ಕನ್ನಡಪ್ರಭ ವಾರ್ತೆ ಅರಸೀಕೆರೆ
ಈ ಸಂದರ್ಭದಲ್ಲಿ ಎಲ್. ದರ್ಶನ್ ಮಾತನಾಡಿ, “ನಮ್ಮ ತಂಡವು ವಾರದಲ್ಲಿ ಒಮ್ಮೆ ಸೈಕ್ಲಿಂಗ್ ಮೂಲಕ ಹತ್ತಾರು ಕಿಲೋಮೀಟರ್ ದೂರದಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸೇವಾ ಕಾರ್ಯಗಳನ್ನು ಹಮ್ಮಿಕೊಂಡುಬರುತ್ತಿದೆ. ನಂತರದ ದಿನಗಳಲ್ಲಿ ರಾಯಲ್ ಎನ್ಫೀಲ್ಡ್ ಬೈಕ್ ಮೂಲಕ ಅರಸೀಕೆರೆ ತಾಲೂಕು ಸೇರಿದಂತೆ ದೂರದೂರಿನ ಪ್ರೇಕ್ಷಣೀಯ ತಾಣಗಳಿಗೆ ಭೇಟಿ ನೀಡಲಾಗುತ್ತಿದೆ. ಸ್ಮಾರಕಗಳು, ಪ್ರವಾಸಿ ತಾಣಗಳು, ಅಂತರ್ಜಲ ಹಾಗೂ ಪರಿಸರ ಸಂರಕ್ಷಣೆ ನಮ್ಮ ತಂಡದ ಮೂಲ ಉದ್ದೇಶವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಮಾನ ಮನಸ್ಕ ಸದಸ್ಯರನ್ನು ಒಳಗೊಂಡ ‘ಅರಸೀಕೆರೆ ರಾಯಲ್ ರೈಡರ್ಸ್’ ತಂಡವು ತಾಲೂಕಿನ ಪ್ರಮುಖ ಪ್ರವಾಸಿತಾಣಗಳ ಚಿತ್ರಗಳನ್ನು ಒಳಗೊಂಡ ಬ್ಯಾನರ್ ಅನ್ನು ರಚಿಸಿ ಲೋಕಾರ್ಪಣೆ ಮಾಡಲಾಗಿದೆ, ಅನಾವರಣಗೊಳಿಸಲಾಗಿದೆ.