ಭೈರನಹಟ್ಟಿ ಗ್ರಾಪಂ ಅಧ್ಯಕ್ಷರಾಗಿ ಶರಣಬಸಪ್ಪ ನರಸಾಪುರ ಅವಿರೋಧ ಆಯ್ಕೆ

KannadaprabhaNewsNetwork |  
Published : Mar 26, 2025, 01:32 AM IST
(25ಎನ್.ಆರ್.ಡಿ1 ನೂತನ ಅಧ್ಯಕ್ಷ ಶರಣಬಸಪ್ಪ ನರಸಾಪೂರವರನ್ನು ಗ್ರಾಮಸ್ಥರು ಸನ್ಮಾನ ಮಾಡಿ ಗೌರವಿಸಿದರು.) | Kannada Prabha

ಸಾರಾಂಶ

ತಾಲೂಕಿನ ಭೈರನಹಟ್ಟಿ-ಮುದ್ಗಣಿಕಿ ಗ್ರಾಪಂ ಅಧ್ಯಕ್ಷರಾಗಿ ಶರಣಬಸಪ್ಪ ನರಸಾಪುರ ಅವರು ಆಯ್ಕೆಯಾದರು.ಚುನಾವಣೆಗೆ ಮಂಗಳವಾರ ಒಬ್ಬರೆ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ್ದರಿಂದ ಚುನಾವಣಾಧಿಕಾರಿ ಎಸ್.ಕೆ. ಇನಾಮದಾರವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.

ನರಗುಂದ: ತಾಲೂಕಿನ ಭೈರನಹಟ್ಟಿ-ಮುದ್ಗಣಿಕಿ ಗ್ರಾಪಂ ಅಧ್ಯಕ್ಷರಾಗಿ ಶರಣಬಸಪ್ಪ ನರಸಾಪುರ ಅವರು ಆಯ್ಕೆಯಾದರು.

ಚುನಾವಣೆಗೆ ಮಂಗಳವಾರ ಒಬ್ಬರೆ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ್ದರಿಂದ ಚುನಾವಣಾಧಿಕಾರಿ ಎಸ್.ಕೆ. ಇನಾಮದಾರವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಆನಂತರ ನೂತನ ಅಧ್ಯಕ್ಷ ಶರಣಬಸಪ್ಪ ಮಾತನಾಡಿ, ಭೈರನಹಟ್ಟಿ ಹಾಗೂ ಮುದ್ಗಣಿಕಿ ಗ್ರಾಮದ ಸದಸ್ಯರು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ಸರ್ಕಾರದಿಂದ ಬರುವ ಅನುದಾನವನ್ನು ಬಳಕೆ ಮಾಡಿಕೊಳ್ಳಲು ಎರಡು ಗ್ರಾಮದ ಸದಸ್ಯರು ಮತ್ತು ಗುರು ಹಿರಿಯರ ಜೊತೆ ಚರ್ಚೆಸಿ ಅನುದಾನ ಬಳಕೆ ಮಾಡಿಕೊಂಡು ಈ ಗ್ರಾಮಗಳನ್ನು ಅಭಿವೃದ್ಧಿ ಮಾಡಲು ಪ್ರಯತ್ನ ಮಾಡುತ್ತೇನೆಂದು ಹೇಳಿದರು.

ಈ ಸಂದರ್ಭದಲ್ಲಿ ಯಲ್ಲಪ್ಪ ದೊಡ್ಡಮನಿ, ವಿರೂಪಾಕ್ಷಪ್ಪ ನರಸಾಪೂರ, ಚಂದ್ರಶೇಖರ ದಂಡಿನ, ಹನಮಂತ ಸಂಗಟಿ, ನಾಗಪ್ಪ ಬೆನ್ನೂರ, ಬಸವರಾಜ ಐನಾಪೂರ, ನಿಂಗಪ್ಪ ತೆಗ್ಗಿನಮನಿ, ಎಲ್.ಎಂ. ಪಾಟೀಲ, ಚಂದ್ರು ಮೊರಬದ, ನಿಂಗಪ್ಪ ಅಪೋಜ, ಉಮೇಶ ಮೋರಬದ, ಈರಪ್ಪ ಐನಾಪೂರ, ನಾಗಪ್ಪ ಕಟ್ಟಿಮನಿ, ಜ್ಞಾನದೇವ ಮುನೇನಕೊಪ್ಪ, ಪುಷ್ಪಾ ಪಾಟೇಲ, ಸುಮಿತ್ರಾ ಐನಾಪೂರ, ಚನ್ನಪ್ಪ ಬೆಳವಣಿಕಿ, ಸೈನಾಜಬಿ ಬಾಗಲದ, ಗ್ರಾಪಂ ಎಸ್.ಎಂ.ಹರನಹಟ್ಟಿ, ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