ಅನ್ನದಾತರಲ್ಲಿ ಭಾರೀ ಆರ್ಥಿಕ ನಷ್ಟದ ಆತಂಕಬಿ.ಎಚ್.ಎಂ. ಅಮರನಾಥಶಾಸ್ತ್ರಿ
ಕಳೆದ ಹಲವು ದಿನಗಳಿಂದ ಸುರಿದ ನಿರಂತರ ಮಳೆ, ಹವಾಮಾನ ವೈಪರೀತ್ಯದ ಪರಿಣಾಮವಾಗಿ ತಾಲೂಕಿನ ವಿವಿಧ ಭಾಗಗಳಲ್ಲಿನ ಭತ್ತದ ಬೆಳೆ ದುಂಡಾಣು ಮಚ್ಚೆ ವೈರಸ್ (ಎಲೆ ಒಣಗುವ ರೋಗ) ಬಾಧೆಗೆ ಒಳಗಾಗಿದೆ. ಇದರ ಪರಿಣಾಮವಾಗಿ ಅನ್ನದಾತರಲ್ಲಿ ಭಾರೀ ಆರ್ಥಿಕ ನಷ್ಟದ ಆತಂಕ ಮೂಡಿದೆ.
ತುಂಗಭದ್ರಾ ನದಿ ಪಾತ್ರದ ಕಂಪ್ಲಿ, ಬೆಳಗೋಡುಹಾಳ್, ಸಣಾಪುರ, ಇಟಗಿ, ಅರಳಿಹಳ್ಳಿ, ನಂ.2 ಮುದ್ದಾಪುರ ಸೇರಿ ಹಲವು ಹಳ್ಳಿಗಳಲ್ಲಿ ವ್ಯಾಪಕವಾಗಿ ಭತ್ತ ಬೆಳೆಯಲಾಗಿದೆ. ಆದರೆ ಇವುಗಳಲ್ಲಿ ಸುಮಾರು 600 ಎಕರೆಗಿಂತ ಹೆಚ್ಚು ಭತ್ತದ ಹೊಲಗಳಲ್ಲಿ ದುಂಡಾಣು ಮಚ್ಚೆ ರೋಗ ವ್ಯಾಪಕವಾಗಿ ಹಬ್ಬಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ರೈತರು ಸಸಿ ಮಡಿ, ಯೂರಿಯಾ, ಕೀಟನಾಶಕ ಸಿಂಪಡಣೆ, ಕೃಷಿಕಾರ್ಮಿಕರ ಕೂಲಿ ಸೇರಿದಂತೆ ಪ್ರತಿ ಎಕರೆಗೆ ಸರಾಸರಿ ₹35 ಸಾವಿರಕ್ಕೂ ಹೆಚ್ಚು ಹಣ ಹೂಡಿಕೆ ಮಾಡಿದ್ದಾರೆ. ಬೆಳೆಗಳು ಈಗ ಕುಸುಮ (ತೆನೆ ಒಡೆಯುವ) ಹಂತ ತಲುಪಿದ ಸಂದರ್ಭದಲ್ಲಿ ರೋಗ ಬಾಧಿಸಿದ್ದು, ತೆನೆ ಕಾಣದೇ ಬೆಳೆ ಸಂಪೂರ್ಣ ಒಣಗಿ ಹೋಗುವ ಸಾಧ್ಯತೆ ಹೆಚ್ಚು. ಅಂತಿಮವಾಗಿ ರೈತರ ಕೈಗೆ ಒಣ ಮೇವು ಮಾತ್ರ ಸಿಗುವ ಪರಿಸ್ಥಿತಿ ಎದುರಾಗಿದೆ.ಈ ಬಾರಿ ಉತ್ತಮ ಮಳೆಯಾದ ಕಾರಣ ನಮ್ಮೆಲ್ಲರಿಗೂ ಸಂತೋಷವಾಯಿತು. ಭತ್ತ ಬೆಳೆದು ಉತ್ತಮ ಧಾನ್ಯ ದೊರೆಯುತ್ತದೆ ಎಂಬ ನಿರೀಕ್ಷೆಯೊಂದಿಗೆ ಸಾಲ-ಸೂಲ ಮಾಡಿಕೊಂಡು ಭತ್ತ ಬಿತ್ತನೆ ಮಾಡಿದ್ದೇವೆ. ಬೆಳೆಯು ಸಹ ಉತ್ತಮವಾಗಿ ಬೆಳೆದಿತ್ತು. ಆದರೆ ತೆನೆ ಕಾಣಿಸಿಕೊಳ್ಳುವಷ್ಟರಲ್ಲಿ ದುಂಡಾಣು ಮಚ್ಚೆ ವೈರಸ್ ವ್ಯಾಪಕವಾಗಿ ಹಬ್ಬಿದೆ. ಈಗ ನಾವು ಮಾಡಿದ ಹೂಡಿಕೆ ಎಲ್ಲವೂ ವ್ಯರ್ಥವಾಗುವ ಭೀತಿ ಮೂಡಿದೆ. ಇನ್ನು ನಮ್ಮನ್ನು ದೇವರೇ ಕಾಪಾಡಬೇಕು ಎಂದು ರೈತ ಕೆ. ಕೃಷ್ಣ ತಮ್ಮ ಅಳಲನ್ನು ತೋಡಿಕೊಂಡರು.
ರೈತರಿಗೆ ಸಲಹೆ ನೀಡಿ: