ರಾಮನಗರ: ಚಲಿಸುತ್ತಿದ್ದ ಖಾಸಗಿ ಶಾಲಾ ವಾಹನವೊಂದು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಪಕ್ಕದ ಕಂಬಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಬಿಡದಿ ಪಟ್ಟಣದ ಬಾನಂದೂರು ಕ್ರಾಸ್ ಬಳಿ ನಡೆದಿದೆ.
ಈ ವೇಳೆ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದಲ್ಲಿರುವ ಹಳ್ಳದ ಕಡೆಗೆ ವಾಲಿದೆ. ಅದೃಷ್ಟವಶಾತ್ ಅಲ್ಲಿದ್ದ ಕಬ್ಬಿಣದ ಜಾಹೀರಾತು ಫಲಕದ ಕಂಬಿಯೊಂದು ಬಸ್ ಹಳ್ಳಕ್ಕೆ ಉರುಳದಂತೆ ತಡೆದಿದೆ. ಇದರಿಂದ ದೊಡ್ಡಮಟ್ಟದ ಅನಾಹುತವೊಂದು ತಪ್ಪಿದೆ. ಶಾಲಾ ಬಸ್ನಲ್ಲಿ 11 ವಿದ್ಯಾರ್ಥಿಗಳು ಹಾಗೂ 7 ಶಿಕ್ಷಕರು ಪ್ರಯಾಣಿಸುತ್ತಿದ್ದು ಅವಘಡದಲ್ಲಿ ಯಾರಿಗೂ ಅಪಾಯವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿ ಬಸ್ಸಿನಿಂದ ಹೊರಗೆ ಬಂದಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ರೇನ್ ವಾಹನ ಹಾಗೂ ಕೆಲವು ಸ್ಥಳೀಯರ ಸಹಾಯದಿಂದ ಬಸ್ ಅನ್ನು ರಸ್ತೆಗೆ ಎಳೆಸಿದ್ದಾರೆ. ಘಟನೆಯಿಂದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ಬಳಿಕ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.2ಕೆಆರ್ ಎಂಎನ್ 2.ಜೆಪಿಜಿ
ಬಾನಂದೂರು ಕ್ರಾಸ್ ಬಳಿ ಶಾಲಾ ಬಸ್ ರಸ್ತೆ ಬದಿಯಲ್ಲಿ ಹಳ್ಳದ ಕಡೆಗೆ ವಾಲಿರುವ ದೃಶ್ಯ.