ಕನ್ನಡಪ್ರಭ ವಾರ್ತೆ ನಾಗಮಂಗಲ
ಇತಿಹಾಸ ಪ್ರಸಿದ್ಧ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಅ.2ರಿಂದ 9 ದಿನಗಳ ಕಾಲ ಶರನ್ನವರಾತ್ರಿ ಉತ್ಸವಗಳು ಬಹಳ ವಿಜೃಂಭಣೆಯಿಂದ ನಡೆಯಲಿವೆ.ಅ.2ರಂದು ಅಮಾವಾಸ್ಯೆ ಪೂಜೆಯೊಡನೆ ಪ್ರಾರಂಭವಾಗುವ ಶರನ್ನವರಾತ್ರಿ ಉತ್ಸವಗಳು ಅ.12ರ ಶನಿವಾರದವರೆಗೆ ಜರಗಲಿವೆ. ಉತ್ಸವದ ಅಂಗವಾಗಿ ಶ್ರೀಮಠದಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ಸೇರಿದಂತೆ ಹಲವು ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ.
ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯುವ ಶರನ್ನವರಾತ್ರಿ ಉತ್ಸವಗಳು ಪ್ರಾರಂಭಕ್ಕೂ ಮೊದಲು ಪ್ರತಿದಿನ ಸಂಜೆ 5.30ಕ್ಕೆ ಶ್ರೀಗಳು ಸರ್ವಾಲಂಕಾರ ಭೂಷಿತರಾಗಿ, ಚಿನ್ನದ ಕಿರೀಟ, ಚಿನ್ನಲೇಪಿತ ವಸ್ತ್ರಾಭರಣಗಳನ್ನು ಧರಿಸಿ ಶ್ರೀಮಠದ ವಟುಗಳ ವೇದಘೋಷಗಳೊಂದಿಗೆ, ಭಕ್ತರ ನಡುವೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಆಗಮಿಸಿ ಶ್ರೀತ್ರದ ಅಧಿದೇವತೆಗಳಿಗೆ ಪೂಜೆ ಸಲ್ಲಿಸುವರು.ನಂತರ ಶ್ರೀಗಳು ಶ್ರೀಮಠದ ಸಂಪ್ರದಾಯದಂತೆ ಸಿದ್ಧಸಿಂಹಾಸನರೂಢರಾಗಿ ಭಕ್ತರಿಗೆ ದರ್ಶನ ನೀಡುವರು. ಸಿಂಹಾಸನ ಪೂಜೆ, ಶ್ರೀಗಳಿಗೆ ಷೋಡೋಶೋಪಾಚಾರ ಪೂಜೆ ಸಲ್ಲಿಸಲಾಗುವುದು. ನಂತರ ಭಕ್ತರಿಗೆ ವಿಭೂತಿ ತಿಲಕವನ್ನಿಡುವ ಮೂಲಕ ಆಶೀರ್ವದಿಸುವರು.
ಶ್ರೀಮಠದ ಭಕ್ತರು, ಆಸ್ತಿಕರು ಉತ್ಸವದಲ್ಲಿ ಭಾಗಿಯಾಗಿ ತೀರ್ಥ ಪ್ರಸಾದ ಸ್ವೀಕರಿಸಿ ಶ್ರೀಗಳ ಕೃಪೆಗೆ ಪಾತ್ರರಾಗುವರು. ಈ ಕಾರ್ಯಕ್ರಮ ಶರನ್ನವರಾತ್ರಿ ಉತ್ಸವದ ಎಲ್ಲಾ ದಿಗಳಲ್ಲೂ ಜರುಗಲಿದೆ. ಮೊದಲ ದಿನ ಮಂಗಳೂರು ಶಾಖಾಮಠದ ವತಿಯಿಂದ ಶ್ರೀಕ್ಷೇತ್ರದಲ್ಲಿ ವಿಶೇಷ ಪೂಜೆ ಜರುಗಲಿದೆ.ಪ್ರತಿ ದಿನ ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮಗಳು:
ಅ.3 ರಂದು ಸಂಜೆ ನವರಾತ್ರಿ ಪ್ರಾರಂಭ, ಸಿಂಹಾಸನ ಪೂಜೆ, ಷೋಡೋಶೋಪಾಚಾರ ಪೂಜೆ ನೆರವೇರಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬೆಂಗಳೂರು ಶಾಖಾ ಮಠ ಮತ್ತು ಬಿಜಿ.ನಗರದ ಶಿಕ್ಷಣ ಸಂಸ್ಥೆಗಳಿಂದ ಶರನ್ನವರಾತ್ರಿ ಉತ್ಸವಗಳು ನಡೆಯಲಿವೆ. ತಾಲೂಕಿನ ಮಾವಿನಕೆರೆ, ನಾಗಲಾಪುರ, ಮುತ್ತುಗದಹಳ್ಳಿ, ಕರಡಗೆರೆ, ಬ್ಯಾಡರಹಳ್ಳಿ, ಕಲ್ಲುನಾಗತಿಹಳ್ಳಿ, ಚಿಕ್ಕಶೆಟ್ಟಿಕೆರೆ, ದೊಡ್ಡಶೆಟ್ಟಿಕೆರೆ, ಢಣಾಯಕನಪುರ, ಡಿ.ಬಿ.ಹಟ್ಟಿ ಗ್ರಾಮದ ಗ್ರಾಮಸ್ಥರು ಉತ್ಸವದಲ್ಲಿ ಭಾಗವಹಿಸುವರು.ಅ.4ರಂದು ಮೈಸೂರು ಶಾಖಾ ಮಠದ ವತಿಯಿಂದ ಕಾರ್ಯಕ್ರಮ ಪ್ರಾರಂಭವಾಗಲಿವೆ. ಚನ್ನಯ್ಯನಕೊಪ್ಪಲು, ಲಕ್ಷ್ಮೀಪುರ, ವಡ್ಡರಹಳ್ಳಿ, ತಾವರೆಕೆರೆ, ಕೋಟೆರಾಮನಕೊಪ್ಪಲು, ಕರಿಜೀರಹಳ್ಳಿ,ನೆಲ್ಲಿಗೆರೆ, ತೊರೆಮಾವಿನಕೆ, ಸೀಗೇಹಳ್ಳಿ ಹೊಸಮನೆ ಗ್ರಾಮಗಳ ಗ್ರಾಮಸ್ಥರು ಉತ್ಸವ ನೆರವೇರಿಸಿಕೊಡುವರು.
