ಭರದಿಂದ ಸಾಗಿದ ಶಾಕಾರ ಜಾಕ್ವೆಲ್‌ ದುರಸ್ತಿ ಕಾರ್ಯ

KannadaprabhaNewsNetwork |  
Published : Sep 10, 2026, 02:15 AM IST
ಹೂವಿನಹಡಗಲಿ ತಾಲೂಕಿನ ಹ್ಯಾರಡ, ದಾಸನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಶಾಕಾರ ಜಾಕ್ವೆಲ್‌ ನಲ್ಲಿ ದುರಸ್ತಿ ಕಾರ್ಯ ಭರದಿಂದ ಸಾಗಿರುವುದು. ಮಲಿಯಮ್ಮ ಕೆರೆ ಕುರಿತು ಕನ್ನಡಪ್ರಭ ವಿಶೇಷ ವರದಿ.. | Kannada Prabha

ಸಾರಾಂಶ

ಹ್ಯಾರಡ ಗ್ರಾಮದ ರೈತರು ಕೂಡಾ ಜಾಕ್ವೆಲ್‌ ಬಳಿಯೇ ಇದ್ದು ದುರಸ್ತಿ ಕಾರ್ಯ ಗಮನಿಸುತ್ತಿದ್ದು, ಯಾವಾಗ ನೀರು ಬರುತ್ತದೆ ಎಂದು ಕಾಯುತ್ತಿದ್ದಾರೆ

ಹೂವಿನಹಡಗಲಿ:ತಾಲೂಕಿನ ಹ್ಯಾರಡ ಹೊಸ ಮಲಿಯಮ್ಮ ಕೆರೆ, ಹಳೆ ಮಲಿಯಮ್ಮ ಕೆರೆ, ದಾಸನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಶಾಕಾರ ಜಾಕ್ವೆಲ್‌ನಲ್ಲಿ ದುರಸ್ತಿ ಕಾರ್ಯ ಭರದಿಂದ ಸಾಗಿದೆ.

ಕಳೆದೊಂದು ತಿಂಗಳಿನಿಂದ ಪಂಪ್‌ ಮೋಟಾರ್‌ನ ಸಾಫ್ಟ್‌ ದುರಸ್ತಿಗೆ ಬಂದಿತ್ತು. ಇದರಿಂದ ಈ ಮೂರು ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗಿರಲಿಲ್ಲ. ಈ ಕುರಿತು ಕನ್ನಡಪ್ರಭ ಪತ್ರಿಕೆಯಲ್ಲಿ ಮಲಿಯಮ್ಮ ಕೆರೆಯ ಮೂಕ ವೇದನೆ ಕೇಳೋರಿಲ್ಲ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.

ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ಹ್ಯಾರಡ, ದಾಸನಹಳ್ಳಿ, ನಡುವಿನಹಳ್ಳಿ, ಕಳಸಾಪುರ, ಹೊಳಲು, ಮೈಲಾರ, ಗೊರವಿನಗುಡ್ಡದ ತಾಂಡಾ ಸೇರಿದಂತೆ ಹತ್ತಾರು ಹಳ್ಳಿ ಗ್ರಾಮಸ್ಥರು ಸೇರಿ ಕೆರೆ ಹೋರಾಟ ಸಮಿತಿ ರಚನೆ ಮಾಡಿಕೊಂಡು ಹೋರಾಟಕ್ಕೆ ಸಿದ್ದರಾಗುತ್ತಿದಂತೆಯೇ ಅಧಿಕಾರಿಗಳು ಎಚ್ಚೆತ್ತುಕೊಂಡು ದೂರದಿಂದ ಪಂಪ್‌ ಮೋಟಾರ್‌ ಸಾಫ್ಟ್‌ ತರಿಸಿ ಮಂಗಳವಾರದಿಂದ ದುರಸ್ತಿ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

10 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಶಾಕಾರ ಜಾಕ್ವೆಲ್‌ಗೆ ಶಾಸಕ ಕೃಷ್ಣನಾಯ್ಕ ಮಂಗಳವಾರ ಭೇಟಿ ನೀಡಿದ್ದರು. ಹೆಚ್ಚು ಕಾಳಜಿ ವಹಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಶೀಘ್ರ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಹ್ಯಾರಡ, ದಾಸನಹಳ್ಳಿ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಬೇಕು, ಆ ಭಾಗದಲ್ಲಿ ದನಕರು, ಕುರಿ ಮೇಕೆ ಮತ್ತು ಕಾಡು ಪ್ರಾಣಿಗಳಿಗೆ ಸೇರಿದಂತೆ ರೈತರಿಗೆ ಬಹಳಷ್ಟು ನೀರಿನ ತೊಂದರೆ ಉಂಟಾಗಿದೆ. ಆದರಿಂದ ಅಧಿಕಾರಿಗಳು ಸ್ಥಳದಲ್ಲೇ ಇದ್ದು ದುರಸ್ತಿ ಕೆಲಸ ಮುಗಿಸಬೇಕೆಂದು ತಾಕೀತು ಮಾಡಿದ್ದರು.

ಹ್ಯಾರಡ ಗ್ರಾಮದ ರೈತರು ಕೂಡಾ ಜಾಕ್ವೆಲ್‌ ಬಳಿಯೇ ಇದ್ದು ದುರಸ್ತಿ ಕಾರ್ಯ ಗಮನಿಸುತ್ತಿದ್ದು, ಯಾವಾಗ ನೀರು ಬರುತ್ತದೆ ಎಂದು ಕಾಯುತ್ತಿದ್ದಾರೆ.

ಶಾಕಾರ ಜಾಕ್ವೆಲ್‌ನಿಂದ ಹ್ಯಾರಡ ಗ್ರಾಮದ 2 ಕೆರೆಗಳು,ದಾಸನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿದ್ದು, ಪಂಪ್‌ ಮೋಟಾರ್‌ನ ಸಾಫ್ಟ್‌ ರಿಪೇರಿ ಬಂದಿತ್ತು. ಹೊಸ ಉಪಕರಣ ತರಿಸಿ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ಶೀಘ್ರದಲ್ಲೇ ಕೆರೆಗೆ ನೀರು ಹರಿಸುತ್ತೇವೆ ಎಂದು ಹೂವಿನಹಡಗಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಇಇ ಶಿವಮೂರ್ತಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಡಾ: ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮರು ಮಾರಾಟ!
ದೇಶಕ್ಕೆ ಆರೋಗ್ಯವಂತ ಸಮಾಜ ಅತ್ಯಗತ್ಯ