ಕನ್ನಡಪ್ರಭ ವಾರ್ತೆ ಶಿವಮೊಗ್ಗ ತ್ರಿಪದಿಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಸರ್ವಜ್ಞ ಅವರು ಮಾಡಿದ್ದಾರೆ ಎಂದು ಶಾಸಕರಾದ ಎಸ್.ಎನ್. ಚನ್ನಬಸಪ್ಪ ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸುವ ಉದ್ದೇಶದಿಂದ ಸರ್ಕಾರ ಇಂದು ಅಂತರ್ಜಾತಿ ವಿವಾಹಕ್ಕೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದೆ. ಆದರೆ, ಸರ್ವಜ್ಞ ಅಂದಿನ ಕಾಲದಲ್ಲಿಯೇ ಅಂತರ್ಜಾತಿ ವಿವಾಹಕ್ಕೆ ಕರೆ ನೀಡುವ ಮೂಲಕ, ಜಾತಿ ಜಾತಿಗಳ ನಡುವೆ ಸಾಮರಸ್ಯವನ್ನು ಮೂಡಿಸಿದ್ದರು. ಸಾಮಾನ್ಯರ ಮನೆಯಲ್ಲಿ ಜನಿಸಿದ ಸರ್ವಜ್ಞ ಅವರು ದೊಡ್ಡ ಶಕ್ತಿಯಾಗಿ ಬೆಳೆಯಲು ಕಾರಣ ಅವರ ಜೀವನ ಆದರ್ಶಗಳು, ಮೌಲ್ಯಯುತ ಬದುಕಾಗಿದೆ ಎಂದು ಬಣ್ಣಿಸಿದರು.
ಶಿವಮೊಗ್ಗ ತಹಸೀಲ್ದಾರ್ ಗಿರೀಶ್ ಮಾತನಾಡಿ, ಮಹಾನ್ ವ್ಯಕ್ತಿಗಳ ಜಯಂತಿಯಂದು ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿದರೆ ನಮ್ಮ ಕತ್ಯವ್ಯ ಮುಗಿದುಹೋಗುವುದಿಲ್ಲ. ಬದಲಿಗೆ ಅವರ ಜೀವನ ಆದರ್ಶವನ್ನು, ಮೌಲ್ಯಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡರೆ ಮಾತ್ರ ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆಗಳಿಗೆ ನಿಜವಾದ ಗೌರವ ನೀಡಿದಂತೆ ಎಂದರು.ಸರ್ವಜ್ಞರ ತ್ರಿಪದಿಗಳ ಒಂದೊಂದು ಪದಗಳು ಜೀವನ ಪರಿವರ್ತನೆ ಮಾಡುವಂತಿವೆ. ಅದನ್ನು ನಾವು ಓದಿ ತಿಳಿದುಕೊಂಡು, ನಮ್ಮ ಮಕ್ಕಳಿಗೆ ಅವರ ಬಗ್ಗೆ ತಿಳಿಸುವ ಕೆಲಸ ಮಾಡಬೇಕು. ಸರ್ವಜ್ಞರು ಕೇವಲ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಅವರು ಇಡೀ ದೇಶದ ಅಸ್ತಿಯಾಗಿದ್ದಾರೆ ಎಂದರು.
- - - -20KPSMG04: