ಏಕತಾ ರೋಟರಿ ಪ್ರಾರಂಭ
ಸಮಾಜದಲ್ಲಿ ಆರೋಗ್ಯ, ಶಿಕ್ಷಣ, ಶುದ್ಧ ಕುಡಿಯುವ ನೀರು ಹಾಗೂ ಪರಿಸರ ಸಂರಕ್ಷಣೆ ಕಾರ್ಯ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡು ಮುಂದೆ ಸಾಗುವುದೇ ರೋಟರಿ ಕ್ಲಬ್ ಮೂಲ ಉದ್ದೇಶ ಎಂದು ಏಕತಾ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಟಿ.ಎನ್. ಪಾಲಾಕ್ಷ ಹೇಳಿದರು.
ಜ್ಯೋತಿನಗರ ಸಮೀಪದ ಐಎಂಎ ಸಭಾಂಗಣದಲ್ಲಿ ಆಯೋಜಿಸಿದ್ಧ ನೂತನ ಏಕತಾ ರೋಟರಿ ಕ್ಲಬ್ ಪ್ರಾರಂಭೋತ್ಸವ ಹಾಗೂ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜದ ಹಿತಚಿಂತನೆಯಡಿ ರೋಟರಿ ಕ್ಲಬ್ ಕಾರ್ಯ ನಿರ್ವಹಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೈ ಜೋಡಿಸಿ ಭಾಗವಹಿಸಿದರೆ ಮಾತ್ರ ಮೂಲಧ್ಯೇಯ ಈಡೇರಲು ಸಾಧ್ಯ. ಆ ನಿಟ್ಟಿನಲ್ಲಿ ಸಮಾಜಕ್ಕೆ ಪೂರಕವಾದ ಸವಲತ್ತು ಒದಗಿಸುವುದು ಪ್ರತಿ ರೋಟರಿ ಸದಸ್ಯನ ಕರ್ತವ್ಯ ಎಂದು ತಿಳಿಸಿದರು.ಅನುಸ್ಥಾಪನ ಅಧಿಕಾರಿ ಬಿ.ಸಿ.ಗೀತಾ ಮಾತನಾಡಿ, ಸಾರ್ವಜನಿಕ ಸೇವೆಯಲ್ಲಿ ಕ್ಲಬ್ ತೊಡಗಿಸಿಕೊಂಡು ಅತ್ಯುತ್ತಮ ಸಂಸ್ಥೆ ಯಾಗಿ ಹೊರಹೊಮ್ಮಬೇಕು. ಪ್ರಸ್ತುತ ಉಳಿದಿರುವ ಅವಧಿಯಲ್ಲಿ ನೂತನ ಅಧ್ಯಕ್ಷರು ಎಲ್ಲಾ ರೋಟರಿ ಸದಸ್ಯರನ್ನು ಒಂಗ್ಗೂಡಿಸಿಕೊಂಡು ಸಾಗಬೇಕು. ಇದು ಸಂಸ್ಥೆ ಆರೋಗ್ಯಕಾರಿ ಬೆಳವಣಿಗೆಗೆ ಸಹಕಾರಿ ಎಂದು ತಿಳಿಸಿದರು.
ಜ್ಯೋತಿನಗರ ಸಮೀಪದ ಐಎಂಎ ಸಭಾಂಗಣದಲ್ಲಿ ಆಯೋಜಿಸಿದ್ಧ ನೂತನ ಏಕತ ರೋಟರಿ ಕ್ಲಬ್ ಪ್ರಾರಂಭೋತ್ಸವ ಹಾಗೂ ಪದಗ್ರಹಣ ಕಾರ್ಯಕ್ರಮವನ್ನುಏಕತ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಟಿ.ಎನ್.ಪಾಲಾಕ್ಷ ಉದ್ಘಾಟಿಸಿದರು. ಅನುಸ್ಥಾಪನ ಅಧಿಕಾರಿ ಬಿ.ಸಿ.ಗೀತಾ, ತನೋಜ್ನಾಯ್ಡು, ಪ್ರಿಯಾಂಕಾ ಆನಂದ್ ಮೊದಲಾದವರಿದ್ದರು.