ಮಕ್ಕಳ ಪ್ರತಿಭೆ ಪೋಷಿಸಲು ಪುರಸ್ಕಾರ ಪೂರಕ: ಶಾಸಕ ಗೋಪಾಲಕೃಷ್ಣ ಬೇಳೂರು

KannadaprabhaNewsNetwork |  
Published : Aug 06, 2024, 12:31 AM IST
ಕೆಂಪೇಗೌಡ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಸಾಗರದಲ್ಲಿ ತಾಲೂಕು ಒಕ್ಕಲಿಗ ಸಂಘದ ವತಿಯಿಂದ ವಿವಿಧ ಸಾಧಕರಿಗೆ ಕೆಂಪೇಗೌಡ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಸಾಗರ

ತಾಲೂಕಿನಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿರುವ ಒಕ್ಕಲಿಗ ಸಮಾಜದವರು ಸಂಘಟಿತರಾಗಿ ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕಾಗಿ ಇಂತಹ ಪುರಸ್ಕಾರ ಸಮಾರಂಭ ಏರ್ಪಡಿಸುವುದು ಸಮಾಜದ ಎಲ್ಲ ಸಮುದಾಯಗಳಿಗೂ ಮಾದರಿಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಭಾನುವಾರ ತಾಲೂಕು ಒಕ್ಕಲಿಗರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶ್ರೀ ಕೆಂಪೇಗೌಡ ಸಾಧಕ ರತ್ನ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಪ್ರತಿಭೆಯನ್ನು ಪೋಷಿಸಲು ಪ್ರತಿ ವರ್ಷವೂ ಪ್ರತಿಭಾ ಪುರಸ್ಕಾರದಂಥ ಕಾರ್ಯಕ್ರಮ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ.ಗುಂಡಪ್ಪ ಗೌಡ ಮಾತನಾಡಿ, ನಮ್ಮ ಸಮಾಜದ ಮಕ್ಕಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮುನ್ನುಗ್ಗಲು ಇಂಥ ಕಾರ್ಯಕ್ರಮ ಆಯೋಜನೆ ಅಗತ್ಯ. ಅದಕ್ಕಾಗಿ ಸಮಾಜದ ಎಲ್ಲ ಬಾಂಧವರೂ ಒಟ್ಟಾಗಿ ನಿಂತು ಸಮಾರಂಭದ ಯಶಸ್ಸಿಗೆ ಶ್ರಮಿಸಬೇಕು. ಸಂಖ್ಯೆಯಲ್ಲಿ ಅಲ್ಪವಿದ್ದರೂ, ಸಂಘಟನೆಯಲ್ಲಿ ಹಿಂದೆ ಬೀಳುವಂತಾಗಬಾರದು. ಅದಕ್ಕಾಗಿ ಸಂಘಟನೆಯ ಜೊತೆಯಲ್ಲಿ ಎಲ್ಲರೂ ಗುರುತಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.

ಶ್ರೀ ಕೆಂಪೇಗೌಡ ಯುವ ವೇದಿಕೆ ವತಿಯಿಂದ ನಾಟಿ ವೈದ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೊಲ್ಕರ್ ಕನ್ನ ಗೌಡ, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೃಷ್ಣಮೂರ್ತಿ ಬೇಳೂರು, ಯಕ್ಷಗಾನ ಭಾಗವತ ಮಂಜಪ್ಪ ಗೌಡ ಚಳ್ಮನೆ ಹಾಗೂ ನಿವೃತ್ತ ಸೈನಿಕ ದಿವಾಕರ್ ಜಿಗಳಮನೆ ಅವರಿಗೆ ೨೦೨೪ನೇ ಸಾಲಿನ ಶ್ರೀ ಕೆಂಪೇಗೌಡ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಮಂಜುನಾಥಗೌಡ, ಪ್ರಧಾನ ಕಾರ್ಯದರ್ಶಿ ಟಿ.ಬಸವರಾಜ, ಕೆಂಪೇಗೌಡ ಯುವ ವೇದಿಕೆಯ ಅಧ್ಯಕ್ಷ ನವೀನ್ ಕುಮಾರ್ ಕೊಪ್ಪಲಗದ್ದೆ, ಚುಂಚಾದ್ರಿ ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಉಮಾ ಬಸವರಾಜ್ ಹಾಗೂ ಉಪನ್ಯಾಸಕರಾದ ಚಿದಾನಂದ ಪಟಗಾರ, ಸಂಘದ ಪದಾಧಿಕಾರುಗಳು, ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ಕೃಷ್ಣಮೂರ್ತಿ ಉಳ್ಳೂರು ಸ್ವಾಗತಿಸಿದರು, ಬಸವರಾಜ್ ನಿರೂಪಿಸಿದರು. ಮೋಹನ್ ಅಡ್ಡೇರಿ ವಂದಿಸಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