ಕಾರವಾರ: ಪ್ರಸಿದ್ಧ ದ್ವಿ ಹಸ್ತ ನರಸಿಂಹ ಕ್ಷೇತ್ರವಾಗಿರುವ ತಾಲೂಕಿನ ಸಿದ್ದರದ ಶ್ರೀ ನರಸಿಂಹ ದೇವಸ್ಥಾನದಲ್ಲಿ ಮೇ 21ರಂದು ಶ್ರೀ ನರಸಿಂಹ ಜಯಂತಿ ಉತ್ಸವ ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ 1.30ರಿಂದ 3.30ರ ವರೆಗೆ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದ್ದು, ಶ್ರೀ ಕ್ಷೇತ್ರ ಸಿದ್ದರ ಗ್ರಾಮದಲ್ಲಿ ನಡೆಯಲಿರುವ ನರಸಿಂಹ ದೇವರ ಪಲ್ಲಕ್ಕಿ ಉತ್ಸವಕ್ಕೆ ಸಂಜೆ 4.30ಕ್ಕೆ ನರಸಿಂಹ ದೇವಸ್ಥಾನದಲ್ಲಿ ಚಾಲನೆ ಸಿಗಲಿದೆ. ಸಂಜೆ 5.30ಕ್ಕೆ ದೇವಸ್ಥಾನದಲ್ಲಿ ನಾಮಸಂಕೀರ್ತನೆ ನಡೆಯಲಿದ್ದು, ರಾತ್ರಿ 8.30ಕ್ಕೆ ಆಲಯಕ್ಕೆ ಉತ್ಸವದ ಆಗಮನದ ಆನಂತರ, ಅಷ್ಟಾವಧಾನ ಸೇವೆ, ಮಹಾಪೂಜೆ, ಸಾರ್ವಜನಿಕ ಪ್ರಾರ್ಥನೆ ಪ್ರಸಾದ (ಪಾನಕ, ಪಚಡಿ) ವಿತರಣೆಯಾಗಲಿದೆ. ಅಂದು ರಾತ್ರಿ 10.30ಕ್ಕೆ ಶ್ರೀ ನರಸಿಂಹ ವೇದಿಕೆಯಲ್ಲಿನ ನಾಡಿನ ಹೆಸರಾಂತ ಕೊಂಕಣಿ ರಂಗ ತಂಡ ʻಸಾಕಾರ ನಾಟಕ ಸಂಘʼದವರಿಂದ ʻಆಜಾ ಸಾವಧಾನ... ಬಾಬ್ ವಿಶ್ರಾಮ.. " ಎನ್ನುವ ಹಾಸ್ಯಮಯ ತತ್ವಾಧಾರಿತ ನಾಟಕದ ಪ್ರದರ್ಶನ ನಡೆಯಲಿದೆ.
ನರಸಿಂಹ ದೇವಸ್ಥಾನದಲ್ಲಿ ನಡೆಯುವ ನರಸಿಂಹ ಜಯಂತಿಯ ಸಂದರ್ಭದಲ್ಲಿ ನಡೆಯುವ ಹೋಮದ ಅಧ್ವರ್ಯಕ್ಕೆ (ಯಜಮಾನಿಕೆಗೆ) ಹಾಗೂ ಶ್ರೀ ದೇವರಿಗೆ ಅಭಿಷೇಕ ಮಾಡಿಸುವುದಕ್ಕೆ ಭಕ್ತರಿಗೆ, ಕುಳಾವಿಗಳಿಗೆ ಹಾಗೂ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಶ್ರೀ ದತ್ತಾತ್ರೇಯ ಗಾಂವಕರ 9481914922, ಶ್ರೀ ರಾಜೇಂದ್ರ ರಾಣೆ 9448408643, ಶ್ರೀನಾಥ ಜೋಶಿ 9060188081 ಇವರನ್ನು ಸಂಪರ್ಕಿಸಬಹುದಾಗಿದೆ.ಈ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.