ರೋಟರಿಯಿಂದ ವಿಶ್ವದ ಬಹುತೇಕ ಸಮಸ್ಯೆಗಳಿಗೆ ಪರಿಹಾರ

KannadaprabhaNewsNetwork |  
Published : Aug 02, 2026, 02:15 AM IST
ಬ್ಯಾಡಗಿ ಪಟ್ಟಣದ ಸಿದ್ದೇಶ್ವರ ಕಲ್ಯಾಣಮಂಟಪದಲ್ಲಿ ಜರುಗಿದ ಬ್ಯಾಡಗಿ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭ ಜರುಗಿತು. | Kannada Prabha

ಸಾರಾಂಶ

ರೋಟರಿ ಸಂಸ್ಥೆಯು ವ್ಯಕ್ತಿಯ ಜೀವನ ಪರಿವರ್ತಿಸುವುದರ ಜೊತೆಗೆ ವಿಶ್ವದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಬಹುದೊಡ್ಡ ಜಾಗತಿಕ ಸೇವಾ ಜಾಲವಾಗಿದೆ ಎಂದು ಹುಬ್ಬಳ್ಳಿ ರೋಟರಿಯನ್ ವಾಸುಕಿ ಸಂಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ರೋಟರಿ ಸಂಸ್ಥೆಯು ವ್ಯಕ್ತಿಯ ಜೀವನ ಪರಿವರ್ತಿಸುವುದರ ಜೊತೆಗೆ ವಿಶ್ವದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಬಹುದೊಡ್ಡ ಜಾಗತಿಕ ಸೇವಾ ಜಾಲವಾಗಿದೆ ಎಂದು ಹುಬ್ಬಳ್ಳಿ ರೋಟರಿಯನ್ ವಾಸುಕಿ ಸಂಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಸಿದ್ದೇಶ್ವರ ಕಲ್ಯಾಣಮಂಟಪದಲ್ಲಿ ಜರುಗಿದ ಬ್ಯಾಡಗಿ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಕಳೆದ 1905ರಲ್ಲಿ ಪಾಲ್ ಹ್ಯಾರಿಸ್ ಅವರಿಂದ ಚಿಕಾಗೋದಲ್ಲಿ ಸ್ಥಾಪಿಸಲ್ಪಟ್ಟ ರೋಟರಿ ಇಂಟರನ್ಯಾಷನಲ್ ಸಂಸ್ಥೆಯು ಇತಿಹಾಸದಲ್ಲೇ ಅತೀದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಮಾನವೀಯ ಸಂಸ್ಥೆಗಳಲ್ಲಿ ಒಂದಾಗಿದೆ, ಶತಮಾನಕ್ಕೂ ಹೆಚ್ಚು ಕಾಲ ರೋಟರಿ ವಿಶ್ವದ ಬಹುತೇಕ ರಾಷ್ಟ್ರಗಳ ಸಂಸ್ಕೃತಿಗಳನ್ನು ಸಂಪರ್ಕಿಸುವ ಮೂಲಕ ಮಾನವೀಯ ನೆರವು ನೀಡಿ ಬೃಹತ್ ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ ಎಂದರು.

ಪೋಲಿಯೊ ನಿರ್ಮೂಲನೆ: ಸ್ವಯಂ ಸೇವೆಗಿಂತ ಹೆಚ್ಚಿನ ಸೇವೆ ಎಂಬ ತನ್ನ ಧ್ಯೇಯವಾಕ್ಯದ ಮೂಲಕ, ರೋಟರಿ ಸಾಧನೆಗಳು ಜಾಗತಿಕ ಆರೋಗ್ಯ, ಶಿಕ್ಷಣ ಮತ್ತು ಶಾಂತಿಯ ಮೇಲೆ ಅಳಿಸದಂತಹ ಹೆಜ್ಜೆ ಗುರುತು ನಿರ್ಮಿಸಿದೆ, ಇದರಲ್ಲಿ ಪೋಲಿಯೋ ನಿರ್ಮೂಲನೆ ಐತಿಹಾಸಿಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಪೋಲಿಯೋ ಕುರಿತು ನಿರಂತರ ಜಾಗತಿಕ ಅಭಿಯಾನ ನಡೆಸಿದ ರೋಟರಿಯ ಉತ್ತಮ ಸಾಧನೆಯಾಗಿದೆ ಎಂದರು.

ಸಮುದಾಯ ಶಾಂತಿ ನಿರ್ಮಾಣ: ತಳಮಟ್ಟದಲ್ಲಿ, ಬಡತನ, ವ್ಯವಸ್ಥಿತ ಅಸಮಾನತೆ, ಜನಾಂಗೀಯ ಉದ್ವಿಗ್ನತೆ ಮತ್ತು ಸಂಪನ್ಮೂಲಗಳಿಗೆ ಪ್ರವೇಶದ ಕೊರತೆ ಸಂಘರ್ಷದ ಮೂಲ ಕಾರಣಗಳನ್ನು ಪರಿಹರಿಸುವ ಯೋಜನೆಗಳಿಗೆ ರೋಟರಿ ಕ್ಲಬ್‌ಗಳು ಹಣಕಾಸು ಒದಗಿಸುತ್ತವೆ. ನೀರು, ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರು ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಸ್ಥಿರತೆ ಒದಗಿಸುತ್ತದೆ ಎಂದರು.

