ಕನ್ನಡಪ್ರಭ ವಾರ್ತೆ ಕಾಗವಾಡ
ಉಗಾರ ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು ನಾಲ್ಕು ನೂರು ಕುಟುಂಬಗಳ 2 ರಿಂದ ಮೂರು ಸಾವಿರ ರೈತರು ಬೀದಿಗೆ ಬಿದ್ದಿದ್ದಾರೆ. ಶ್ರೀಮಂತ ಪಾಟೀಲರು ಈ ಬಗ್ಗೆ ಉತ್ತರ ಕೊಡಲಿ ಎಂದು ಆಗ್ರಹಿಸಿದರು.
ಹೋಗಲಿ, ತಮ್ಮ ಕಾರ್ಖಾನೆಯಲ್ಲಿ ಕಬ್ಬು ತೂಕದಲ್ಲಿ ಏನೂ ವ್ಯತ್ಯಾಸ ಮಾಡಿಲ್ಲ. ಕಾಟಾ ಹೊಡೆದಿಲ್ಲ ಎಂದು ಎಂದು ಮೊಮ್ಮಕ್ಕಳು, ಮರಿಮಕ್ಕಳ ಮೇಲೆ ಆಣೆ ಮಾಡಿದ್ದರು. ಆದರೆ, ತೂಕದಲ್ಲಿ ವ್ಯತ್ಯಾಸ ಮಾಡಿದ್ದನ್ನು ಪ್ರಶ್ನಿಸಿದ ಟ್ರ್ಯಾಕ್ಟರ್ ಚಾಲಕ, ಮಾಲೀಕರ ಮೇಲೆ ಹಲ್ಲೆ ಮಾಡಿ ಮೋಸ ಮಾಡುವುದನ್ನು ಇನ್ನೂ ಮುಂದುವರಿಸಿದ್ದು ನಾಚಿಕೆಯಾಗಬೇಕು ಎಂದು ಶ್ರೀಮಂತ ಪಾಟೀಲ ವಿರುದ್ಧ ಆಕ್ರೋಶ ಹೊರಹಾಕಿದರು.ಶ್ರೀಮಂತ ಪಾಟೀಲ, ತಮ್ಮ ಕಾರ್ಖಾನೆಗಾಗಿ ಎಷ್ಟು ಜಾಗ ಖರೀದಿಸಿದ್ದಾರೆ? ಅಧಿಕೃತವಾಗಿ ಎಷ್ಟು ಪಡೆದಿದ್ದಾರೆ ಎಂಬುದನ್ನು ಮೊದಲು ಬಹಿರಂಗಪಡಿಸಬೇಕು. ಅಲ್ಲದೇ, ಕೆಂಪವಾಡ, ನವಲಿಹಾಳ, ಕೌಲಗುಡ್ಡ ಮತ್ತು ನವಲಿಹಾಳ ಗ್ರಾಮಗಳಲ್ಲಿ ಕಾರ್ಖಾನೆಯ ಕಲುಷಿತ ನೀರು ಬಿಟ್ಟು ರೈತರು ಮತ್ತು ಗ್ರಾಮಸ್ಥರ ಪರಿಸ್ಥಿತಿ ಕೆಟ್ಟು ಹೋಗುವಂತೆ ಮಾಡಿದ್ದಾರೆ. ಆದರೆ, ಅವರಿಗೆ ಏನು ಪರಿಹಾರ ಕೊಡುತ್ತೀರಿ? ಮತ್ತು ಕೆಂಪವಾಡ ಕೆನಾಲ್ನಲ್ಲಿ ಕಲುಷಿತ ನೀರನ್ನು ಬಿಟ್ಟು ನಾಲ್ಕು ಹಳ್ಳಿಗಳ ರೈತರು ತಮ್ಮ ಹೊಲದಲ್ಲಿ ಬೆಳೆದ ಬೆಳೆಯನ್ನು ಕಳೆದುಕೊಂಡಿದ್ದಾರೆ. ಅವರಿಗೆ ಏನು ಪರಿಹಾರ ಕೊಡುತ್ತೀರಿ ಎಂಬುದನ್ನು ಮೊದಲು ಹೇಳಬೇಕು ಎಂದು ಹೇಳಿದರು.
