ತಿಪಟೂರು: ತಿಪಟೂರಿನ ಮಾಜಿ ಶಾಸಕರಾಗಿದ್ದ ಲಿಂಗೈಕ್ಯ ವಿ.ಎಲ್. ಶಿವಪ್ಪ ಅವರು ಸಮಾಜ ಹಾಗೂ ಸಹಕಾರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದರು ಎಂದು ನಗರದ ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಉಪನ್ಯಾಸ ನೀಡಿದ ಸಂಯೋಜನಾಧಿಕಾರಿ ಡಾ.ಎಲ್.ಎಂ. ವೆಂಕಟೇಶ್, ‘ಸಮಕಾಲೀನ ಜಗತ್ತಿಗೆ ವಚನಗಳ ಪ್ರಸ್ತುತತೆ’ ವಿಷಯವಾಗಿ ಮಾತನಾಡಿ, ವಚನ ಸಾಹಿತ್ಯ ಈ ನಾಡಿನ ಬಹುದೊಡ್ಡ ಸಾಂಸ್ಕೃತಿಕ ಆಸ್ತಿಯಾಗಿದ್ದು ಜನ ಸಾಮಾನ್ಯರ ಧ್ವನಿಯಾಗಿದೆ. ಶ್ರಮ ಸಂಸ್ಕೃತಿಗೆ ಹೆಚ್ಚಿನ ಗೌರವ ತಂದು ಮಾನವೀಯ ಮೌಲ್ಯಗಳೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕು ಹಸನುಗೊಳ್ಳುವಂತೆ ಅಂತರಂಗ, ಬಹಿರಂಗ ಶುದ್ಧಿಯೊಂದಿಗೆ ವಿಶ್ವಶಾಂತಿಗೆ ಕೊಡುಗೆ ನೀಡುವಲ್ಲಿ ವಚನಗಳು ಇಂದಿಗೂ ಹೆಚ್ಚಿನ ಪ್ರಾಮುಖ್ಯತೆ ಹೊಂದಿದ್ದು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಿವೆ ಎಂದರು.
ಕಾರ್ಯಕ್ರಮದಲ್ಲಿ ಸೇವಾಕರ್ತರಾದ ರತಿದೇವಿ, ನಿವೃತ್ತ ಪ್ರಾಚಾರ್ಯ ಬೆಟ್ಟಯ್ಯ ನಾಗರಾಜು, ಡಿ.ಎಸ್. ಶಿವಗಂಗಾ, ಪ.ಪೂ. ಶಿಕ್ಷಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿ.ಎಸ್. ವಿಜಯ್ಕುಮಾರ್, ಸರ್ಕಾರದ ನಿವೃತ್ತ ಜಂಟಿ ಕಾರ್ಯದರ್ಶಿ ಕೊಟ್ಟಿಗೆಹಳ್ಳಿ ಬಸವರಾಜು, ನಿವೃತ್ತ ಪೋಲಿಸ್ ಅಧಿಕಾರಿ ಮಹಾದೇವಯ್ಯ, ವರ್ತಕರಾದ ಬಸವರಾಜು, ವೇ. ಎಚ್.ಎಸ್. ಸಿದ್ದರಾಮಯ್ಯ ಮತ್ತಿತರರಿದ್ದರು. ಪಿಆರ್ಒ ಜೆ.ಇ. ಭರತ್ ಸ್ವಾಗತಿಸಿ, ನಿವೃತ್ತ ಪ್ರಾಂಶುಪಾಲ ವಿ.ಬಿ. ಮಹಾಲಿಂಗಯ್ಯ ನಿರೂಪಿಸಿ, ಸಂಸ್ಕೃತ ಶಿಕ್ಷಕ ವೇ. ಚಂದನ್ಶಾಸ್ತ್ರಿ ವಂದಿಸಿದರು.