನಾಯ್ಕ್

KannadaprabhaNewsNetwork |  
Published : Feb 26, 2025, 01:04 AM IST
ಕಾರ್ಕಳ-ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘ  ಛತ್ರಪತಿ ಶಿವಾಜಿ ಜಯಂತಿ- ಮರಾಠಿ ಕ್ರೀಡಾ ಸಂಭ್ರಮ 2025 | Kannada Prabha

ಸಾರಾಂಶ

ಕಾರ್ಕಳ, ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘ ವತಿಯಿಂದ ಕಾರ್ಕಳ ಸ್ವರಾಜ್ ಮೈದಾನದಲ್ಲಿ ಛತ್ರಪತಿ ಶಿವಾಜಿ ಜಯಂತಿ ಹಾಗೂ ಮರಾಠಿ ಕ್ರೀಡಾ ಸಂಭ್ರಮ 2025 ಕಾರ್ಯಕ್ರಮ ನಡೆಯಿತು.

ಮರಾಠಿ ಸಂಘದಿಂದ ಛತ್ರಪತಿ ಶಿವಾಜಿ ಜಯಂತಿ, ಮರಾಠಿ ಕ್ರೀಡಾ ಸಂಭ್ರಮ

ಕನ್ನಡಪ್ರಭ ವಾರ್ತೆ ಕಾರ್ಕಳ

ಸಮಾಜದಲ್ಲಿರುವ ದುರ್ಬಲರು, ತೀರ ಕಷ್ಟದಲ್ಲಿರುವ ಜನರ ಬದುಕಿಗೆ ಸ್ಪಂದಿಸಿ ಆಸರೆಯಾಗಿ, ಅವರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಲ್ಲಿ ಅದರಲ್ಲಿ ಜೀವನದ ಸಾರ್ಥಕ್ಯ ಇದೆ. ಪರರ ಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ಸಮಾಜಸೇವೆ. ಸಾಧನೆ ಮಾಡಲು ಬಹಳಷ್ಟು ಅವಕಾಶಗಳು ಇವೆ. ಆದ್ದರಿಂದ ಪ್ರತಿಯೊಬ್ಬರೂ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಸ್ಥಾನಕ್ಕೆ ಏರಲು ಪ್ರಯತ್ನಿಸಬೇಕು ಎಂದು ಅಂತಾರಾಷ್ಟ್ರೀಯ ಈಜು ತರಬೇತುದಾರ ಬಿ.ಕೆ. ನಾಯ್ಕ್ ಮಂಗಳೂರು ಹೇಳಿದರು.

ಅವರು ಕಾರ್ಕಳ, ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘ ವತಿಯಿಂದ ಕಾರ್ಕಳ ಸ್ವರಾಜ್ ಮೈದಾನದಲ್ಲಿ ಆಯೋಜಿಸಲಾದ ಛತ್ರಪತಿ ಶಿವಾಜಿ ಜಯಂತಿ ಹಾಗೂ ಮರಾಠಿ ಕ್ರೀಡಾ ಸಂಭ್ರಮ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಘ ಅಧ್ಯಕ್ಷ ಶೇಖರ ಕಡ್ತಲ ಅಧ್ಯಕ್ಷತೆ ವಹಿಸಿ, ಮುಂದೆ ಹೋಗುವರ ಕಾಲನ್ನು ಎಳೆಯದೆ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು. ಎಲ್ಲರ ಪಾಲ್ಗೊಳ್ಳುವಿಕೆಯಿಂದ ಬಲಿಷ್ಠ ಸಮಾಜ ನಿರ್ಮಾಣ ಆಗಬೇಕೆಂದು ತಿಳಿಸಿದರು.ಕರ್ನಾಟಕ ಬ್ಯಾಂಕ್‌ನ ಪ್ರವೀಣ್ ನಾಯ್ಕ್ ಸಂಪಿಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ದ.ಕ.ಜಿಲ್ಲಾ ಮಾಜಿ ಅಧ್ಯಕ್ಷ ಶ್ರೀನಿವಾಸ ನಾಯ್ಕ್ ಧ್ವಜಾರೋಹಣಗೈದರು.

ವೇದಿಕೆಯಲ್ಲಿ ಮಾಧವ ನಾಯ್ಕ್ ದುರ್ಗ, ರಾಮಚಂದ್ರ ನಾಯ್ಕ್ ಅರ್ಬಿ, ಕಂಟ್ರಾಕ್ಟರ್ ರವಿರಾಜ್ ನಾಯ್ಕ್, ಶಿಲ್ಪಿ ವಸಂತ್ ನಾಯ್ಕ್, ಬ್ಯಾಂಕ್ ಉದ್ಯೋಗಿ ವೆಂಕಟೇಶ್ ನಾಯ್ಕ್, ಪುತ್ತಿಗೆ ಸಂಘ ಅಧ್ಯಕ್ಷ ವಿಠಲ ನಾಯ್ಕ್, ಕಸ್ತೂರಿ ಶೇಖರ ನಾಯ್ಕ್ ಮುದ್ರಾಡಿ, ನಾಗೇಂದ್ರ ನಾಯ್ಕ್ ಹೆಬ್ರಿ, ಸುಗಂಧಿ ಶ್ರೀನಿವಾಸ ನಾಯ್ಕ್, ಮಹಿಳಾ ಘಟಕ ಅಧ್ಯಕ್ಷೆ ಶಶಿಕಲಾ ಹಿರ್ಗಾನ, ಉಮೇಶ್ ನಾಯ್ಕ್ ಸೂಡ, ಶಂಕರ ನಾಯ್ಕ್ ದುರ್ಗ, ಶ್ರೀನಿವಾಸ ನಾಯ್ಕ್ ನಕ್ರೆ ಉಪಸ್ಥಿತರಿದ್ದರು.

ಈ ಸಂದರ್ಭ ಇತ್ತೀಚೆಗೆ ನಿಧನರಾದ ಪ್ರವೀಣ್ ನಾಯ್ಕ್ ಕುಕ್ಕುಜೆ ಅವರ ಕುಟುಂಬಕ್ಕೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.ಪದ್ಮಾಕರ ನಾಯ್ಕ್ ಮಿಯಾರು ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಪವನ್ ದುರ್ಗ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ಇರ್ವತ್ತೂರು ವಂದಿಸಿದರು.

ನಂತರ ಸಾವಿರಾರು ಸಮಾಜ ಬಂಧುಗಳ ಸಮ್ಮುಖದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾಟ, ತ್ರೋಬಾಲ್ ಹಾಗೂ ಕಾರ್ಕಳ, ಹೆಬ್ರಿ ತಾಲೂಕುಮಟ್ಟದ ವಾಲಿಬಾಲ್, ಹಗ್ಗ ಜಗ್ಗಾಟ ಹಾಗೂ ಹಾಗೂ ವಾರ್ಷಿಕ ಅಥ್ಲೆಟಿಕ್ಸ್ ಸ್ಪರ್ಧೆ ನಡೆಯಿತು. ಸಂಜೆ ಗಣ್ಯರ ಸಮ್ಮುಖದಲ್ಲಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''