ಸಾವಿರಾರು ಕಳಪೆ ಹೆಲ್ಮೆಟ್‌ಗಳ ವಶ

KannadaprabhaNewsNetwork |  
Published : Feb 23, 2025, 12:31 AM IST
ಕ್ಯಾಪ್ಷನ22ಕೆಡಿವಿಜಿ40, 41 ದಾವಣಗೆರೆಯಲ್ಲಿ ಎಸ್ಪಿ ನೇತೃತ್ವದಲ್ಲಿ ಸಂಚಾರಿ ಪೊಲೀಸ್ ವತಿಯಿಂದ ಪ್ಲಾಸ್ಟಿಕ್, ಅರ್ಧ, ಗುಣಮಟ್ಟವಲ್ಲದ ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆಯಲಾಯಿತು. | Kannada Prabha

ಸಾರಾಂಶ

ದಾವಣಗೆರೆ ನಗರದಲ್ಲಿ ಸಂಚಾರ ಪೊಲೀಸರು ಶುಕ್ರವಾರ, ಶನಿವಾರ ಗುಣಮಟ್ಟವಲ್ಲದ, ಪ್ಲಾಸ್ಟಿಕ್ ಹೆಲ್ಮೆಟ್, ಅರ್ಧ ಹೆಲ್ಮೆಟ್ ತಪಾಸಣೆ ಕಾರ್ಯಾಚರಣೆ ನಡೆಸಿ, ಚಾಲಕರಿಂದ ಸುರಕ್ಷಿತವಲ್ಲದ ಸಾವಿರಾರು ಹೆಲ್ಮೆಟ್‌ಗಳನ್ನು ವಶಪಡಿಸಿಕೊಂಡರು. ಅಲ್ಲದೇ, ಗುಣಮಟ್ಟದ ಐಎಸ್‌ಐ ಹೆಲ್ಮೆಟ್‌ಗಳನ್ನೇ ಧರಿಸಿ ದ್ವಿಚಕ್ರ ವಾಹನಗಳ ಚಲಾಯಿಸುವಂತೆ ಜನಜಾಗೃತಿ ಮೂಡಿಸಿದರು.

- ಪ್ಲಾಸ್ಟಿಕ್, ಅರ್ಧ ಹೆಲ್ಮೆಟ್‌ಗಳನ್ನು ನಾಶಪಡಿಸುವ ಸಲುವಾಗಿ ಚಾಲಕರ ತಪಾಸಣೆ

- - - - ಗುಣಮಟ್ಟದ ಹೆಲ್ಮೆಟ್ ಬಳಸಿ, ಜೀವಹಾನಿ ತಪ್ಪಿಸಲು ಪೊಲೀಸರಿಂದ ಜನಜಾಗೃತಿ

- ಎಸ್‌ಪಿ ಸೂಚನೆ; ಸಂಚಾರಿ ಠಾಣೆ ಪೊಲೀಸರಿಂದ ಶುಕ್ರವಾರ, ಶನಿವಾರ ಜಾಗೃತಿ

- ಫೆ.23, 24 ರಂದು ಹೆಲ್ಮೆಟ್‌ ವಿಶೇಷ ಕಾರ್ಯಾಚರಣೆ: ಜಿಲ್ಲಾ ಪೊಲೀಸ್‌ ಮಾಹಿತಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ನಗರದಲ್ಲಿ ಸಂಚಾರ ಪೊಲೀಸರು ಶುಕ್ರವಾರ, ಶನಿವಾರ ಗುಣಮಟ್ಟವಲ್ಲದ, ಪ್ಲಾಸ್ಟಿಕ್ ಹೆಲ್ಮೆಟ್, ಅರ್ಧ ಹೆಲ್ಮೆಟ್ ತಪಾಸಣೆ ಕಾರ್ಯಾಚರಣೆ ನಡೆಸಿ, ಚಾಲಕರಿಂದ ಸುರಕ್ಷಿತವಲ್ಲದ ಸಾವಿರಾರು ಹೆಲ್ಮೆಟ್‌ಗಳನ್ನು ವಶಪಡಿಸಿಕೊಂಡರು. ಅಲ್ಲದೇ, ಗುಣಮಟ್ಟದ ಐಎಸ್‌ಐ ಹೆಲ್ಮೆಟ್‌ಗಳನ್ನೇ ಧರಿಸಿ ದ್ವಿಚಕ್ರ ವಾಹನಗಳ ಚಲಾಯಿಸುವಂತೆ ಜನಜಾಗೃತಿ ಮೂಡಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಸೂಚನೆಯಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ್, ಜಿ. ಮಂಜುನಾಥ, ನಗರ ಡಿವೈಎಸ್ಪಿ ಶರಣ ಬಸವೇಶ್ವರ ಅವರ ಮಾರ್ಗದರ್ಶನದಲ್ಲಿ ನಗರ ಸಂಚಾರ ಪೊಲೀಸ್ ಸಿಪಿಐ ನಲವಾಗಲು ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚಣೆ ನಡೆಯಿತು.

