ಹನುಮಸಾಗರ: ಹನುಮಸಾಗರದಿಂದ ಶ್ರೀಶೈಲ ಮಲ್ಲಿಕಾರ್ಜುನ ಸುಕ್ಷೇತ್ರಕ್ಕೆ ಯುಗಾದಿ ಜಾತ್ರೆಯ ನಿಮಿತ್ತ ಕಂಬಿಯ ಮೂಲಕ ೩೦ನೇ ವರ್ಷದ ಸಂಕಲ್ಪ ಸಿದ್ಧಿ ಪಾದಯಾತ್ರೆ ಅಂಗವಾಗಿ ಮಲ್ಲಯ್ಯನ ಕಂಬಿಯನ್ನು ಭಕ್ತರು ಬೀಳ್ಕೊಟ್ಟರು.
ಪಾದಯಾತ್ರೆ ಕೈಗೊಂಡ ಇಲಕಲ್ ತಾಲೂಕಿನ ಗೊರೇಬಾಳ ಭಕ್ತರು, ಹನುಮಸಾಗರ, ಜಹಗೀರಗುಡದೂರ, ಬೆನಕನಾಳ, ಮನ್ನೇರಾಳ, ಬೀಳಗಿ, ಅಂಟರಠಾಣಾ, ಕಾಟಾಪುರ, ಕಬ್ಬರಗಿ, ಚಳಗೇರಿ, ಮಲಕಾಪುರ, ಮೀಯಾಪುರ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಇದ್ದರು.
ತೇರದಾಳದ ಶ್ರೀಶಿವಕುಮಾರ ದೇವರು, ಶರಣಯ್ಯ ಚಂದಯ್ಯ ಕೆಂಭಾವಿಮಠ, ಗುರುಸಿದ್ದಯ್ಯ ನಡುವಿನಮಠ, ಬಸಣ್ಣ ಅಂದಾನೆಪ್ಪ ಅಗಸಿಮುಂದಿನ, ವಾಸುದೇವ ನಾಗೂರ, ರಾಚಪ್ಪ ಚಿನಿವಾಲರ, ವಿಶ್ವನಾಥ ಕನ್ನೂರ, ಶಿವಪುತ್ರಪ್ಪ ಕಂಪ್ಲಿ, ವಿಠ್ಠಲಸಾ ಸಿಂಗ್ರಿ, ಸುನಿಲ ಬಿಂಗಿಕೊಪ್ಪ, ಶ್ರೀಶೈಲ್ ಮೋಟಗಿ, ಮುತ್ತಣ್ಣ ಚಿನಿವಾಲರ, ಮಲ್ಲಯ್ಯ ಕೋಮಾರಿ, ಬಸವರಾಜ ಚಿನಿವಾಲರ, ಮಹಾಂತಯ್ಯ ಕೋಮಾರಿ, ಪ್ರಭು ಡೀಪೋ, ಸುಭಾಷ ನಾಗೂರ, ವೀರಣ್ಣ ಹುನಗುಂಡಿ, ಶರಣಯ್ಯ ಕೋಮಾರಿ, ವೀರಪ್ಪ ಕರಂಡಿ, ಶರಣಯ್ಯ ಕೆಂಬಾವಿಮಠ, ಮಲ್ಲಪ್ಪ ಕೋಳೂರ, ಪಿಡಿಒ ದೇವೇಂದ್ರಪ್ಪ ಕಮತರ ಇತರರಿದ್ದರು.