ಕನ್ನಡಪ್ರಭ ವಾರ್ತೆ ಯಲಬುರ್ಗಾ
ಪಟ್ಟಣದ ಸಾಯಿ ಪ್ಯಾಲೇಸ್ನಲ್ಲಿ ಬುಧವಾರ ಮಹಿಳಾ ಬಸವ ಶಿವಯೋಗ ಸಮಿತಿಯಿಂದ ಹಮ್ಮಿಕೊಂಡಿದ್ದ ೧೫ನೇ ಮಾಸಿಕ ಬಸವಾನುಭವ ಶಿವಶರಣರ ಚಿಂತನಾಗೋಷ್ಟಿ,ಶರಣ ಕುಂಬಾರ ಗುಂಡಯ್ಯ ಹಾಗೂ ಪಂಡಿತ್ ಪುಟ್ಟರಾಜ ಗವಾಯಿಗಳ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಎಲ್ಲರೂ ಆತ್ಮಶುದ್ಧಿಯಿಂದ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ. ಅಹಂಕಾರ ತ್ಯಜಿಸಿ, ಎಲ್ಲರೂ ಒಂದೇ ಎಂಬ ಭಾವ ಮೂಡಿದಾಗ ಮಾತ್ರ ಜೀವನಕ್ಕೆ ಅರ್ಥ ಬರುತ್ತದೆ. ನೆಮ್ಮದಿ ಮತ್ತು ಸುಖ ಸಮೃದ್ಧಿಯಿಂದ ಇರಲು ನಾವು ಆತ್ಮದಿಂದ ಒಳ್ಳೆಯವರಾಗಬೇಕು. ಪ್ರತಿ ತಿಂಗಳ ಇಂತಹ ಗೋಷ್ಠಿ ಆಯೋಜಿಸಿ ಶರಣರ ಚಿಂತನೆ ಬಿತ್ತರಿಸುವ ಕೆಲಸ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.ಭೂನ್ಯಾಯ ಮಂಡಳಿಯ ಸದಸ್ಯೆ ಸಾವಿತ್ರಿ ಗೊಲ್ಲರ್, ಉಪನ್ಯಾಸಕಿ ಸುವರ್ಣ ಕುಂಬಾರ ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಣ್ಣನವರ ಸಮಕಾಲೀನರಾಗಿ ಕುಂಬಾರ ಗುಂಡಯ್ಯನವರು ಕಾಯಕಯೋಗಿಯಾಗಿ ಕೆಲಸ ಮಾಡಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಎಲ್ಲ ಶರಣರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಾಡಿನ ಅಂಧ ಅನಾಥ ಮಕ್ಕಳ ಬಾಳಿಗೆ ಬೆಳಕಾದ ಪಂ. ಪುಟ್ಟರಾಜ ಗವಾಯಿಗಳವರ ಸಾಮಾಜಿಕ ಕೊಡುಗೆ ಎಂದಿಗೂ ಮರೆಯುವಂತಿಲ್ಲ ಎಂದರು.
ಈ ಸಂದರ್ಭ ಮಹಿಳಾ ಘಟಕ ಅಧ್ಯಕ್ಷೆ ಜ್ಯೋತಿ ಪಲ್ಲೇದ, ಅನುಸೂಯಾ ತೆಂಗಿನಕಾಯಿ, ಗೀತಾ ಅಕ್ಕ,ನಿರ್ಮಲಾ ಶರಣಪ್ಪ ಗಾಂಜಿ, ಸುನೀತಾ ಪಂತಗರಾಯ, ವಿಜಯಲಕ್ಷ್ಮಿ ತೆಂಗಿನಕಾಯಿ, ಆಶಾರಾಣಿ, ರಚನಾ ತೆಂಗಿನಕಾಯಿ, ಗೌರಮ್ಮ ಕುಂಬಾರ, ಶೋಭಾ ಕಂದಕೂರು, ವೀಣಾ ಹೊಸಮನಿ, ನಂದಾ ತೆಂಗಿನಕಾಯಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ವೀರಣ್ಣ ನಿಂಗೋಜಿ, ಅಶೋಕ ಮಾಲಿಪಾಟೀಲ್, ದೇವಪ್ಪ ವಾಲ್ಮೀಕಿ, ಕಳಕೇಶ ಅರಕೇರಿ, ಗಾಳೇಪ್ಪ ಬಂಡಿಹಾಳ, ಫಕೀರಪ್ಪ ಗಾಣಗೇರ್, ಶರಣಬಸಪ್ಪ ದಾನಕೈ ಹಾಗೂ ವಿದ್ಯಾರ್ಥಿಗಳು ಇದ್ದರು.