ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಕೆಸ್ತೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಅಲಯನ್ಸ್ ಕ್ಲಬ್ ಇಂಟರ್ನ್ ನ್ಯಾಷನಲ್ ಸಂಸ್ಥೆ ವತಿಯಿಂದ ಅಂತಾರಾಷ್ಟ್ರೀಯ ದಾದಿಯರ ದಿನದ ಅಂಗವಾಗಿ ಕೆ.ಪಿ.ಶಶಿಕಲಾ, ಪಿ.ರೂಪ, ಜಿ.ದಾಕ್ಷಾಯಿನಿ, ಬಿ.ಆಶಾರಾಣಿ, ಎಸ್.ರೇಣುಕಾ, ರಾಧಾ, ಎಸ್.ಕೆ.ಮನು ಹಾಗೂ ಜಿ.ಫಾತೀಮಾ ಅವರುಗಳಿಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪುರಸ್ಕಾರ ನೀಡಿ ಬಳಿಕ ಮಾತನಾಡಿದರು.
ಕೊರೋನಾ ಸಾಂಕ್ರಾಮಿಕ ಪಿಡುಗಿನಿಂದಾಗಿ ಇಡೀ ಜಗತ್ತು ಪರಿತಪಿಸುತ್ತಿತ್ತು. ಇಂತಹ ಸಂದರ್ಭದಲ್ಲಿ ದಾದಿಯರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಯೋಧರಂತೆ ಕೆಲಸ ಮಾಡಿರುವುದು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ದಾದಿಯರು ರೋಗಿಗಳ ಪಾಲಿಗೆ ನಿಜವಾದ ದೇವರು. ಜಗತ್ತಿನಲ್ಲಿ ತಾಯಿ ನಂತರದ ಸ್ಥಾನ ದಾದಿಯರಿಗೆ ಇದೆ. ಸಾಂಕ್ರಾಮಿಕ ರೋಗಗಳು, ತುರ್ತು ಚಿಕಿತ್ಸೆ, ದೈನಂದಿನ ರೋಗಗಳ ಆರೈಕೆಯಲ್ಲಿ ತೊಡಗುವ ದಾದಿಯರು ರೋಗಿಗಳ ಪಾಲಿಗೆ ನಿಜವಾದ ದೇವರುಗಳಿದ್ದಂತೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹಿರಿಯಆರೋಗ್ಯ ನಿರೀಕ್ಷಕ ಶಂಕರೇಗೌಡ, ಒಡೆಯಾಧ್ಯಕ್ಷ ಎಸ್.ಎನ್. ಕೃಷ್ಣಪ್ಪ, ಜಿಲ್ಲಾ ಸಂಚಾಲಕ ಜಿ. ಧನಂಜಯ, ವೈದ್ಯಾಧಿಕಾರಿ ಡಾ.ನಿಸರ್ಗ, ಆಡಳಿತ ಅಧಿಕಾರಿ ಡಾ.ಆಯುಷಾ ದಬ್ಬಾನಿ, ಮದ್ದೂರು ವಕೀಲರ ಸಂಘದ ಅಧ್ಯಕ್ಷ ಎಂ. ಎನ್. ಶಿವಣ್ಣ ಮತ್ತಿತರರಿದ್ದರು.