ಅ 5ರ ಸಂಜೆ 5.30ಕ್ಕೆ ಮಂಡ್ಯ ಶಾಖಾಮಠದ ವತಿಯಿಂದ ಪೂಜಾ ಕಾರ್ಯಕ್ರಗಳು ಜರುಗಲಿವೆ. ಗೋವಿಂದಘಟ್ಟ, ಮೂಡಲ ಮೆಳ್ಳಹಳ್ಳಿ, ಕನ್ನೇನಹಳ್ಳಿ, ದೊಡ್ಡೇಗೌಡನಕೊಪ್ಪಲು, ಕೆಲಗೆರೆ, ದೇವೇಗೌಡನಕೊಪ್ಪಲು, ಗೌಡರಹಳ್ಳಿ, ಹರೇಹಳ್ಳಿ, ನರಗನಹಳ್ಳಿ, ಚೋಳೇನಹಳ್ಳಿ ಗ್ರಾಮಸ್ಥರು ಭಾಗವಹಿಸಲಿದ್ದಾರೆ.ಅ.6 ರಂದು ಹಾಸನ ಶಾಖಾಮಠದ ವತಿಯಿಂದ ಪೂಜಾ ಕೈಂಕರ್ಯಗಳು ನೆರವೇರಲಿವೆ. ಆರಣಿ, ಚಂದನಹಳ್ಳಿ, ಬಣ್ಣದಹಳ್ಳಿ, ಚಬ್ಬನಹಳ್ಳಿ, ಮಂಜೇನಹಳ್ಳಿ, ಎಂ.ಕೋಡಿಹಳ್ಳಿ, ಹೊನ್ನೇನಹಳ್ಳಿ, ಗುರುವಿನಮಠ,ಮಲ್ಲೇನಹಳ್ಳಿ, ಕೆ.ಹೊಸಹಳ್ಳಿ ಗ್ರಾಮಸ್ಥರು ಭಾಗವಹಿಸಲಿದ್ದಾರೆ.
ಅ.7 ರಂದು ಕುಂಬಳಗೂಡು ಮತ್ತು ರಾಮನಗರ ಶಾಖಾಮಠಗಳಿಂದ ನಡೆಯುವ ಉತ್ಸವದಲ್ಲಿ ಬೆಳ್ಳೂರು, ಚಾಮಲಾಪುರ, ಮಾರದೇವನಹಳ್ಳಿ, ಡಿ.ಕೋಡಹಳ್ಳಿ, ಹಳ್ಳದಹೊಸಹಳ್ಳಿ, ದೊಡ್ಡೇನಹಳ್ಳಿ, ಗೋರಿಕೊಪ್ಪಲು, ಕಾಮಡೀಹಳ್ಳಿ, ಕುಂಬಾರಕೊಪ್ಪಲು, ಗೊಂಡೇನಹಳ್ಳಿ ಗ್ರಾಮಸ್ಥರು ಉಪಸ್ಥಿತರಿರುವರು.ಅ.8 ರಂದು ಹೇಮಗಿರಿ ಶಾಖಾಮಠದ ವತಿಯಿಂದ ಉತ್ಸವದಲ್ಲಿ ಕಾರಬೈಲು, ಕಂಚಿನಕೋಟೆ, ಹಾಲಾಳು, ತಿರುಮಲಾಪುರ, ಬೀಚನಹಳ್ಳಿ, ಟ್ನ, ವಡೇರಹಳ್ಳಿ, ಗೊಂದಿಹಳ್ಳಿ, ಅಜ್ಜನಪಾಳ್ಯ ಮತ್ತು ಗರುಡನಹಳ್ಳಿ ಗ್ರಾಮಸ್ಥರು ಭಾಗಹಿಸಲಿದ್ದಾರೆ.
