ದಾವಣಗೆರೆ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶುಕ್ರವಾರ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ದೊಡ್ಡಬಾತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಮಗೆ ಬ್ಯಾಕಪ್ ಗ್ರಹವಿಲ್ಲ. ನಮಗೆ ಒಂದೇ ಭೂಮಿ ಇದೆ. ನಮ್ಮ ದೈನಂದಿನ ಅಭ್ಯಾಸಗಳಲ್ಲಿ ಸರಳ ಬದಲಾವಣೆಗಳನ್ನು ಮಾಡುವ ಮೂಲಕ ನಾವು ಅದನ್ನು ಉಳಿಸಬೇಕು. ಇಂದು ಹೆಚ್ಚಿನ ಮರಗಳನ್ನು ನೆಡಲು, ನೀರನ್ನು ಉಳಿಸಲು ಮತ್ತು ಏಕ-ಬಳಕೆಯ ಪ್ಲಾಸ್ಟಿಕ್ಗಳನ್ನು ಸಂಪೂರ್ಣವಾಗಿ ತಪ್ಪಿಸಲು ಪ್ರತಿಜ್ಞೆ ಮಾಡೋಣ ಎಂದರು.
ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಮಾಜಿ ಎಂಎಲ್ಸಿ ಡಾ.ಎ.ಎಚ್.ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಲೋಕಿಕೆರೆ ನಾಗರಾಜ, ಪ್ರಕಾಶ, ಡಿ.ಆರ್.ವೀರೇಶ್, ಆರ್.ಎಲ್.ಶಿವಪ್ರಕಾಶ, ಅನಿಲ್ ನಾಯ್ಕ್, ತಾರೇಶ್ ನಾಯ್ಕ್, ಜಿ.ಎಸ್.ಶ್ಯಾಮ್, ಬಿ.ಜಿ.ರೇವಣಸಿದ್ದಪ್ಪ, ರವಿಕುಮಾರ ಬಾತಿ, ಅತಿಥ್ ಅಂಬರ್ಕರ್, ಕೊಟ್ರೇಶ್ ಗೌಡ, ಸಿದ್ದೇಶ್ ಹಳೇಬಾತಿ, ನವೀನ್ ಕುಮಾರ, ಭಾಗ್ಯ ಪಿಸಾಳೆ, ಪುಷ್ಪವಾಲಿ, ರೇಖಾ ವಾಲಿ ಇತರರು ಇದ್ದರು.ಕ್ಯಾಪ್ಷನ5ಕೆಡಿವಿಜಿ40: ದಾವಣಗೆರೆ ಸಮೀಪದ ದೊಡ್ಡಬಾತಿಯ ಸರ್ಕಾರಿ ಶಾಲೆಯಲ್ಲಿ ಬಿಜೆಪಿ ಮುಖಂಡರಾದ ಗಾಯತ್ರಿ ಸಿದ್ದೇಶ್ವರ ಸಸಿ ನೆಡುವ ಮೂಲಕ ಪರಿಸರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.