ಸುಗಮ ಸಂಚಾರಕ್ಕಾಗಿ ಮಾರ್ಗ ಬದಲಾವಣೆ

KannadaprabhaNewsNetwork |  
Published : Dec 25, 2025, 01:45 AM IST
ಉಮಾ ಪ್ರಶಾಂತ್‌, ಜಿಲ್ಲಾ ಎಸ್‌ಪಿ | Kannada Prabha

ಸಾರಾಂಶ

ಆರ್‌ಎಂಸಿ ಲಿಂಕ್ ರಸ್ತೆಯ ಶ್ರೀ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಡಿ.26ರ ಶುಕ್ರವಾರ ನಡೆಯುವ ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ, ನುಡಿನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು, ರಾಷ್ಟ್ರೀಯ ಅಧ್ಯಕ್ಷರು, ಮಠಾಧೀಶರು, ವಿವಿಧ ಗಣ್ಯಾತಿ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆ ವಾಹನಗಳು ಹಾಗೂ ಜನರ ಸುಗಮ ಸಂಚಾರ ದೃಷ್ಟಿಯಿಂದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದ್ದು, ತಪ್ಪದೇ ಪಾಲಿಸಿ ಸಹಕರಿಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

- ನಾಳೆ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಅನ್ವಯ: ಜಿಲ್ಲಾ ಎಸ್‌ಪಿ ಸೂಚನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಆರ್‌ಎಂಸಿ ಲಿಂಕ್ ರಸ್ತೆಯ ಶ್ರೀ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಡಿ.26ರ ಶುಕ್ರವಾರ ನಡೆಯುವ ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ, ನುಡಿನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು, ರಾಷ್ಟ್ರೀಯ ಅಧ್ಯಕ್ಷರು, ಮಠಾಧೀಶರು, ವಿವಿಧ ಗಣ್ಯಾತಿ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆ ವಾಹನಗಳು ಹಾಗೂ ಜನರ ಸುಗಮ ಸಂಚಾರ ದೃಷ್ಟಿಯಿಂದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದ್ದು, ತಪ್ಪದೇ ಪಾಲಿಸಿ ಸಹಕರಿಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ಅಂದು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಭಾರಿ ಮತ್ತು ಲಘು ವಾಹನಗಳ ಮಾರ್ಗ ಬದಲಾವಣೆ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಬದಲಾದ ಮಾರ್ಗಗಳು, ಪಾರ್ಕಿಂಗ್‌ ಜಾಗಗಳ ವಿವರ ಇಂತಿದೆ.

1) ಹರಪನಹಳ್ಳಿ ಕಡೆಯಿಂದ ಕಂಚಿಕೆರೆ, ಮಾಗಾನಹಳ್ಳಿ ಮಾರ್ಗವಾಗಿ ದಾವಣಗೆರೆ ನಗರಕ್ಕೆ ಬರುವ ಎಲ್ಲ ಭಾರಿ ಮತ್ತು ಲಘು ಸರಕು ಸಾಗಾಣಿಕೆ ವಾಹನ,ಸಾರಿಗೆ, ಖಾಸಗಿ ಬಸ್‌ಗಳು ಬಿ.ಕಲಪನಹಳ್ಳಿಯಿಂದ ಎಲೆಬೇತೂರು ಗ್ರಾಮದ ಜಗಳೂರು ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದ ಮುಂಭಾಗದ ರಸ್ತೆ ಮುಖಾಂತರ ಬಸಾಪುರ ಮಾರ್ಗವಾಗಿ ಗಾಣಗಿತ್ತಿ ದೇವಸ್ಥಾನದಿಂದ ಚಿಕ್ಕನಹಳ್ಳಿ ಕ್ರಾಸ್,ಎಪಿಎಂಸಿ ದನದ ಮಾರ್ಕೆಟ್ ಮುಖಾಂತರ ಹಳೇ ಪಿ.ಬಿ. ರಸ್ತೆಯಲ್ಲಿ ಸಂಚರಿಸಬೇಕು.

