ಸಿಹಿ ಗೆಣಸು ಬೆಳೆದು ಸೈ ಎನಿಸಿಕೊಂಡ ಶಿವಾನಂದ

KannadaprabhaNewsNetwork |  
Published : Jan 04, 2024, 01:45 AM IST
ಪೊಟೋ-ರೈತ ಶಿವಾನಂದ ಗೊಜನೂರ ಅವರು ತಮ್ಮ 1.2 ಎಕರೆ ಹೊಲದಲ್ಲಿ ಬೆಳೆದ ಸಿಹಿ ಗೆಣೆಸು ಬೆಳೆಯನ್ನು ತೋರಿಸುತ್ತಿರುವುದು. ಪೊಟೋ- ಶಿವಾನಂದ ಅವರ ಹೊಲದಲ್ಲಿ ಬೆಳೆದಿರುವ ಸಿಹಿ ಗೆಣೆಸಿನ ಚಿತ್ರ   | Kannada Prabha

ಸಾರಾಂಶ

ಗೆಣಸು ಸುಮಾರು 4 ರಿಂದ 5 ತಿಂಗಳ ಅವಧಿಯಲ್ಲಿ ಬೆಳೆಯುತ್ತದೆ. ವರ್ಷದಲ್ಲಿ ಒಂದು ಬಾರಿ ಮಾತ್ರ ಇದನ್ನು ಬೆಳೆಯಬಹುದಾಗಿದೆ.ಗೆಣಸಿನ ಬಳ್ಳಿಯ ಕಾಂಡ ಮತ್ತು ಬೇರುಗಳನ್ನು ನಾಟಿ ಮಾಡುತ್ತಾರೆ.

ಅಶೋಕ ಸೊರಟೂರ ಲಕ್ಷ್ಮೇಶ್ವರ

ಕೃಷಿ ಎಂದರೆ ಬರಿ ನಷ್ಟ ಎಂದು ಕೊಂಡವರಿಗೆ ಕೇವಲ 1 ಎಕರೆಯಲ್ಲಿ ಸಿಹಿ ಗೆಣಸು ಬೆಳೆದು ಲಕ್ಷಾಂತರ ಆದಾಯ ಗಳಿಸಿ ಸೈ ಎನಿಸಿಕೊಂಡಿರುವ ರೈತ ಶಿವಾನಂದ ಗೊಜನೂರ ನಮ್ಮ ಕಣ್ಮುಂದೆ ಎದ್ದು ಕಾಣುತ್ತಾರೆ.

ಪಟ್ಟಣದ ರೈತ ಶಿವಾನಂದ ಗೊಜನೂರ ತಮ್ಮ 1.2 ಎಕರೆ ಜಮೀನಿನಲ್ಲಿ ಕಳೆದ 2-3 ವರ್ಷಗಳಿಂದ ಸಿಹಿ ಗೆಣಸು ಬೆಳೆದು ಹೆಚ್ಚಿನ ಆದಾಯ ಗಳಿಸುವ ಮೂಲಕ ಯುವ ರೈತರಿಗೆ ಮಾರ್ಗದರ್ಶಿಯಾಗಿದ್ದಾರೆ.

ಪಟ್ಟಣದಿಂದ ಹರದಗಟ್ಟಿ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಬರುವ 1.2 ಎಕರೆ ಹೊಲದಲ್ಲಿ ಸಿಹಿ ಗೆಣಸು ಬೆಳೆಯುತ್ತಿದ್ದಾರೆ. ಈಗ ಸುಮಾರು 1 ಎಕರೆ ಗೆಣಸು ಕಿತ್ತು ಮಾರಾಟ ಮಾಡಿ ಸುಮಾರು ₹1.50 ಲಕ್ಷ ಲಾಭ ಮಾಡಿಕೊಂಡಿದ್ದಾರೆ.ಇವರ ಹೊಲದಲ್ಲಿ ಬೆಳೆದಿರುವ ಗೆಣಸಿನಲ್ಲಿ ನಾರಿನ ಅಂಶ ಕಡಿಮೆ ಪ್ರಮಾಣದಲ್ಲಿ ಇರುವುದು ಹಾಗೂ ಹೆಚ್ಚು ಪಿಷ್ಟ ಮತ್ತು ಸಕ್ಕರೆ ಅಂಶ ಹೊಂದಿರುವುದು ವಿಶೇಷವಾಗಿದೆ. ಹೀಗಾಗಿ ಕೆಜಿಯೊಂದಕ್ಕೆ ₹15-16 ಗಳಂತೆ ಮಾರಾಟ ಮಾಡಲಾಗಿದೆ ಎಂದು ರೈತರು ಹೇಳಿದರು.

ಸಿಹಿ ಗೆಣಸು ಬೆಳೆಯಲು ಮರಳು ಮಿಶ್ರಿತ ಕೆಂಪು ಜಮೀನು ಸೂಕ್ತವಾಗಿರುತ್ತದೆ. ಇವರ ಹೊಲದಲ್ಲಿ 3.5 ಕೆಜಿ ತೂಕದ ಬೃಹದಾಕಾರದ ಗೆಣಸು ಬೆಳೆಯುವ ಮೂಲಕ ರೈತರ ಆದಾಯಕ್ಕೆ ಇಂಬು ನೀಡಿದೆ.

ಗೆಣಸು ಸುಮಾರು 4 ರಿಂದ 5 ತಿಂಗಳ ಅವಧಿಯಲ್ಲಿ ಬೆಳೆಯುತ್ತದೆ. ವರ್ಷದಲ್ಲಿ ಒಂದು ಬಾರಿ ಮಾತ್ರ ಇದನ್ನು ಬೆಳೆಯಬಹುದಾಗಿದೆ.ಗೆಣಸಿನ ಬಳ್ಳಿಯ ಕಾಂಡ ಮತ್ತು ಬೇರುಗಳನ್ನು ನಾಟಿ ಮಾಡುತ್ತಾರೆ. ಬಳ್ಳಿಯನ್ನು ಜೋಪಾನವಾಗಿ ಕಾಯ್ದುಕೊಂಡು ಮುಂದಿನ ವರ್ಷಕ್ಕೆ ನಾಟಿ ಮಾಡಲು ಉಪಯೋಗಿಸಿಕೊಳ್ಳುವ ಕಾರ್ಯ ಮಾಡಲಾಗುತ್ತಿದ್ದು. ಈ ವರ್ಷ ಗೆಣಸಿನ ಬಳ್ಳಿಯ ನಾಟಿ ಮಾಡಲು ಹಾಗೂ ಔಷಧಿ ಸಿಂಪರಣೆಗಾಗಿ ಸುಮಾರು ₹25 ಸಾವಿರ ಖರ್ಚು ಮಾಡಿದ್ದೇವೆ. ಎಕರೆಗೆ ಸುಮಾರು 100 ಕ್ವಿಂಟಲ್‌ಗಿಂತ ಅಧಿಕ ಗೆಣಸು ಬೆಳೆಯುತ್ತೇವೆ ಎನ್ನುತ್ತಾರೆ ಶಿವಾನಂದ ಗೊಜನೂರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೀ ಹೆಬ್ಬಾಳಕರ್‌ ಬ್ಯಾಟಿಂಗ್‌ಗೆ ಶಾಸಕ ಆಸೀಫ್ ಸೇಠ್ ಬೋಲ್ಡ್‌
ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