ಸರಸ್ವತಿ ಪೂಜೆ ಮತ್ತು ಅಕ್ಷರಾಭ್ಯಾಸ ಕಾರ್ಯಕ್ರಮ:ಅ.9 ರಂದು ಬೆಳಗ್ಗೆ 9.30 ಗಂಟೆಗೆ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ನೆರವೇರಲಿದೆ. ಶ್ರೀಗಳ ಸಾನಿಧ್ಯದಲ್ಲಿ ಸರಸ್ವತಿ ಪೂಜೆ ಮತ್ತು ಅಕ್ಷರಭ್ಯಾಸದಲ್ಲಿ ನಾಡಿನಾದ್ಯಂತ ನೂರಾರು ಮಕ್ಕಳು ಭಾಗವಹಿಸುವರು. ಸಂಜೆ ಶಿವಮೊಗ್ಗ ಶಾಖಾಮಠದ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಅಂಚೇಚಿಟ್ಟನಹಳ್ಳಿ, ಭೈರನಹಳ್ಳಿ, ಬೇಗಮಂಗಲ, ಅಂಚೆಭೂವನಹಳ್ಳಿ, ವಡೇರಹಳ್ಳಿ, ಕಬ್ಬಿನಕೆರೆ, ಯಲಾದಹಳ್ಳಿ, ಚಿಕ್ಕಜಟಕ, ವಳಗೆರೆಪುರ, ಚೋಳಸಂದ್ರ ಗ್ರಾಮಸ್ಥರು ಭಾಗವಹಿಸುವರು.
ಅ.10 ರಂದು ಗುರುವಾರ ಸಂಜೆ ತುಮಕೂರು ಶಾಖಾಮಠದಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ, ಚಾಕೇನಹಳ್ಳಿ, ಅಣಕನಹಳ್ಳಿ, ತಿಗಳನಹಳ್ಳಿ, ಶ್ರೀರಂಗಪುರ, ಅಡಕತಹಳ್ಳಿ, ಹುಳ್ಳೇನಹಳ್ಳಿ, ಮೈಲನಹಳ್ಳಿ, ಮಣಿಯೂರು, ವರಹಾಸಂದ್ರ, ದೇವಿಹಳ್ಳಿ ಗ್ರಾಮಗಳ ಗ್ರಾಮಸ್ಥರು ಭಾಗವಹಿಸುವರು.ಜ್ವಾಲಾಪೀಠಾರೋಹಣ, ದುರ್ಗಾಷ್ಟಮಿ ಪೂಜೆ ಮತ್ತು ಮಹಾನವಮಿ:
ಅ.11ರಂದು ಬೆಳಗ್ಗೆ ದುರ್ಗಾಷ್ಟಮಿ ಪೂಜೆ, ಮಹಾನವಮಿ ನೆರವೇರಲಿದೆ. ಬೆಳಗ್ಗೆ 8.30ಕ್ಕೆ ಆಯುಧಪೂಜೆ, ಸಂಜೆ 6.30ಕ್ಕೆ ಶ್ರೀಗಳಿಂದ ಜ್ವಾಲಾಪೀಠಾರೋಹಣ, ಚಿಕ್ಕಬಳ್ಳಾಪುರ ಶಾಖಾಮಠದ ವತಿಯಿಂದ ಕಾರ್ಯಕ್ರಗಳು ನಡೆಯಲಿವೆ. ಚುಂಚನಹಳ್ಳಿ, ಚುಂಚನಹಳ್ಳಿ ಪಾಳ್ಯ, ಗಂಗಾಧರನಗರ, ಅಂಬಲಜೀರಹಳ್ಳಿ, ಭಕ್ತನಾಥಪುರ, ಇಂದಿರಾನಗರ, ಯಲಚಿಕೆರೆ, ಮುದಿಗೆರೆ ಗ್ರಾಮಸ್ಥರು ಭಾಗವಹಿಸಲಿದ್ದಾರೆ.ಅ.12ರಂದು ವಿಜಯದಶಮಿ ಮತ್ತು ಶಮಿ ಪೂಜೆ ನೆರವೇರಲಿದೆ. ಚಿಕ್ಕಮಗಳೂರು ಶಾಖಾಮಠದ ವತಿಯಿಂದ ಜರುಗಲಿರುವ ಕಾರ್ಯಕ್ರಮದಲ್ಲಿ ಜವರನಹಳ್ಳಿ, ಅಗಚಹಳ್ಳಿ, ಕನ್ನಾಘಟ್ಟ, ಮಾರುತಿಪುರ, ಕಂಚನಹಳ್ಳಿ, ಎಲೆಕೊಪ್ಪ, ಬಾಡನಹಳ್ಳಿ, ಗಾಣಸಂದ್ರ ಜಿ.ನಾಗತೀಹಳ್ಳಿ, ಬ್ಯಾಲದಕೆರೆ, ಕುಂಬಾರಪಾಳ್ಯ, ರಮಾನಂದನಗರ ಗ್ರಾಮಸ್ಥರು ಭಾಗವಹಿಸುವರು.