ಅಧ್ಯಕ್ಷರಾಗಿ ಪವಾಡೆಪ್ಪ ಆಚನೂರ, ಕಾರ್ಯದರ್ಶಿಯಾಗಿ ಕಿರಣ ಮಾಳೇನಹಳ್ಳಿ, ಉಪಾಧ್ಯಕ್ಷರಾಗಿ ಪ್ರಕಾಶ ಛತ್ರದ, ಖಜಾಂಚಿಯಾಗಿ ರಮೇಶ ಕಲ್ಯಾಣಿ, ಜಂಟೀ ಕಾರ್ಯದರ್ಶಿಯಾಗಿ ಸಿದ್ಧಲಿಂಗೇಶ ಮಾಳೇನಹಳ್ಳಿ ಅವರನ್ನು ನೇಮಿಸಿ ಅಧಿಕಾರ ಹಸ್ತಾಂತರಿಸಿ ಪ್ರಮಾಣ ವಚನ ಬೋಧಿಸಲಾಯಿತು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ, ನಿವೃತ್ತ ಎಎಸ್ಐ ಬಸವರಾಜ ಅಂಜುಟಗಿ, ಹೆಸ್ಕಾಂ ಸುರೇಶ, ಸಮಾಜ ಸೇವಕ ಶಿವಕುಮಾರ ಕಲ್ಲಾಪುರ, ನಿವೃತ್ತ ಶಿಕ್ಷಕ ಆನಂದ ಮುದಕಮ್ಮನವರ, ಯೋಗ ತರಬೇತುದಾರರಾದ ಜ್ಯೋತಿ ಕುದರಾಳ ಅವರನ್ನು ಸನ್ಮಾನಿಸಲಾಯಿತು. ಹಾವೇರಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಮಕ್ಕಳು ಭರತನಾಟ್ಯ ಪ್ರದರ್ಶಿಸಿದರು. ಡಾ.ಜಗದೀಶ ಮಹಾರಾಜಪೇಟೆ, ಮಾಲತೇಶ ದೇವಗಿರಿ, ಅಮೃತಕುಮಾರ ಕೆಂಚನಗೌಡರ ಇವರಿಗೆ ಹೊಸ ಸದಸ್ಯತ್ವ ನೀಡಲಾಯಿತು.

ಮಾಲತೇಶ ಅರಳಿಮಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು, ಅಸಿಸ್ಟೆಂಟ್ ಗವರ್ನರ್ ಬಸವರಾಜ ಸುಂಕಾಪುರ, ರಾಣೇಬೆನ್ನೂರಿನ ಬಸವರಾಜ ಕೆಲಗಾರ, ಝೋನಲ್ ಕೋ ಆರ್ಡಿನೇಟರ್ ಮಂಜುನಾಥ ಉಪ್ಪಾರ, ಆನಂದ ಸೊರಟೂರ, ವಿಶ್ವನಾಥ ಅಂಕಲಕೋಟಿ, ಜೆ.ಹೆಚ್.ಪಾಟೀಲ, ಮಹಾಂತೇಶ ಮೆಲ್ಮುರಿ, ಕಿರಣ ವೆರ್ಣೇಕರ್, ಮಾಲತೇಶ ಉಪ್ಪಾರ, ಸತೀಶ ಅಗಡಿ, ಮಹಾಂತೇಶ ಬಂದಮ್ಮನವರ, ಪರಶುರಾಮ ಮೇಲಗಿರಿ, ಶಿವಕುಮಾರ ಕೆರೂಡಿ, ಸಿದ್ದಲಿಂಗಯ್ಯ ಬೂದಿಹಾಳಮಠ, ಮಾಲತೇಶ ಕಲ್ಯಾಣಿ, ಎ.ಎಂ. ಸೌದಾಗರ, ಜಗದೀಶ ದೇವಿಹೊಸೂರ, ನಿರಂಜನ ಶೆಟ್ಟಿಹಳ್ಳಿ, ಚೇತನ ಕುಡತರಕರ, ಮಹಾಂತೇಶ ಸುಂಕದ, ಇನ್ನರ್ ವ್ಹೀಲ್ ಕ್ಲಬ್ ಬ್ಯಾಡಗಿ, ಹಾವೇರಿ ರಾಣಿಬೆನ್ನೂರು ರೋಟರಿ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀವಿದ್ಯಾ ಬೊಡ್ಡಪಾಟಿ ಪ್ರಾರ್ಥಿಸಿದರು. ಕಾಶಿನಾಥ ಕಮ್ಮಾರ ಸ್ವಾಗತಿಸಿದರು. ಸಂಧ್ಯಾರಾಣಿ ದೇಶಪಾಂಡೆ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಪ್ರದಾಯಿಕ, ಯಾಂತ್ರೀಕೃತ ಮೀನುಗಾರಿಕೆ ಪುನಾರಂಭ
ಶಿಸ್ತಿನ ಜೀವನವೇ ಆರೋಗ್ಯ, ಆಧ್ಯಾತ್ಮಿಕ ಪ್ರಗತಿಗೆ ದಾರಿ: ರಾಘವೇಶ್ವರ ಶ್ರೀ