ಗಮನ ಸೆಳೆದ ಮತದಾರರ ಸೆಲ್ಫಿ ಪಾಯಿಂಟ್

KannadaprabhaNewsNetwork |  
Published : Apr 30, 2024, 02:08 AM ISTUpdated : Apr 30, 2024, 02:09 AM IST
ಗಜೇಂದ್ರಗಡ ಬಸ್ ನಿಲ್ದಾಣದಲ್ಲಿನ ಸೆಲ್ಫಿ ಪಾಯಿಂಟ್‌ನಲ್ಲಿ ಜನತೆಯ ಪೋಟೊಗಳನ್ನು ತಗೆದುಕೊಳ್ಳುತ್ತಿರುವುದು. | Kannada Prabha

ಸಾರಾಂಶ

ಸೆಲ್ಪಿ ಪಾಯಿಂಟ್ ಪ್ರೆಮ್ ಅಲ್ಲಿ ಚುನಾವಣಾ ಪರ್ವ, ದೇಶದ ಗರ್ವ, ನಾನು ಕಡ್ಡಾಯವಾಗಿ ಮತದಾನ ಮಾಡುತ್ತೇನೆ

ಗಜೇಂದ್ರಗಡ: ರಾಜ್ಯದಲ್ಲಿ ಮೇ ೭ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿಯು ಯುವ ಮತದಾರರು ಹಾಗೂ ಸಾರ್ವಜನಿಕರ ಗಮನ ಸೆಳೆಯಲು ಪಟ್ಟಣದಲ್ಲಿ ತೆರೆದಿರುವ ಸೆಲ್ಫಿ ಪಾಯಿಂಟ್‌ಗಳು ಯುವ ಸಮೂಹದ ಜತೆಗೆ ಮಹಿಳೆಯರನ್ನು ಆಕರ್ಷಿಸುತ್ತಿವೆ.

ಮದುವೆ, ಜಾತ್ರೆ ಸೇರಿ ಬಹುತೇಕ ಸಮಾರಂಭಗಳ ನೆನಪನ್ನು ಹಿಡಿದಿಟ್ಟುಕೊಳ್ಳಲು ಜನತೆ ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯ. ಹೀಗಾಗಿ ಜನತೆಗೆ ಮತದಾನದ ಮಹತ್ವ ಹಾಗೂ ಮತದಾನ ಪ್ರಕ್ರಿಯೇಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲು ಚುನಾವಣಾ ಆಯೋಗ ಈಗಾಗಲೇ ಹತ್ತಾರು ಪ್ರಚಾರ ತಂತ್ರಗಳ ಮೂಲಕ ಜನರನ್ನು ತಲುಪುವ ಕಾರ್ಯ ಮಾಡುತ್ತಿದೆ. ಹೀಗಾಗಿ ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿಯು ಪಟ್ಟಣದ ಬಸ್ ನಿಲ್ದಾಣದಲ್ಲಿ ಎರಡು, ತಾಪಂ ಕಚೇರಿ, ತಹಸೀಲ್ದಾರ್ ಕಚೇರಿ ಮತ್ತು ಕಾಲಕಾಲೇಶ್ವರ ವೃತ್ತದಲ್ಲಿ ತೆರೆದಿರುವ ಸೆಲ್ಫಿ ಪಾಯಿಂಟ್‌ಗಳು ಸಾರ್ವಜನಿಕರ ಆಕರ್ಷಿಸುತ್ತಿದ್ದು, ಸೆಲ್ಫಿ ಪಾಯಿಂಟ್‌ನಲ್ಲಿ ಜನತೆ ಪೋಟೊ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.