2) ಜಗಳೂರು ಕಡೆಯಿಂದ ದಾವಣಗೆರೆ ಕಡೆಗೆ ವಾಹನಗಳು ಅಣಜಿ ಆನಗೋಡು ಮಾರ್ಗ ಎನ್.ಎಚ್-48 ರಸ್ತೆಯಲ್ಲಿ ಸಂಚರಿಸಬೇಕು. ದಾವಣಗೆರೆಯಿಂದ ಜಗಳೂರು ಕಡೆಗೆ ಸಂಚರಿಸುವ ವಾಹನಗಳು ಬಾಡಾ ಕ್ರಾಸ್ ಮೂಲಕ ಹೊಸ ಎನ್.ಎಚ್-48 ರಸ್ತೆ, ಆನಗೋಡು-ಅಣಜಿ ಮಾರ್ಗ ಬಳಸಬೇಕು.

3) ಹಳೇ ಪಿ.ಬಿ. ರಸ್ತೆ ಈರುಳ್ಳಿ ಮಾರ್ಕೆಟ್ ಮುಖಾಂತರ ಗಣೇಶ ಹೋಟೆಲ್ ಸರ್ಕಲ್ ಕಡೆಗೆ ಸಮಾರಂಭಕ್ಕೆ ಹೋಗುವ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಸಂಚಾರ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

4) ಕಾರ್ಯಕ್ರಮಕ್ಕೆ ಚನ್ನಗಿರಿ, ಸಂತೆಬೆನ್ನೂರು ಬೆಂಗಳೂರು ಕಡೆಯಿಂದ ಬಾಡಾ ಕ್ರಾಸ್ ಮೂಲಕ ಬರುವ ವಾಹನಗಳು ಡಿಸಿಎಂ ಅಂಡರ್ ಪಾಸ್, ದನದ ಮಾರುಕಟ್ಟೆ ಕ್ರಾಸ್, ಎಪಿಎಂಸಿ ಬಸವೇಶ್ವರ ದೇವಸ್ಥಾನದ ಹತ್ತಿರ ಬಲ ತಿರುವು ಪಡೆದುಕೊಂಡು ಹೊಸ ಚಿಕ್ಕನಹಳ್ಳಿ ಕಾಸ್, ಬಸಾಪುರ ಗ್ರಾಮದಲ್ಲಿ ಆಯ್ದು ಬಸಾಪುರ ರಸ್ತೆಯ ವಿನಾಯಕ ಗೋಡೌನ್ ಪಕ್ಕದ ಕ್ರಾಸ್ ಮುಖಾಂತರ ಬಸ್ ಗಳು ಪಾರ್ಕಿಂಗ್ ಜಾಗಕ್ಕೆ ತೆರಳಬೇಕು. ಬೈಕ್‌ ಮತ್ತು ಕಾರುಗಳು ವಿನಾಯಕ ಗೋಡೌನ್ ಹಿಂದೆ ಇರುವ ರಿಂಗ್ ರಸ್ತೆ ಮುಖಾಂತರ ಕಾರು, ಬೈಕ್ ಪಾರ್ಕಿಂಗ್ ಜಾಗಕ್ಕೆ ತೆರಳಬೇಕು.

5) ಹರಿಹರ ಹರಪನಹಳ್ಳಿ, ಕಡೆಯಿಂದ ಸಮಾರಂಭಕ್ಕೆ ಬರುವ ಬಸ್, ಕಾರು, ಬೈಕ್ ಸಂಗೊಳ್ಳಿ ರಾಯಣ್ಣ ಸರ್ಕಲ್, ಆರ್‌ಟಿಒ ಸರ್ಕಲ್, ಅಖ್ತರ್ ರಜಾ ಸರ್ಕಲ್, ಟಿಪ್ಪ್ಪುಸರ್ಕಲ್, ಬೇತೂರು ಹಳ್ಳದ ಹತ್ತಿರ ಹೊಸದಾಗಿ ನಿಮಿಸಿರುವ ಕಚ್ಚಾ ರಸೆಯ ಮುಖಾಂತರ ಪಾರ್ಕಿಂಗ್ ಸ್ಥಳಕ್ಕೆ ತೆರಳಬೇಕು.

