ಕನ್ನಡಪ್ರಭ ವಾರ್ತೆ ತಾಳಿಕೋಟೆ
ತಾಲೂಕಿನ ಚಬನೂರ ಗ್ರಾಮದ ಪ್ರತಿಷ್ಠಿತ ದಾಸೋಹ ಮಠವಾಗಿರುವ ಸಿದ್ಧಿ ಪುರುಷ ರಾಮಲಿಂಗೇಶ್ವರ ಮಠದಲ್ಲಿ ಮೇ.1ರಿಂದ 30ರವರೆಗೆ ಸಿದ್ಧಿ ಪುರುಷ ರಾಮಲಿಂಗೇಶ್ವರ ವೈದಿಕ ಸಂಸ್ಕಾರ ಶಿಬಿರದಲ್ಲಿ ಸೋಮವಾರ ನಡೆದ ಇಷ್ಠಲಿಂಗ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿದ್ದಿಪುರುಷ ರಾಮಲಿಂಗೇಶ್ವರರು ನಮಗೆ ದಾರಿದೀಪವಾಗಿದ್ದಾರೆ. ವೈದಿಕ ಸಂಸ್ಕಾರ ಶಿಬಿರಗಳು ಸಾಮಾನ್ಯವಾಗಿ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಮತ್ತು ಧಾರ್ಮಿಕ ಮೌಲ್ಯಗಳನ್ನು ಬೆಳೆಸುವ ಬೇಸಿಗೆ ಶಿಬಿರಗಳಾಗಿವೆ. ಈ ಶಿಬಿರದಿಂದ ಮೌಲ್ಯಯುತವಾದ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಲಿದೆ. ರಾಮಲಿಂಗೇಶ್ವರ ಮಠದಲ್ಲಿ ಈ ಭಾಗದಲ್ಲಿ ಮಕ್ಕಳಿಗೆ ಇಷ್ಟಲಿಂಗ ಪೂಜೆ, ಶಿವಯೋಗ ಸಾಧನೆ ಮತ್ತು ಪೂಜಾ ವಿಧಿವಿಧಾನಗಳು, ವೈದಿಕ ಸಂಸ್ಕಾರ, ಧಾರ್ಮಿಕ ಆಚರಣೆಗಳು ಮತ್ತು ಇಷ್ಟಲಿಂಗ ಪೂಜೆ ಬಗ್ಗೆ ಜ್ಞಾನ ನೀಡುವುದು, ವೇದ, ಪಠಣ, ಯೋಗ, ಒಳಗೊಂಡು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಧಾರ್ಮಿಕ ಹಿನ್ನೆಲೆ ಬಲಪಡಿಸಲು ಅವಶ್ಯವಾಗಿರುವ ಅಂಶಗಳು ಈ ಶಿಬಿರದಲ್ಲಿ ಕಲಿಸಲಾಗುತ್ತಿದೆ. ಮಕ್ಕಳಲ್ಲಿ ಸಂಸ್ಕಾರದ ಜ್ಞಾನ ಅರಿವು ಮೂಡಿಸುವ ಸಲುವಾಗಿ ವೈದಿಕ ಸಂಸ್ಕಾರ ಶಿಬಿರ ಹಮ್ಮಿಕೊಂಡಿದೆ ಎಂದರು.ನಂದವಾಡಗಿ ವೇದ ಪಂಡಿತ ಸಿದ್ದು ಹಿರೇಮಠ ಮಾತನಾಡಿ, ಈ ಭಾಗದ ಮಕ್ಕಳಲ್ಲಿ 1 ತಿಂಗಳ ಶಾಲಾ ರಜೆ ವೇಳೆ ಮಕ್ಕಳಿಗೆ ಉಪಯುಕ್ತವಾಗುವ ಜಿಲ್ಲೆಯಲ್ಲಿಯೇ ಮಾದರಿಯಾಗುವ ವೈದಿಕ ಸಂಸ್ಕಾರ ಶಿಬಿರ ಆಯೋಜಿಸಿ ಕಾಶಿ ವೇದ ಪಂಡಿತರಿಂದ ಹಾಗೂ ಶ್ರೀಶೈಲ ವೇದ ಮತ್ತು ಜ್ಯೋತಿಷ್ಯ ಪಂಡಿತರಿಂದ ವಾರಕ್ಕೊಮ್ಮೆ ವಿಶೇಷ ಭೋದನಾ ಶಿಬಿರ ನಡೆಯುತ್ತಾ ಬಂದಿದೆ. ನಿತ್ಯ ಕುಂಟೋಜಿಯ ವೈದಿಕ ಶಾಸ್ತ್ರಿ ವಿರೇಶ ಹಿರೇಮಠ, ವೈದಿಕ ಶಾಸ್ತ್ರಿ ಪ್ರದೀಪ ಹಿರೇಮಠ, ಗಿರೀಶ ಹಿರೇಮಠ ನಡೆಸಿಕೊಟ್ಟರು.
-ರಾಮಲಿಂಗಯ್ಯ ಮಹಾಸ್ವಾಮೀಜಿ, ಜ್ಯೋತಿಷ್ಯ ರತ್ನ ಚಬನೂರ