ನಗರದ ಪ್ರಮುಖ ವೃತ್ತಗಳಾದ ಅರುಣಾ, ಸಂಗೊಳ್ಳಿ ರಾಯಣ್ಣ, ಎಸಿ ವೃತ್ತ, ಎಂ.ಜಿ.ವೃತ್ತ, ಗಡಿಯಾರ ಕಂಬ ವೃತ್ತಗಳಲ್ಲಿ ಅರ್ಧ ಹೆಲ್ಮೆಟ್, ಕಳಪೆ ಮಟ್ಟದ ಹೆಲ್ಮೆಟ್, ಪ್ಲಾಸ್ಟಿಕ್ ಹೆಲ್ಮೆಟ್ ಹಾಕಿಕೊಂಡು ಸಂಚರಿಸುವ ಮೋಟಾರ್ ಸೈಕಲ್ ಚಾಲಕರನ್ನು ತಡೆದು ತಪಾಸಣೆ ನಡೆಸಲಾಯಿತು. ಅಪಘಾತವಾದಂತ ಸಂದರ್ಭ ಜೀವಹಾನಿ ತಡೆಯುವ ನಿಟ್ಟಿನಲ್ಲಿ ಸಲಹೆ ನೀಡಲಾಯಿತು.

ಎರಡು ದಿನಗಳಲ್ಲಿ ಸುಮಾರು 2 ಸಾವಿರ ಪ್ಲಾಸ್ಟಿಕ್, ಅರ್ಧ ಹೆಲ್ಮೆಟ್‌ಗಳನ್ನು ನಾಶಪಡಿಸುವ ಸಲುವಾಗಿ ವಶಕ್ಕೆ ಪಡೆಯಲಾಯಿತು. ಕೇವಲ ಈ ಬಾರಿ ಐಎಸ್‌ಐ ಮಾರ್ಕ್ ಇರುವ ಗುಣಮಟ್ಟದ ಹೆಲ್ಮೆಟ್ ತಂದು ಹಾಕಿಕೊಂಡವರಿಗೆ ಹಾಗೂ ಪ್ಲಾಸ್ಟಿಕ್ ಹೆಲ್ಮೆಟ್/ಅರ್ಧ ಹೆಲ್ಮೆಟ್ ಅನ್ನು ಅರಿತುಕೊಂಡು ವಶಕ್ಕೆ ನೀಡಿದವರಿಗೆ ಮಾತ್ರ ದಂಡ ವಿಧಿಸದೇ ತಿಳಿವಳಿಕೆ ನೀಡಿ ಕಳುಹಿಸಲಾಯಿತು.

ಮುಂದುವರಿದ ಭಾಗವಾಗಿ ಹೆಲ್ಮೆಟ್‌ ವಿಶೇಷ ಕಾರ್ಯಾಚರಣೆಯು ಫೆ.23, 24 ರಂದು ನಡೆಯಲಿದೆ. ಐಎಸ್‌ಐ ಮಾರ್ಕ್ ಇಲ್ಲದ ಕಳಪೆ, ಹಾಫ್ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ ಹಾಕಿಕೊಂಡು ಮೋಟಾರ್ ಸೈಕಲ್ ಓಡಿಸುವ ಚಾಲಕರಿಗೆ ಕಡ್ಡಾಯವಾಗಿ ದಂಡ ವಿಧಿಸಲಾಗುವುದು ಎಂದು ಪೊಲೀಸ್ ಅಧೀಕ್ಷಕರು ಎಚ್ಚರಿಸಿದ್ದಾರೆ.

- - - -22ಕೆಡಿವಿಜಿ40, 41:

ದಾವಣಗೆರೆಯಲ್ಲಿ ಎಸ್ಪಿ ನೇತೃತ್ವದಲ್ಲಿ ಸಂಚಾರಿ ಪೊಲೀಸ್ ವತಿಯಿಂದ ಪ್ಲಾಸ್ಟಿಕ್, ಅರ್ಧ, ಗುಣಮಟ್ಟವಲ್ಲದ ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆಯಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಸುರಕ್ಷತೆಗೆ ಸಾರಿಗೆ ಇಲಾಖೆ ಎಐ ಆಧರಿತ ಕ್ಯಾಮೆರಾ ಅಳವಡಿಕೆ
ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