ಕನ್ನಡಪ್ರಭ ವಾರ್ತೆ ಕಾಪು
ಈ ಉದಯೋನ್ಮುಖ ಕ್ರೀಡಾ ಸಾಧಕಿಯನ್ನು ಮಂಗಳವಾರ ಮಣಿಪುರ ರೋಟರಿ ಭವನದಲ್ಲಿ ಜರುಗಿದ ಜಿಲ್ಲಾ ಗವರ್ನರ್ ಅವರ ಅಧಿಕೃತ ಸಂದರ್ಶನದ ಸಾರ್ವಜನಿಕ ಸಮಾರಂಭದಲ್ಲಿ ಕ್ರೀಡಾಪಟುವಿನ ಮಾತಾಪಿತರ ಸಮ್ಮುಖದಲ್ಲಿ ರೋಟರಿ ಗೌರವ ನೀಡಿ ಸನ್ಮಾನಿಸಲಾಯಿತು.
ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3182 ಇದರ ಜಿಲ್ಲಾ ಗವರ್ನರ್ ದೇವಾನಂದ್, ರೋಟರಿ ಜಿಲ್ಲಾ ಪ್ರಥಮ ಮಹಿಳೆ ರೇಖಾ ದೇವಾನಂದ್ ಕ್ರೀಡಾ ಪ್ರತಿಭೆಯನ್ನು ಅಭಿನಂದಿಸಿ ಭವಿಷ್ಯದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುವಾಗಿ ಬೆಳೆಯಲಿ ಎಂದು ಹಾರೈಸಿದರು.ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ರೋಟರಿ ಅಧ್ಯಕ್ಷ ಸುಧೀರ್ ಕುಮಾರ್ ವಹಿಸಿ ಸ್ವಾಗತಿಸಿದರು. ವಲಯ 5ರ ಸಹಾಯಕ ಗವರ್ನರ್ ಅನಿಲ್ ಡೇಸಾ ಕ್ಲಬ್ ಪತ್ರಿಕೆ ‘ಮಾಣಿಕ್ಯ’ವನ್ನು ಬಿಡುಗಡೆಗೊಳಿಸಿದರು. ವಲಯ ಸೇನಾನಿ ಜೋನ್ ಸಿಕ್ವೇರಾ ಇದ್ದರು. ಕಾರ್ಯದರ್ಶಿ ಗುರುರಾಜ್ ಭಟ್ ವರದಿ ಓದಿದರು. ಸ್ಥಾಪಕ ಅಧ್ಯಕ್ಷ ಜೋಸೆಫ್ ಕುಂದರ್, ವಿನ್ಸೆಂಟ್ ಡಿಸೋಜ, ಸ್ಟ್ಯಾನಿ ಡಿಸೋಜ, ರಾಜೇಶ್ ನಾಯ್ಕ್ ಪರಿಚಯಿಸಿದರು. ಚಂದ್ರಶೇಖರ ಸಾಲಿಯಾನ ನಿರೂಪಿಸಿದರು. ಲಾರೆನ್ಸ್ ಸಿಕ್ವೇರಾ ಸಹಕರಿಸಿದರು. ಗುರುರಾಜ್ ಧನ್ಯವಾದವಿತ್ತರು.