ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಸದಸ್ಯರಾದ ಪ್ರಸನ್ನ ದರ್ಬೆ, ಲೋಕೇಶ್ ಮುಂಡೋಕಜೆ, ಶೋಭಾ ಗಿರಿಧರ್, ಮಾಜಿ ಮಾಸ್ಟರ್ ಪ್ಲಾನ್ ಸದಸ್ಯ ಮನೋಜ್.ಎಸ್, ದೇವಳದ ಸಿಬ್ಬಂದಿ ಸೇರಿದಂತೆ ನೂರಾರು ಭಕ್ತರು ಕುಕ್ಕೆಯಿಂದ ೧೮ ಕಿ.ಮೀ. ದೂರವಿರುವ ಎತ್ತರದ ಪರ್ವತ ಏರಿ ವೈಧಿಕ ವಿದಿ ವಿಧಾನಗಳಲ್ಲಿ ಭಾಗವಹಿಸಿದರು.ನಾಗಾರಾಧನೆಯ ಪ್ರಸಿದ್ಧ ಪುಣ್ಯ ತಾಣ ಸುಬ್ರಹ್ಮಣ್ಯದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮತ್ತು ಕುಮಾರಪರ್ವತಕ್ಕೆ ಪವಿತ್ರ ಸಂಬಂಧವಿದ್ದು, ಈ ಪ್ರಕಾರ ಪೂರ್ವ ಶಿಷ್ಟ ಸಂಪ್ರದಾಯದ ಪ್ರಕಾರ ನಡೆದ ಕುಮಾರಯಾತ್ರೆಯಲ್ಲಿ ದೇವಳದ ಅರ್ಚಕರು ಆರಂಭದಲ್ಲಿ ಕುಮಾರನ ಪಾದಗಳಿಗೆ ಜಲಾಭಿಷೇಕ ನೆರವೇರಿಸಿದರು.ಬಳಿಕ ಸೀಯಾಳಾಭಿಷೇಕ ಮಾಡಿದರು.
ನಂತರ ಅರಸಿನ ಮತ್ತು ಕಲ್ಲು ಸಕ್ಕರೆಯನ್ನು ಪಾದಗಳಿಗೆ ಅರ್ಪಿಸಿದರು. ನಂತರ ಪುಷ್ಪಾಲಂಕರಾದ ಮಾಡಿ ಫಲಸಮರ್ಪಣೆ ನೆರವೇರಿಸಿದರು. ನೈವೇದ್ಯ ಸಮರ್ಪಣೆ ಮಾಡಿದರು. ಬಳಿಕ ವೈದಿಕರ ಮಂತ್ರೋಚ್ಚರಣೆಯ ನಡುವೆ ಅರ್ಚಕರು ಪಾದಗಳಿಗೆ ಪೂಜೆ ನೆರವೇರಿಸಿದರು.