- ಐವರು ಬುರ್ಖಾಧಾರಿಗಳ ಪತ್ತೆಗೆ ದಾವಣಗೆರೆ ಬಸವ ನಗರ ಪೊಲೀಸರು ಚುರುಕು
- - -
ಕನ್ನಡಪ್ರಭ ವಾರ್ತೆ ದಾವಣಗೆರೆಬೆಳ್ಳಿಲೋಟ ಖರೀದಿಸುವ ನೆಪದಲ್ಲಿ ಚಿನ್ನಾಭರಣ ಅಂಗಡಿಗೆ ಬಂದ ಐವರು ಕಳ್ಳಿಯರ ಗುಂಪು ಬರೋಬ್ಬರಿ ₹1.13 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದ ಘಟನೆ ನಗರದ ಮಂಡಿಪೇಟೆಯಲ್ಲಿ ನಡೆದಿದೆ.
ಅಂಗಡಿಯವರಿಗೆ ಚಿನ್ನದ ಆಭರಣ, ಕಿವಿಯೋಲೆ, ಜುಮುಕಿಗಳಿದ್ದ ಬಾಕ್ಸ್ಗಳು ಕಳುವಾದ ವಿಚಾರ ಗೊತ್ತಾಗಿದೆ. ತಕ್ಷಣವೇ ಅಂಗಡಿಯ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಆಗ ಬುರ್ಖಾ ಧರಿಸಿ ಬಂದಿದ್ದ ಐವರು ಮಹಿಳೆಯರ ಪೈಕಿ ಓರ್ವಳು ಚಿನ್ನಾಭರಣಗಳ ಬಾಕ್ಸ್ಗಳನ್ನು ತನ್ನ ಬುರ್ಕಾದಲ್ಲಿ ಬಚ್ಚಿಟ್ಟುಕೊಳ್ಳುವುದು ಕಂಡುಬಂದಿದೆ.
ಚಿನ್ನಾಭರಣ ಅಂಗಡಿ ಮಾಲೀಕರು ಕೂಡಲೇ ಬಸವ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಾಲಾಕಿ ಬುರ್ಕಾಧಾರಿ ಕಳ್ಳಿಯರ ಗ್ಯಾಂಗ್ಗಾಗಿ ಶೋಧ ನಡೆಸುತ್ತಿದ್ದಾರೆ.ನ್ಯಾಮತಿ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣ ಭೇದಿಸಿ, ನಿರಾಳರಾಗುವ ಮೊದಲೇ ದಾವಣಗೆರೆ ಜಿಲ್ಲಾ ಪೊಲೀಸರಿಗೆ ಈಗ ಬುರ್ಕಾಧಾರಿ ಕಳ್ಳಿಯರ ಹಿಡಿಯುವ ಸವಾಲು ಎದುರಾಗಿದೆ.
- - --3ಕೆಡಿವಿಜಿ9, 10:
ದಾವಣಗೆರೆ ಮಂಡಿ ಪೇಟೆಯ ರವಿ ಜ್ಯುಯಲರ್ಸ್ನಲ್ಲಿ ಚಿನ್ನಾಭರಣಗಳ ಬಾಕ್ಸ್ ಕದಿಯುತ್ತಿರುವ ಬುರ್ಖಾಧಾರಿ ಕಳ್ಳಿ.