ಗೂಂಡಾಗಿರಿ ಸಾಬೀತಾದರೆ ರಾಜಕೀಯ ನಿವೃತ್ತಿ:
ನಾಲ್ಕು ಜನರನ್ನು ಕರೆದುಕೊಂಡು ಪ್ರತಿಭಟನೆ ಮಾಡಿ, ಯಾವುದೇ ದಾಖಲೆ ಇಲ್ಲದೇ ಗಂಭೀರ ಆರೋಪ ಮಾಡಿದರೆ ದೊಡ್ಡ ನಾಯಕರಾಗುವುದಿಲ್ಲ. ತಾಕತ್ತಿದ್ದರೆ, ಧೈರ್ಯ ಇದ್ದರೆ ದಾಖಲೆ ಸಹಿತ ಮಾತನಾಡಿ. ನಿಮ್ಮ ತಾಟಿನಲ್ಲಿ ಕತ್ತೆ ಬಿದ್ದಿದೆ ಮೊದಲು ಅದನ್ನು ನೋಡಿಕೊಳ್ಳಿ. ಇನ್ನೊಬ್ಬರ ತಾಟಿನಲ್ಲಿಯ ನೊಣ ನೋಡಬೇಡಿ ಎಂದು ತಿರುಗೇಟು ನೀಡಿದರು.
ಶ್ರೀಮಂತ ಪಾಟೀಲ ಚುನಾವಣೆ ಸಂದರ್ಭದಲ್ಲಿ ಭ್ರಷ್ಟಾಚಾರ ಮುಕ್ತ ಕಾಗವಾಡ ಮತಕ್ಷೇತ್ರ ಮಾಡುತ್ತೇನೆ. ಹಳ್ಳಿಗೆ ಹೋಗಿ ಪಂಚಾಯಿತಿ ಮುಂದೆ ಬೋರ್ಡ್ ಹಾಕುತ್ತೇನೆ ಎಂದು ಹೇಳಿದ್ದರು. ಆದರೆ, ಶಾಸಕರಾದ ಮೇಲೆ ಅವರ ಇಪ್ಪತ್ತು ಪಿಎಗಳು ಎಷ್ಟು ಅಧಿಕಾರಿಗಳಿಗೆ ಕಿರುಕುಳ ಕೊಟ್ಟಿದ್ದಾರೆ, ಗುತ್ತಿಗೆದಾರರ ಕಡೆಯಿಂದ ಎಷ್ಟು ಭ್ರಷ್ಟಾಚಾರ ಮಾಡಿದ್ದೀರಿ ಎಲ್ಲವೂ ಜಗಜ್ಜಾಹೀರವಿದೆ ಎಂದರು.
ಪ್ರತಿಭಟನೆ ವೇದಿಕೆಯಲ್ಲಿ ಮಹಾದೇವ ಕೋರೆ ಮತ್ತು ಯಾರ್ಯಾರೋ ಮಾತನಾಡಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಮಹಾದೇವ ಕೋರೆ ಪಂಚಾಯಿತಿಯನ್ನು ಲೂಟಿ ಮಾಡಿದಾತ. ಎಷ್ಟು ಮನೆಯಿಂದ ದುಡ್ಡು ತಿಂದಿದ್ದಾನೆ. ಎಷ್ಟು ಭ್ರಷ್ಟಾಚಾರ ಮಾಡಿದ್ದಾನೆ ಎಂಬುದರ ಬಗ್ಗೆ ತಮ್ಮ ಚಾರಿತ್ರ್ಯವನ್ನೊಮ್ಮೆ ತಾವೇ ನೋಡಿಕೊಳ್ಳಲಿ ಎಂದು ಕಿಡಿಕಾರಿದರು.
-----------
ಜೀವನಪೂರ್ತಿ ಶ್ರೀಮಂತ ಪಾಟೀಲ ಮಾಜಿ ಆಗಿಯೇ ಇರುತ್ತಾರೆ. ರಮೇಶ ಜಾರಕಿಹೊಳಿಗೆ ಹೇಳಲು ಬಯಸುತ್ತೇನೆ. ಕುಡಚಿ, ಕಾಗವಾಡ, ಅಥಣಿಯಲ್ಲಿ ಬಿಜೆಪಿ ಗೆಲ್ಲಿಸುವಂತೆ ಹೇಳಿದ್ದೀರಿ. ಇಂತಹ ಹಗಲುಗನಸು ಕಾಣುವುದನ್ನು ಬಿಡಬೇಕು. ಹಾಗೇ ರಮೇಶ ಜಾರಕಿಹೊಳಿ ತಮ್ಮ ಕ್ಷೇತ್ರ ಮೊದಲು ನೋಡಿಕೊಳ್ಳಲಿ. ಗೋಕಾಕ ನೋಂದಣಿ ಕಚೇರಿಯಲ್ಲಿ ಅವರ ಚೀಟಿ ತೆಗೆದುಕೊಂಡು ಹೋದರೆ ಮಾತ್ರ ಖರೀದಿ ಮಾಡಲಾಗುತ್ತದೆ. ಹೀಗಾಗಿ, ನೀವು ಎಷ್ಟು ಪವಿತ್ರ, ಪ್ರಾಮಾಣಿಕ ಇದ್ದೀರಿ ಎಂಬುದನ್ನು ನೀವು ಮೊದಲು ನೋಡಿಕೊಳ್ಳಿ.
-ರಾಜು ಕಾಗೆ, ಶಾಸಕರು, ಕಾಗವಾಡ