ಕನ್ನಡಪ್ರಭ ವಾರ್ತೆ ಹರಿಹರ
ನಗರಕ್ಕೆ ಸಮೀಪದ ತುಂಗಭದ್ರಾ ನದಿ ದಡದ ಬಳಿಯ ಶ್ರೀ ಮೂಲ ದುರ್ಗಾ ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮೇ ೨೦ರಂದು ಸಂಜೆ ೪ ಗಂಟೆಯಿಂದ ಕೋಡಿಯಾಲ ಹೊಸಪೇಟೆ ಗ್ರಾಮದ ಶ್ರೀ ದುಂಡಿ ಬಸವೇಶ್ವರ ದೇವಸ್ಥಾನದಿಂದ ಶ್ರೀ ದುರ್ಗಾದೇವಿಯ ನೂತನ ಉತ್ಸವ ಮೂರ್ತಿಯನ್ನು ಆನೆ ಅಂಬಾರಿ ಮೇಲೆ ಡೋಲು, ಬಾಜಾಭಜಂತ್ರಿ, ಕುಂಭಮೇಳದ ವಿಶೇಷ ಮೆರವಣಿಗೆ ಮೂಲಕ ಮೂಲ ದುರ್ಗಾದೇವಿ ಸನ್ನಿಧಿಗೆ ಕರೆತರಲಾಗುವುದು ಎಂದರು.
ಅನಂತರ ಉಡುಪಿಯ ಜ್ಯೋತಿಷ್ಯರಾದ ಕೆ.ಎಸ್. ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಉತ್ಸವ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ, ಹೋಮ ಇತ್ಯಾದಿ ಪೂಜಾ ಕೈಕರ್ಯಗಳನ್ನು ನೆರವೇರಿಸಲಾಗುವುದು. ಭಕ್ತರಿಗೆ ರಾತ್ರಿ ಮಹಾಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.ಮೇ ೨೧ರಂದು ಬೆಳಗ್ಗೆ ೮.೩೦ರಿಂದ ಆದ್ಯ ಗಣಯಾಗ ಪಂಚವಿಂಶತಿ ಕಲಶ ಪ್ರಧಾನ ಯಾಗ, ಕಲಶಾಭಿಷೇಕ, ಶ್ರೀ ಚಂಡಿಕಾ ಯಾಗ ಮಹಾಪೂಜೆಗಳು ನಡೆಯಲಿವೆ. ಸಂಜೆ ೫ ರಿಂದ ಶ್ರೀ ನಾಗದೇವತೆಯರಿಗೆ ನಾಗತನು ತರ್ಪಣ, ಆಶ್ಲೇಷ ಬಲಿಪೂಜಾ ಇತ್ಯಾದಿಗಳು ನಡೆಯಲಿದೆ ಎಂದು ಹೇಳಿದರು.
- - - -೧೫ಎಚ್ಆರ್ಆರ್೨: