ಗುರುವಿನ ಅನುಗ್ರಹ ದೊರೆಯಲು ಸೇವೆ ಅಗತ್ಯ: ಶ್ರೀ ಯೋಗಾನಂದ ಸ್ವಾಮೀಜಿ

KannadaprabhaNewsNetwork |  
Published : Jan 20, 2026, 01:30 AM IST
ಯಲವಟ್ಟಿ ಗುರುಸಿದ್ದಾಶ್ರಮದಲ್ಲಿ ಮಾಸಿಕ ಸತ್ಸಂಗ ಕಾರ್ಯಕ್ರಮ | Kannada Prabha

ಸಾರಾಂಶ

ಗುರುವಿನ ಅನುಗ್ರಹ ತೋರಲು ಗುರುಸೇವೆ ಅಗತ್ಯವಿದೆ ಎಂದು ಗುರುಸಿದ್ದಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ನುಡಿದ್ದಾರೆ.

- ಯಲವಟ್ಟಿ ಗುರುಸಿದ್ದಾಶ್ರಮದಲ್ಲಿ ಅಮಾವಾಸ್ಯೆ ಸತ್ಸಂಗ ಕಾರ್ಯಕ್ರಮ

- - -

ಮಲೇಬೆನ್ನೂರು: ಗುರುವಿನ ಅನುಗ್ರಹ ತೋರಲು ಗುರುಸೇವೆ ಅಗತ್ಯವಿದೆ ಎಂದು ಗುರುಸಿದ್ದಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ನುಡಿದರು.

ಇಲ್ಲಿಗೆ ಸಮೀಪದ ಯಲವಟ್ಟಿ ಗುರುಸಿದ್ದಾಶ್ರಮದಲ್ಲಿ ಭಾನುವಾರ ರಾತ್ರಿ ಅಮಾವಾಸ್ಯೆ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಭಕ್ತರಿಗೆ ಸಂದೇಶ ನೀಡಿದರು. ಕಲಿಯುಗದಲ್ಲಿ ಗುರುಸೇವೆ ಕಷ್ಟವಾಗಿತ್ತು. ಗುರುಭಕ್ತಿ, ಸೇವಾನಿಷ್ಠೆ, ಪ್ರಾಮಾಣಿಕತೆ ತುಂಬಿ ತುಳುಕುತ್ತಿತ್ತು ಎಂದರು.

ಹಿಂದಿನ ಮಹಾತ್ಮರಾದ ಸಿದ್ದಾರೂಢರು, ಗರಗದ ಮಳಿವಾಳಪ್ಪ, ಶಿಶುನಾಳ ಷರೀಫ್, ನಾಗಲಿಂಗಜ್ಜ, ಶಿವಾನಂದ ಗುರುಗಳು ನಿತ್ಯಾನಂದರು ತಮ್ಮ ಪವಾಡದಿಂದ ಹೆಸರಾಗಿದ್ದಾರೆ. ಯಾವ ಭಕ್ತರು ಗುರುಗಳಿಗೆ ಶರಣಾಗುತ್ತಾರೋ ಅವರಿಗೆ ಗುರುರಕ್ಷಣೆ ಒದಗಿಸುತ್ತಾರೆ ಎಂದರು.

ಕಾನೂನು ಸ್ವಯಂ ಸೇವಕರಾದ ಎಚ್.ಎಂ. ಸದಾನಂದ ಮಾತನಾಡಿ, ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಸೂಚನೆ ಮೇರೆಗೆ ದಾವಣಗೆರೆ ಜಿಲ್ಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾದ ಡಿ.ಕೆ. ವೇಲಾ ಹಾಗೂ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ್ ನೇತೃತ್ವದಲ್ಲಿ ನೂರಾರು ಅರೆಕಾಲಿಕ ಕಾನೂನು ಸ್ವಯಸೇವಕರನ್ನು ನೇಮಕ ಮಾಡಿ, 3 ದಿನಗಳ ಕಾಲ ವಿವಿಧ ಕಾಯ್ದೆ ಕುರಿತು ತರಬೇತಿ ನೀಡಲಾಗಿದೆ. ಜನಸಾಮಾರ್‍ಯರಿಗೆ ದಿನನಿತ್ಯ ನಡೆಯುವ ಕಾನೂನನ್ನು ತಿಳಿಸುವ ಜವಾಬ್ದಾರಿ ನೀಡಲಾಗಿದೆ. ಸರ್ಕಾರ ಮತ್ತು ನಾಗರೀಕರ ಮಧ್ಯೆ ಸೇತುವೆಯಾಗಿ ಸ್ವಯಂಸೇವಕರು ಕಾರ್ಯ ಮಾಡುವರು ಎಂದರು.

ಶರಣರಾದ ಹೊನ್ನಪ್ಪ ಮುದೇನೂರು, ಬಿ.ಹನುಮಂತಪ್ಪ, ಕೆ.ಮಹದೇವಪ್ಪ, ಪ್ರವಚನಕಾರ ಡಿ.ಸಿದ್ದೇಶ್ ಅನುಭವ ಹಂಚಿಕೊಂಡರು. ಹಲವು ಗ್ರಾಮಗಳ ಮಾಳಗಿ ಗುಡ್ಡಪ್ಪ, ಡಿ.ರಾಜಣ್ನ, ನಾಗರಾಜಪ್ಪ, ಶೇಖರಪ್ಪ, ರೇವಣಸಿದ್ದಯ್ಯ, ಯೋಧ ಶಿವಕುಮಾರ್, ಕೃಷ್ಣಪ್ಪ, ಭೀಷ್ಮಾಚಾರ್ ಹಾಗೂ ಕುಂಬಳೂರು, ಮಲೇಬೆನ್ನೂಉರ, ಹೊಳೆಸಿರಿಗೆರೆ, ಜಿಗಳಿ ಗ್ರಾಮಗಳ ಭಕ್ತರು ಇದ್ದರು.

ಕಲಾವಿದರಾದ ವೆಂಕಟೇಶ್, ಕವನಶ್ರೀ, ಕೆ.ಕುಬೇರಪ್ಪ ಅವರು ವಚನ ಗೀತೆ, ಭಕ್ತಿಗೀತೆ ಹಾಡಿದರು. ಜಿಗಳಿ, ಲಕ್ಕಶೆಟ್ಟಿಹಳ್ಳಿ ಕಲಾವಿದರಿಂದ ಭಜನೆ ನಡೆಯಿತು.

- - -

-ಚಿತ್ರ೧: ಯಲವಟ್ಟಿ ಗುರುಸಿದ್ದಾಶ್ರಮದಲ್ಲಿ ಮಾಸಿಕ ಸತ್ಸಂಗ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕಾಮ’ಚಂದ್ರರಾವ್‌ ಐಪಿಎಸ್‌ - ಪೊಲೀಸ್‌ ಸಮವಸ್ತ್ರದಲ್ಲೇ ಕಚೇರಿಯಲ್ಲಿ ಮಹಿಳೆಯರ ಜತೆ ಸರಸ
ಪವಿತ್ರಾಗೌಡಗೆ ಮನೆ ಊಟ ಪ್ರಶ್ನಿಸಿಹೈಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