ಕನ್ನಡಪ್ರಭ ವಾರ್ತೆ ಮೈಸೂರು
ವಿಪರ್ಯಾಸವೆಂದರೆ ಮೈಸೂರಿನ ಕುವೆಂಪು ನಗರ ಕೆ ಎಚ್ ಬಿ ಎರಡನೇ ಹಂತದ ಇ.ಡಬ್ಲ್ಯೂ.ಎಸ್. ಮನೆ ಸಂಖ್ಯೆ 202 ರ ಬಳಿ ನೀರು ಹರಿಯುವ ಜಾಗದಲ್ಲಿ ಒಳಚರಂಡಿಯ ಮಲ-ಮೂತ್ರಾದಿಗಳ ಹೊಳೆ ಹರಿಯುತ್ತಿದೆ. ಈ ಭಾಗದಲ್ಲಿ ವಾಸವಿರುವ ಹಿರಿಯ ನಾಗರೀಕರಿಗೆ ಶೌಚಾಲಯದೊಳಗೆ ವಾಸಿಸುತ್ತಿದ್ದೇವೆಯೋ ಎಂದು ಭಾಸವಾಗುತ್ತಿದೆ.
ಈ ಭಾಗದ ನಾಗರಿಕರು ಪ್ರತಿದಿನ ಹೊಲಸು ವಾಸನೆಯನ್ನೇ ಉಸಿರಾಡುತ್ತಿದ್ದಾರೆ. ಮೂರು ತಿಂಗಳಿನಿಂದ ಮನೆಯ ಬಳಿ ಮಲ-ಮೂತ್ರಾದಿಗಳ ಹೊಳೆ ಹರಿಯುತ್ತಿದ್ದರೂ ಪಾಲಿಕೆ ಎಚ್ಚೆತ್ತುಕೊಂಡಿಲ್ಲ.ಪಾಲಿಕೆ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಲ ಮೂತ್ರಾದಿಗಳ ದರ್ಶನ ಪಡೆದು ಮೂಗು ಮುಚ್ಚಿಕೊಂಡು ತೆಪ್ಪಗೆ ಅಲ್ಲಿಂದ ತೆರಳಿದ್ದಾರೆಯೇ ಹೊರತು ಕ್ರಮ ಕೈಗೊಳ್ಳುವ ಗೋಜಿಗೆ ಹೋಗಿಲ್ಲ.
ಆರ್ಥಿಕವಾಗಿ ಹಿಂದುಳಿದವರ ಮನೆಗಳೇ ಇರುವ ಈ ಭಾಗದಲ್ಲಿ ಇರುವ ನಾಗರಿಕರ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಪಾಲಿಕೆಗಿರಬೇಡವೇ?
------
ಈ ಕೂಡಲೇ ಪಾಲಿಕೆಯು ಎಚ್ಚೆತ್ತು ಈ ಮಲ ಮೂತ್ರಾದಿಗಳ ಹೊಳೆಗೆ ಮುಕ್ತಿ ನೀಡಿ ಈ ಭಾಗದ ನಾಗರೀಕರಿಗೆ ಹೊಲಸು ವಾಸನೆಯಿಂದ ಮುಕ್ತರಾಗುವಂತೆ ಮಾಡಲಿ. ಆರೋಗ್ಯ ಇಲಾಖೆಯು ಜನರ ಆರೋಗ್ಯ ಕಾಪಾಡುವತ್ತ ಗಮನ ಹರಿಸಲಿ.- ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು.