ಬ್ಯಾಡಗಿ: ಗ್ರಾಮೀಣ ಪ್ರದೇಶದ ಜನರು ಶೈಕ್ಷಣಿಕವಾಗಿ ಅಭಿವೃದ್ಧಿಯಾಗದ ಹೊರತು ದೇಶದ ಸಮೃದ್ಧ ಭವಿಷ್ಯ ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಪಾಲಕರ ನಿರ್ಲಕ್ಷ್ಯ ಮನೋಭಾವದಿಂದ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಯಾವುದೇ ವೃತ್ತಿಗೆ ಹೊಂದಿಕೊಳ್ಳುವ ಮುನ್ನವೇ ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಪಾಲಕರು ಆಸಕ್ತಿ ವಹಿಸಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಸಲಹೆ ನೀಡಿದರು.
ಎಸ್ಡಿಎಂಸಿ ಅಧ್ಯಕ್ಷ ಶಂಭಣ್ಣ ಯಲಿಗಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಚಿನ್ನಪ್ಪ ಹೊಸ್ಮನಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನಬಸಪ್ಪ ಹುಲ್ಲತ್ತಿ, ಮುಖಂಡರಾದ ದಾನಪ್ಪ ಚೂರಿ, ಬೀರಪ್ಪ ಬಣಕಾರ, ಶಂಕರಗೌಡ ಪಾಟೀಲ, ದಾನಪ್ಪ ಹರಿಹರ, ಡಿ.ಎಚ್. ಬುಡ್ಡನಗೌಡ್ರ, ವಿಜಯ ಯಲಿಗಾರ, ವಾಸು ಬೆಳಕೇರಿ, ಸಿದ್ದನಗೌಡ ಪಾಟೀಲ, ದುಂಡೆಪ್ಪ ಜ್ಯೋತಿ, ಹೊನ್ನಪ್ಪ ಕೊತನೇರ, ನೀಲಪ್ಪ ಗಟ್ಟಿಮನಿ, ಬಿಇಒ ಎಸ್.ಜಿ. ಕೋಟಿ, ಕಾಲೇಜು ಪ್ರಾಚಾರ್ಯ ರಾಜಶೇಖರಮೂರ್ತಿ, ಪಿಡಿಒ ಶಿವಾನಂದ ಕುಬಟೂರ, ಪ್ರೌಢಶಾಲೆ ಮುಖ್ಯಶಿಕ್ಷಕ ಜೀವರಾಜ ಛತ್ರದ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಐ.ಬಿ. ಜ್ಯೋತಿ, ಶಿಕ್ಷಕರಾದ ಎಸ್.ಆರ್. ಬಡ್ಡಿ, ಅಂಬಿಕಾ ಪವಾರ, ವೀರಮ್ಮ ಮಠದ, ಎ.ಸಿ. ರೂಪಾ, ಮಂಜುಳ ಸೆದಿಯಣ್ಣನವರ, ಹೇಮಲತಾ ಕೊರವರ ಇತರರಿದ್ದರು. ಶಂಕರ ಕಿಚಡಿ ಸ್ವಾಗತಿಸಿದರು. ವಿಜಯ ಶಿಡಗನಾಳ ನಿರೂಪಿಸಿದರು. ರಾಜು ದೇವಗಿರಿಮಠ ವಂದಿಸಿದರು.