ಮೂಡುಬಿದಿರೆ: ಪ್ರತಿಯೊಬ್ಬರಲ್ಲೂ ವಿಭಿನ್ನ ಸಾಮರ್ಥ್ಯ, ಪ್ರತಿಭೆ ಮತ್ತು ಕೌಶಲಗಳ ಸಂಯೋಜನೆಯಿದ್ದು, ಅವುಗಳನ್ನು ಗುರುತಿಸಿಕೊಂಡು ಮುಂದಿನ ಐದರಿಂದ ಹತ್ತು ವರ್ಷಗಳ ಗುರಿಯನ್ನು ಸ್ಪಷ್ಟವಾಗಿ ರೂಪಿಸಿಕೊಳ್ಳಬೇಕು ಎಂದು ಬೆಂಗಳೂರಿನ ಐವೇವ್ ಸಿಸ್ಟಮ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಸ್ಥಾಪಕ-ಅಧ್ಯಕ್ಷ ಅಬ್ದುಲ್ಲಾ ಖಾನ್ ಎಂ. ಹೇಳಿದರು.
ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೂ ಆದ್ಯತೆ ನೀಡಬೇಕು. ಆತಂಕ, ಒತ್ತಡ ಸೇರಿದಂತೆ ವಿವಿಧ ಸವಾಲುಗಳನ್ನು ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮಣಿಪಾಲದ ಕಾರ್ಮಿಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್ನ ಸಿಇಒ ರತ್ನಾಕರ್ ಭಟ್ ಗೌರವ ಅತಿಥಿಯಾಗಿದ್ದರು. ಪದವಿಯ ಬಳಿಕ ಪೋಷಕರನ್ನು ನೋಡಿಕೊಳ್ಳುವುದು ಪ್ರಮುಖ ಜವಾಬ್ದಾರಿಯಾಗಿದೆ ಎಂದ ಅವರು, ಸಂಸ್ಥೆಯೊಂದಿಗೆ ಸಂಪರ್ಕ ಕಾಯ್ದುಕೊಂಡು ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತೆ ಕರೆ ನೀಡಿದರು. ಉದ್ಯಮಶೀಲತೆಗೆ ಪರಿಶ್ರಮ, ಕಾರ್ಯಕ್ಷಮತೆ ಮತ್ತು ತಾಳ್ಮೆ ಅಗತ್ಯ ಎಂದರು.
ಮಂಗಳೂರಿನ ಯೆನೆಪೊಯ ಗ್ರೂಪ್ನ ಕಾರ್ಯಾಚರಣೆ ನಿರ್ದೇಶಕ ಯೆನೆಪೊಯ ಅಬ್ದುಲ್ಲಾ ಜಾವೀದ್ ಅಧ್ಯಕ್ಷತೆ ವಹಿಸಿದ್ದರು. ಹೊಸ ಅವಕಾಶಗಳನ್ನು ಹುಡುಕಿ, ಹೊಸ ಹಾದಿಗಳನ್ನು ಅನ್ವೇಷಿಸಿ, ಆತ್ಮವಿಶ್ವಾಸ ಮತ್ತು ಸ್ಪಷ್ಟ ಉದ್ದೇಶದೊಂದಿಗೆ ಭವಿಷ್ಯ ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಬಳಿಕ ಪದವಿ ಸ್ವೀಕಾರದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.9.78 ಸಿಜಿಪಿಎಯೊಂದಿಗೆ ಪ್ರಶಾಂತ್ ಅಗ್ರಗಣ್ಯ: ವೈ.ಐ.ಟಿ. ಪ್ರಾಂಶುಪಾಲ ಪ್ರೊ. ಡಾ. ಅಬ್ದುಲ್ ಕರೀಮ್ ಗಣ್ಯರು ಮತ್ತು ಅತಿಥಿಗಳನ್ನು ಸ್ವಾಗತಿಸಿದರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಪ್ರಶಾಂತ್ 9.78 ಸಿಜಿಪಿಎ ಗಳಿಸಿ 2022–26ರ ಬ್ಯಾಚ್ನ ಅಗ್ರಗಣ್ಯ ವಿದ್ಯಾರ್ಥಿಯಾಗಿ ಹೊರಹೊಮ್ಮಿದರು. ಅದೇ ವಿಭಾಗದ ನಿತ್ಯಾ ಅವರಿಗೆ ಅತ್ಯುತ್ತಮ ಸಮಗ್ರ ಸಾಧನೆಗಾಗಿ 2022–26ರ ಬ್ಯಾಚ್ನ ‘ಅತ್ಯುತ್ತಮ ನಿರ್ಗಮನ ವಿದ್ಯಾರ್ಥಿ’ ಪ್ರಶಸ್ತಿ ನೀಡಲಾಯಿತು.
ಯೆನೆಪೊಯ (ಡೀಮ್ಡ್ ಟು ಬಿ ಯೂನಿವರ್ಸಿಟಿ), ಮಂಗಳೂರಿನ ಸಹ-ಕುಲಾಧಿಪತಿ ಯೆನೆಪೊಯ ಮೊಹಮ್ಮದ್ ಫರ್ಹಾದ್, ಆಡಳಿತ ಮಂಡಳಿ ಸದಸ್ಯ ಡಾ. ಅಖ್ತರ್ ಹುಸೇನ್, ಶೈಕ್ಷಣಿಕ ವಿಭಾಗದ ಡೀನ್ ಪ್ರೊ. ಡಾ. ಮೆಲ್ವಿನ್ ಡಿಸೋಜಾ, ಸಂಶೋಧನಾ ವಿಭಾಗದ ಡೀನ್ ಪ್ರೊ. ಡಾ. ಸುಜರಿತಾ, ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಬಿ. ಶಾಹಿದ್, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಸಿಬ್ಬಂದಿ, ಪದವೀಧರ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.