6) ಚನ್ನಗಿರಿ, ಸಂತೆಬೆನ್ನೂರು, ಬೆಂಗಳೂರು ಕಡೆಯಿಂದ ಬಾಡಾ ಕ್ರಾಸ್ ಮುಖಾಂತರ ಕಾರ್ಯಕ್ರಮಕ್ಕೆ ಬರುವ ವಿಐಪಿ ವಾಹನಗಳು ಡಿಸಿಎಂ ಅಂಡರ್ ಪಾಸ್, ದನದ ಮಾರುಕಟ್ಟೆ ಕ್ರಾಸ್, ಎಪಿಎಂಸಿ ಬಸವೇಶ್ವರ ದೇವಸ್ಥಾನ, ಗಣೇಶ ಹೋಟೆಲ್ ಸರ್ಕಲ್, ಆರ್‌ಎಂಸಿ ರಸ್ತೆ ಮುಖಾಂತರ ಬಸಾಪುರ ಕ್ರಾಸ್‌ನಲ್ಲಿ ಬಲ ತಿರುವು ಪಡೆದುಕೊಂಡು ಕಲ್ಲೇಶ್ವರ ಮಿಲ್ ಹಿಂಭಾಗದ ಲೇಔಟ್ ರಸ್ತೆ ಮುಖಾಂತರ ವಿಐಪಿ ಪಾರ್ಕಿಂಗ್ ಜಾಗಕ್ಕೆ ತೆರಳಬೇಕು.

7) ವಿಐಪಿ ಪಾರ್ಕಿಂಗ್ ಸ್ಥಳದಿಂದ ಹೊರಗಡೆ ಹೋಗುವ ವಾಹನಗಳು ಲೇಔಟ್ ರಸ್ತೆ ಮುಖಾಂತರ ಹೊರಗಡೆ ಬಂದು ಬನ್ನಿಮಹಾಂಕಾಳಿ ದೇವಸ್ಥಾನದ ಹತ್ತಿರ ತಿರುವು ಪಡೆದುಕೊಂಡು ಅಣ್ಣಾ ನಗರ ಮುಖಾಂತರ ಬಂಬೂಬಜಾರ್ ರಸ್ತೆಗೆ ಸೇರಿ ಗಣೇಶ ಹೋಟೆಲ್ ಸರ್ಕಲ್, ಈರುಳ್ಳಿ ಮಾರುಕಟ್ಟೆ ರಸ್ತೆ ಮುಖಾಂತರ ಹಳೇ ಪಿಬಿ ರಸ್ತೆಯಲ್ಲಿ ಸಂಚರಿಸಬೇಕು.

8) ಹರಿಹರ ಹರಪನಹಳ್ಳಿ, ಕಡೆಯಿಂದ ಸಮಾರಂಭಕ್ಕೆ ಬರುವ ವಿಐಪಿ ವಾಹನಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಆರ್‌ಟಿಒ ಸರ್ಕಲ್, ಅಖ್ತರ್ ರಜಾ ಸರ್ಕಲ್, ಟಿಪ್ಪು ಸರ್ಕಲ್, ಬೇತೂರು ಹಳ್ಳದ ಹತ್ತಿರ ಬಲ ತಿರುವು ಪಡೆದು ವೆಂಕಟೇಶ್ವರ ಸರ್ಕಲ್, ಮಟ್ಟಿಕಲ್ ಮುಂಭಾಗದಿಂದ ಬಸಾಪುರ ಕ್ರಾಸ್ ಎಡತಿರವು ಪಡೆದುಕೊಂಡು ಕಲ್ಲೇಶ್ವರ ಹಿಂಭಾಗದ ಲೇಔಟ್ ರಸ್ತೆ ಮುಖಾಂತರ ವಿಐಪಿ ಪಾರ್ಕಿಂಗ್ ಸ್ಥಳಕ್ಕೆ ತಲುಪಬೇಕು ಎಂದು ಅವರು ತಿಳಿಸಿದ್ದಾರೆ.

- - -

(ಫೋಟೋ: ಉಮಾ ಪ್ರಶಾಂತ್‌, ಜಿಲ್ಲಾ ಎಸ್‌ಪಿ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