ಸೆಲ್ಪಿ ಪಾಯಿಂಟ್‌ನಲ್ಲಿ ಮಾಹಿತಿ: ಸೆಲ್ಪಿ ಪಾಯಿಂಟ್ ಪ್ರೆಮ್ ಅಲ್ಲಿ ಚುನಾವಣಾ ಪರ್ವ, ದೇಶದ ಗರ್ವ, ನಾನು ಕಡ್ಡಾಯವಾಗಿ ಮತದಾನ ಮಾಡುತ್ತೇನೆ, ಮೈ ವೋಟ್ ಕೌಂಟ್ಸ್, ಮೇ ೭ಕ್ಕೆ ನಾನು ಮತದಾನ ಮಾಡುವೆ, ಹೀಗೆ ಹತ್ತಾರು ಮಾಹಿತಿ ಒಳಗೊಂಡಿದೆ. ಮಹಿಳೆಯರನ್ನು ಹೆಚ್ಚು ಸೆಳೆಯಲು ಸಖಿ ಸೆಲ್ಪಿ ಪಾಯಿಂಟ್, ಮಹಾರಾಜ ನಂತೆ ನಾನು ವೋಟ್ ಮಾಡಿದೆ ಎನ್ನುವ ಹೆಮ್ಮೆಯ ಸೆಲ್ಪಿ ಪಾಯಿಂಟ್, ಕುಟುಂಬದ ಜತೆಗೆ ನಿಂತು ಪೋಟೋ ತೆಗೆಸಿಕೊಳ್ಳುವ ಸೆಲ್ಪಿ ಪಾಯಿಂಟ್ ಮತದಾನದ ದಿನಾಂಕ, ಮತದಾನ ಮಾಡುತ್ತೇನೆ ಎಂದು ನೆನಪಿಸುತ್ತಿವೆ.

ಸೆಲ್ಪಿಗೆ ಮುಂದಾದ ಮತದಾರರು: ಪಟ್ಟಣದ ಬಸ್ ನಿಲ್ದಾಣದಲ್ಲಿ ಎರಡು ಕಡೆ ಸೆಲ್ಪ ಪಾಯಿಂಟ್ ಮಾಡಿದ್ದು, ಕಾಲೇಜ್ ವಿದ್ಯಾರ್ಥಿಗಳು, ಯುವಕ ಯುವತಿಯರು, ಮಹಿಳೆಯರು ಸೇರಿದಂತೆ ಬಸ್ ನಿಲ್ದಾಣಕ್ಕೆ ಬರುವ ಪ್ರತಿಯೊಬ್ಬರು ಮತದಾನದ ಜಾಗೃತಿಯ ಸೆಲ್ಪಿ ಪಾಯಿಂಟ್ ಅಲ್ಲಿ ಸೆಲ್ಪಿ ತೆಗೆದುಕೊಂಡು ಹೋಗುತ್ತಿದ್ದಾರೆ.ಇದೊಂದು ವಿಭಿನ್ನವಾಗಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಮತದಾನ ಜಾಗೃತಿಗಾಗಿ ಯುವ ಮತದಾರರು, ಮಹಿಳೆಯರನ್ನು ಹೆಚ್ಚು ಗಮನ ಸೆಳೆಯಲು ಉದ್ದೇಶದಿಂದ ಜನದಟ್ಟಣೆಯ ೫ ಸ್ಥಳಗಳಲ್ಲಿ ಸೆಲ್ಪಿ ಕೇಂದ್ರ ತೆರೆಯಲಾಗಿದೆ. ಯುವ ಮತದಾರರ ಗಮನ ಸೆಳೆಯುವುದರ ಜತೆಗೆ ಮತದಾನ ಪ್ರಮಾಣ ಹೆಚ್ಚಿಸಲು ಈ ಪ್ರಯತ್ನ ಸಹಕಾರಿಯಾಗಲಿದೆ. ಸೆಲ್ಪಿ ಪಾಯಿಂಟ್ ನಲ್ಲಿ ಸೆಲ್ಪಿ ತೆಗೆದುಕೊಂಡವರು ವಾಟ್ಸಾಪ್, ಫೇಸ್‌ಬುಕ್, ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆ ಮಾಡಿಕೊಳ್ಳುವದರಿಂದ ಮತದಾನ ಜಾಗೃತಿಯಾಗಲಿದೆ ಎಂದು ತಾಪಂ ಇಒ ಬಸವರಾಜ ಬಡಿಗೇರ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊಬೈಲ್‌ ಬಿಡಿ ಪುಸ್ತಕ ಹಿಡಿ’ ಅಭಿಯಾನ
ಬಾಗಲಕೋಟೆ ಗಲಭೆಗೆ ಕೇಸರಿ ಪಡೆ ಗರಂ