ಕನ್ನಡಪ್ರಭ ವಾರ್ತೆ ಹುಲಸೂರ
ಅವರು ಪಟ್ಟಣದ ಅಲ್ಲಮಪ್ರಭು ಶೂನ್ಯ ಪೀಠದ ಆವರಣದಲ್ಲಿ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ 981 ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಶರಣರ ಜಯಂತಿ ಆಚರಣೆಯಲ್ಲಿ ಧ್ವನಿವರ್ಧಕ ಬಳಸಿ ಬೀದಿಗಳಲ್ಲಿ ಕುಣಿದು ಕುಪ್ಪಳಿಸುವುದು, ವೇದಿಕೆ ಮೇಲೆ ಶಾಲು ಹೊದಿಸಿ ಸನ್ಮಾನಿಸುವ ಸಂಪ್ರದಾಯ ಬಸವಣ್ಣರ ಸಂಸ್ಕೃತಿ ಅಲ್ಲ.
ಬಸವಣ್ಣನವರು ಸಾಂಸ್ಕೃತಿಕ ನಾಯಕ ಅಂದ ಮೇಲೆ ನಾಡಿನ ಜನತೆಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಮುಂದಿನ ದಿನಗಳಲ್ಲಿ ನಾವು ಜಯಂತಿ ಆಚರಣೆ ರೂಡಿಸಿಕೊಳ್ಳಬೇಕು ಎಂದ ಅವರು, ಚಿಕ್ಕಮಕ್ಕಳಿಗೆ ವಚನ ಸಾಹಿತ್ಯ ಓದುವ ಹವ್ಯಾಸ ಬೇಳಸಿ ಅವರಿಗೆ ವಚನಗಳ ಭಾವಾರ್ಥ ತಿಳಿಸಿ ಅದರಂತೆ ಬದುಕು ಸಾಗಿಸುವ ಸಂದೇಶ ತಿಳಿಸಬೇಕು ಎಂದು ಹೇಳಿದರು.ಜಾಗತಿಕ ಲಿಂಗಾಯತ ಮಹಾ ಸಭೆ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಬಸವಣ್ಣ ಗುಡಿ ಗುಂಡಾರ ಕಟ್ಟಲಿಲ್ಲ ಸಮಾನ ಮನಸ್ಕರ ಮನಸ್ಸು ಕಟ್ಟುವ ಕೆಲಸ ಮಾಡುವ ಮೂಲಕ 770 ಶರಣರನ್ನು ಒಂದೆಡೆ ಸೇರಿಸಿ ಅನುಭವ ಮಂಟಪ ಕಟ್ಟಿ ಉತ್ತಮ ಸಮಾಜ ನಿರ್ಮಾಣ ಮಾಡುವ ಮೂಲಕ ಶೈಕ್ಷಣಿಕ, ಕಾಯಕ, ದಾಸೋಹ ತತ್ವ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದರು ಎಂದರು.
ಬೆಳಗ್ಗೆ 10ಗಂಟೆಗೆ ಅಲ್ಲಮ ಪ್ರಭು ಶೂನ್ಯ ಪೀಠದಿಂದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಸವೇಶ್ವರ ವೃತ್ತದವರೆಗೆ ಬೈಕ್ ರ್ಯಾಲಿ ಹಾಗೂ ಸಾಯಂಕಾಲ ಬಸವಣ್ಣನವರ ಭಾವ ಚಿತ್ರದ ಮೆರವಣಿಗೆ ನಡೆಯಿತು .
ರಾಜಕುಮಾರ ತೊಂಡಾರೆ ಸ್ವಾಗತಿಸಿ, ದೀಪಕ್ ಠಮಕೆ ನಿರೂಪಿಸಿ, ರಾಜಕುಮಾರ ಹೋನ್ನಾಡೆ ವಂದಿಸಿದರು.