ಮಹಿಳೆಯ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯದಿಂದ ಸ್ವಾವಲಂಬಿ ಬದುಕು: ಡಾ.ಸಿದ್ಧನಗೌಡ ಪಾಟೀಲ

KannadaprabhaNewsNetwork |  
Published : Mar 10, 2024, 01:30 AM IST
9ಡಿಡಬ್ಲೂಡಿ7ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಂಡಿದ್ದ ಶತಾಯುಷಿ ಗೌರಮ್ಮ ಚೆನ್ನಪ್ಪ ಹಲಗತ್ತಿ ದತ್ತಿಯಲ್ಲಿ ಲಕ್ಷ್ಮಿ ಸಿಂಗನಕೇರಿಯ ವಸರಮ್ಮ ಸಾಬಣ್ಣ ಕಲ್ಲವಡ್ಡರ ಅವರಿಗೆ `ಶ್ರಮಿಕ ಮಹಿಳೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಯಾವಾಗ ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಗೆ ಮೀಸಲಾತಿ ನೀಡಿ ಅವಳು ಕಾನೂನನ್ನು ಮಾಡುವ ಅಧಿಕಾರ ಹೊಂದುತ್ತಾಳೊ ಆವಾಗ ಮಹಿಳೆ ನಿಜವಾದ ಸದ್ಗತಿಯಾಗುವಳು ಎಂದು ಚಿಂತಕ ಡಾ.ಸಿದ್ಧನಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಮಹಿಳೆಗೆ ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಬೇಕು. ಅಂದಾಗ ಸ್ವಾವಲಂಬಿ ಬದುಕು ಸಾಧ್ಯ ಎಂದು ಚಿಂತಕ ಡಾ.ಸಿದ್ಧನಗೌಡ ಪಾಟೀಲ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ ಶತಾಯುಷಿ ಗೌರಮ್ಮ ಚೆನ್ನಪ್ಪ ಹಲಗತ್ತಿ ದತ್ತಿ ನಿಮಿತ್ತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ `ಶ್ರಮಿಕ ಮಹಿಳೆ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಮನೆಯಲ್ಲಿ ಗಂಡ ಹೇಳಿದಂತೆ ಕೇಳಿಕೊಂಡು ಹೊರಪ್ರಪಂಚದ ಅರಿವಿಲ್ಲದೆ ಇರುವ ಗೃಹಲಕ್ಷ್ಮೀ ಎಂದು ಕರೆಯಿಸಿಕೊಳ್ಳುವುದಕ್ಕಿಂತ ಮಹಿಳೆ ಹೊರ ಪ್ರಪಂಚಕ್ಕೆ ತೆರೆದುಕೊಳ್ಳುವುದು ಶ್ರೇಷ್ಠವಾದದ್ದು. ಇಂದು ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲಾ ಪಂಚಾಯಿತಿಗಳಲ್ಲಿ ಮಹಿಳೆಗೆ ಮೀಸಲಾತಿ ಇದೆ. ಆದರೆ, ಆ ಮೀಸಲಾತಿ ಅಧಿಕಾರ ಕೇವಲ ಅಧಿಕಾರ ನಿರ್ವಹಣೆ ಮಾಡುವುದಾಗಿದೆಯೇ ವಿನಃ ಕಾನೂನು ಮಾಡುವ ಅಧಿಕಾರ ಹೊಂದಿರುವುದಿಲ್ಲ. ಯಾವಾಗ ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಗೆ ಮೀಸಲಾತಿ ನೀಡಿ ಅವಳು ಕಾನೂನನ್ನು ಮಾಡುವ ಅಧಿಕಾರ ಹೊಂದುತ್ತಾಳೊ ಆವಾಗ ಮಹಿಳೆ ನಿಜವಾದ ಸದ್ಗತಿಯಾಗುವಳು ಎಂದರು.

ಮಹಿಳಾ ದಿನಾಚರಣೆಯನ್ನು ಸೌಂದರ್ಯ ಸ್ಪರ್ಧೆ, ರಂಗೋಲಿ ಸ್ಪರ್ಧೆಯಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಣೆ ಮಾಡದೇ ಹೆಣ್ಣು ಮಕ್ಕಳಲ್ಲಿ ಪ್ರಜ್ಞೆ ಮೂಡಿಸುವಂತೆ ವಿಚಾರ ಸಂಕಿರಣಗಳನ್ನು, ಚರ್ಚೆಗಳನ್ನು ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಬೇಕು. ಮಹಿಳೆ ಸ್ವಾವಲಂಬನೆ ಎನ್ನುವುದು ಅವಳ ಆರ್ಥಿಕ ಅವಲಂಬನೆ ಮೇಲೆ ನಿಂತಿದೆ. ಸಂಪೂರ್ಣ ಸ್ವಾವಲಂಬನೆ ಸಿಗಬೇಕೆಂದರೆ ಸಾಮಾಜಿಕ ಸ್ವಾತಂತ್ರ್ಯ ಇರಬೇಕು. ಆಗ ಮಹಿಳೆ ನಿರ್ಭಯದಿಂದ ಜೀವನ ಸಾಗಿಸಲು ಸಾಧ್ಯವಾಗುವುದು ಎಂದರು.

ಸಂಘದ ಉಪಾಧ್ಯಕ್ಷರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮೀ ಸಿಂಗನಕೇರಿಯ ವಸರಮ್ಮ ಸಾಬಣ್ಣ ಕಲ್ಲವಡ್ಡರ ಅವರಿಗೆ ಶ್ರಮಿಕ ಮಹಿಳೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ರೇಣುಕಾ ಮಂಜುನಾಥ ಕಲ್ಲವಡ್ಡರ ಸನ್ಮಾನಿತರ ಪರವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ದತ್ತಿದಾನಿ ರತ್ನಾ ಹಲಗತ್ತಿ ಇದ್ದರು. ವಿಶ್ರಾಂತ ಉಪನಿರ್ದೇಶಕ ಆರ್.ಸಿ. ಹಲಗತ್ತಿ ಮಾತನಾಡಿದರು.

ಎಸ್.ಎಂ. ರಾಚಯ್ಯನವರ ಗೌರಮ್ಮ ಹಲಗತ್ತಿಯವರ ಕುರಿತು ಸ್ವರಚಿತ ಕವನ ವಾಚಿಸಿದರು. ಸತೀಶ ತುರಮರಿ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಹಲಗತ್ತಿ ಸನ್ಮಾನಿತರನ್ನು ಪರಿಚಯಿಸಿದರು. ಶಂಕರ ಕುಂಬಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