20ಕ್ಕೆ ಸಾವರ್ಕರ್ ಪುಸ್ತಕ ಬಿಡುಗಡೆ

KannadaprabhaNewsNetwork | Published : Apr 14, 2025 1:24 AM

ಸಾರಾಂಶ

ಬೆಳದಿಂಗಳೂಟ ಕಾರ್ಯಕ್ರಮ ಏ.೨೦ರಂದು ಸಂಜೆ ೬.೩೦ ನಡೆಯಲಿದೆ

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಸರ್ವೋದಯ ಹೈಸ್ಕೂಲ್ ಮೈದಾನದಲ್ಲಿ ಸಾವರ್ಕರ್ ಪ್ರತಿಮೆ ಅನಾವರಣ ಸಮಿತಿ, ಸಾವರ್ಕರ್ ವಿಚಾರ ಪ್ರಚಾರ ಸಮಿತಿಯ ಆಶ್ರಯದಲ್ಲಿ ವೀರ ಸಾವರ್ಕರ್ ಕುರಿತು ಪುಸ್ತಕ ಬಿಡುಗಡೆ, ಉಪನ್ಯಾಸ, ಬೆಳದಿಂಗಳೂಟ ಕಾರ್ಯಕ್ರಮ ಏ.೨೦ರಂದು ಸಂಜೆ ೬.೩೦ ನಡೆಯಲಿದೆ ಎಂದು ಸಮಿತಿಯ ಸಂಚಾಲಕ ವಿ.ಎನ್ ಭಟ್ಟ ನಡಿಗೆಮನೆ ಹೇಳಿದರು.ಈ ಕುರಿತು ಶನಿವಾರ ಆಮಂತ್ರಣ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್ ಹೆಗಡೆ ಕರ್ಕಿ ಸಾವರ್ಕರ್ ಸಂದೇಶ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಾವರ್ಕರ್ ಪ್ರತಿಮೆ ಅನಾವರಣ ಸಮಿತಿಯ ಅಧ್ಯಕ್ಷ ಗಣಪತಿ ನಡಿಗೆಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಚಿಂತಕ ಅಜಿತ ಹನುಮಕ್ಕನವರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಪ್ರಮುಖರಾದ ಹರಿಪ್ರಕಾಶ ಕೋಣೆಮನೆ, ಪ್ರಸಾದ ಹೆಗಡೆ, ರಾಮಕೃಷ್ಣ ಹೆಬ್ಬಾರ ಭಾಗವಹಿಸಲಿದ್ದಾರೆ ಎಂದರು.

ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಮನೆ ಮನೆಗೆ ವೀರ ಸಾವರ್ಕರ್ ವಿಚಾರಧಾರೆ ತಲುಪಿಸುವ ನಿಟ್ಟಿನಲ್ಲಿ ಸಾವರ್ಕರ್ ವಿಚಾರ ಪ್ರಚಾರ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿಮೆ ಆಗಬೇಕೆನ್ನುವ ಹೋರಾಟ ವಜ್ರಳ್ಳಿಯ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದೆ. ಸಾವರ್ಕರ್ ವಿಚಾರದ ಜಾಗೃತಿಗೆ ವ್ಯವಸ್ಥಿತ ಯೋಜನೆ ಹಾಕಿಕೊಳ್ಳಲಾಗಿದೆ. ಮೇ ೨೮ರಂದು ಸಾವರ್ಕರ್ ಕುರಿತಾದ ವಿಚಾರ ಸಂಕಿರಣ ಯಲ್ಲಾಪುರದಲ್ಲಿ ನಡೆಯಲಿದೆ. ಚಿಂತಕರಾದ ಜಿ.ವಿ ಹರೀಶ, ಮಂಜುನಾಥ ಅಜ್ಜಂಪುರ ಭಾಗವಹಿಸಲಿದ್ದಾರೆ. ಸಾವರ್ಕರ್ ವಿಚಾರಧಾರೆ ವ್ಯಾಪಕವಾಗಿ ಜನರನ್ನು ತಲುಪಿಸುವ ಕಾರ್ಯವನ್ನು ಸಮಿತಿ ಮಾಡಲು ಬದ್ಧವಾಗಿದೆ ಎಂದರು.

ಸಾವರ್ಕರ್ ಪ್ರತಿಮೆ ಅನಾವರಣ ಸಮಿತಿ ಕಾರ್ಯದರ್ಶಿ ಮಹೇಶ ಗಾಂವ್ಕಾರ, ಪ್ರಸಾದ ಹೆಗಡೆ, ಗಣಪತಿ ಮಾನಿಗದ್ದೆ, ವಿಶ್ವನಾಥ ಹಳೆಮನೆ ಇದ್ದರು.

ವೀರ ಸಾವರ್ಕರ್ ಕುರಿತು ಪುಸ್ತಕ ಬಿಡುಗಡೆ ಬಗ್ಗೆ ಆಮಂತ್ರಣ ಬಿಡುಗಡೆಗೊಳಿಸಲಾಯಿತು.

Share this article